KALAGHATAGI ಇತ್ತಿಚಿನ ದಿನಮಾನದಲ್ಲಿ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಡುತ್ತಿದೆ. ಹಿರಿಯರಲ್ಲದೆ ಮಕ್ಕಳ ಆರೋಗ್ಯಕ್ಕು ಮಾರಕವಾಗಿದೆ. ಹೌದು ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ದತಿಯಿಂದಾಗಿ ಆರೋಗ್ಯದ ಗುಣಮಟ್ಟವು ಕುಠಿತವಾಗುತ್ತವೆ. ಇದಕ್ಕೆ ಪೂರಕದಂತೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಕಲಘಟಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿ ಮುಕ್ತುಂ ಮಹ್ಮದ್ ರಫಿ ಮನಿಯಾರ್ ಎಂಬ 13 ವರ್ಷದ ಬಾಲಕ ಮೃತ ದುರ್ದೈವಿಯಗಿದ್ದು . ಮುಕ್ತುಂ ಕಲಘಟಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಎಂದಿನಂತೆ ಮಕ್ತುಮ್ ಮಹ್ಮದ್ರಫಿ ಶಾಲೆಗೆ ಬಂದಿದ್ದ.
ಆದ್ರೆ ಶಾಲೆಯಲ್ಲಿ ಇದ್ದಕ್ಕೆ ಇದ್ದಾಹಾಗೆ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿಕ್ಷಕರು ಮುಕ್ತುಂ ಮಹ್ಮದ್ ರಫಿಯನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಉಸಿರುನಿಲ್ಲಿಸಿದ್ದಾನೆ. ಇನ್ನು ಕೆಲ ವರ್ಷಗಳಿಂದ ಮಕ್ತುಮ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದನು ಎಂದು ಹೇಳಲಾಗಿದೆ .