K. S. Eshwarappa | ಸಚಿವನಾಗಲು ನಾನು ಸಿದ್ಧನಿದ್ದೇನೆ
ಶಿವಮೊಗ್ಗ : ಸಚಿವನಾಗಲು ನಾನು ಸಿದ್ಧನಿದ್ದೇನೆ, ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಸಿಎಂ, ರಾಜ್ಯಾಧ್ಯಕ್ಷರು, ಬಿಎಸ್ ವೈ ಮಾತು ಕೊಟ್ಟಿದ್ರು. ಯಾಕೆ ಕೊಟ್ಟಿಲ್ಲ ಅವರನ್ನೇ ಕೇಳಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಚಿವನಾಗಲು ನಾನು ಸಿದ್ಧನಿದ್ದೇನೆ, ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು.
ಸಿಎಂ, ರಾಜ್ಯಾಧ್ಯಕ್ಷರು, ಬಿಎಸ್ ವೈ ಮಾತು ಕೊಟ್ಟಿದ್ರು. ಯಾಕೆ ಕೊಟ್ಟಿಲ್ಲ ಅವರನ್ನೇ ಕೇಳಬೇಕು.
ಅದಕ್ಕಾಗಿ ಯಾರನ್ನೂ ಸಂಪರ್ಕಿಸಿಲ್ಲ, ಸಂಪರ್ಕಿಸುವುದೂ ಇಲ್ಲ. ಯಾಕೆ ಮಂತ್ರಿ ಸ್ಥಾನ ನೀಡಿಲ್ಲ ಅವರಿಗೇ ಗೊತ್ತು ಎಂದು ಹೇಳಿದರು.
![K. S. Eshwarappa I am ready to become a minister saaksha tv](http://saakshatv.com/wp-content/uploads/2022/08/k-s-eshwarappa.jpg)
ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಲಿ, ನಾನು ಸಚಿವನಾಗಲು ಸಿದ್ಧನಿದ್ದೇನೆ. ಸಚಿವಗಿರಿ ನೀಡಿಲ್ಲ ಅಂತ ಸಂಘಟನೆಗೆ ತೊಂದರೆ ಮಾಡಲ್ಲ. ರಾಜೀನಾಮೆಗೂ ಸಂಘಟನೆಗೂ ಸಂಬಂಧವಿಲ್ಲ.
ಹಿಂದುಳಿದ ವರ್ಗದ ಮತವನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡಲಿದ್ದೇನೆ.
ಆರೋಪ ಮುಕ್ತನಾಗುತ್ತಿದ್ದಂತೆ ನನಗೆ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ, ನಳೀನ್ ಕುಮಾರ್ ಕಟೀಲ್ ಮತ್ತಿತರರು ಹೇಳಿದ್ದರು.
ಈಗ ಆರೋಪ ಮುಕ್ತನಾಗಿದ್ದೇನೆ. ಹಾಗಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ.
ಬಾಂಬೆ ಟೀಮ್ ಗೆ ಯಾವ ಭರವಸೆ ನೀಡಿದ್ದರೂ ನನಗೆ ಗೊತ್ತಿಲ್ಲ. ಆದರೆ ನಾನು ಮಾತ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದರು.