ಜಯ ಬಚ್ಚನ್ ಹೇಳಿಕೆಗೆ ಕಂಗನಾ ರಣಾವತ್ ಕಿಡಿ
ನವ ದೆಹಲಿ: ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿನ ಜಯ ಬಚ್ಚನ್ ಅವರ ಇತ್ತೀಚಿನ ಹೇಳಿಕೆಗೆ ಕಂಗನಾ ರಣಾವತ್ ಕಠಿಣ ಪ್ರಶ್ನೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಹಿರಿಯ ಬಾಲಿವುಡ್ ನಟಿ ಮತ್ತು ಸಂಸದೆ ಜಯಾ ಬಚ್ಚನ್ ಅವರು ಮನರಂಜನಾ ಉದ್ಯಮಕ್ಕೆ ರಕ್ಷಣೆ ಬೇಕಾಗಿದೆ. ಇಂದು ಚಿತ್ರರಂಗ ಮಾದಕ ವ್ಯಸನದಿಂದ ಕುಖ್ಯಾತಿಗೆ ಗುರಿಯಾಗಿದೆ ಮತ್ತು ಇಂದು ಇಡೀ ಉದ್ಯಮದ ಚಿತ್ರಣವನ್ನು ಕೆಲವರು ಕಳಂಕಿತಗೊಳಿಸುತ್ತಿದ್ದಾರೆ ಎಂದು ಹೇಳಿದ್ದರು.
ಜಯಾ ಬಚ್ಚನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಂಗನಾ, ಜಯಾ ಜಿ ನನ್ನ ಸ್ಥಾನದಲ್ಲಿ ನಿಮ್ಮ ಮಗಳು ಶ್ವೇತಾಳನ್ನು ಊಹಿಸಿಕೊಳ್ಳಿ, ಅವರು ಹದಿಹರೆಯದವರಾಗಿದ್ದು ಮಾದಕವಸ್ತುವಿನಿಂದ ಕಿರುಕುಳಕ್ಕೆ ಒಳಗಾಗಿದ್ದರೆ, ಅಥವಾ ಅಭಿಷೇಕ್ ನಿರಂತರವಾಗಿ ಬೆದರಿಸುವಿಕೆ ಮತ್ತು ಕಿರುಕುಳದ ಬಗ್ಗೆ ದೂರು ನೀಡಿದ್ದರೆ ಅಥವಾ ಒಂದು ದಿನ ನೇಣು ಬಿಗಿದಿರುವುದು ಕಂಡು ಬರುತ್ತಿದ್ದರೆ ನೀವು ಇದೇ ಮಾತನ್ನು ಹೇಳುತ್ತೀರಾ? ನಮಗೂ ಸಹಾನುಭೂತಿ ತೋರಿಸಿ ಎಂದಿದ್ದಾರೆ.
ಜಯ ಬಚ್ಚನ್ ರವಿ ಕಿಶನ್ ಅವರ ಹೆಸರು ಸೂಚಿಸದೆ , ನಿನ್ನೆ ಲೋಕಸಭೆಯ ನಮ್ಮ ಸದಸ್ಯರೊಬ್ಬರು ಚಿತ್ರೋದ್ಯಮದ ವಿರುದ್ಧ ಮಾತನಾಡಿದ್ದಕ್ಕೆ ನನಗೆ ನಾಚಿಕೆಯಾಗಿದೆ. ಅದು ನಾಚಿಕೆಗೇಡಿನ ವಿಚಾರ. ಮನರಂಜನಾ ಉದ್ಯಮದ ಜನರನ್ನು ಸಾಮಾಜಿಕ ಮಾಧ್ಯಮಗಳು ಕೆಟ್ಟದಾಗಿ ಬಿಂಬಿಸುತ್ತಿವೆ. ಉದ್ಯಮದಲ್ಲಿ ತಮ್ಮದೇ ಹೆಸರನ್ನು ಮಾಡಿರುವ ಜನರನ್ನು ಗಟಾರ ಎಂದು ಕರೆದಿದ್ದಾರೆ. ನಾನು ಸಂಪೂರ್ಣವಾಗಿ ಇದನ್ನು ಒಪ್ಪುವುದಿಲ್ಲ. ಅಂತಹ ಜನರಿಗೆ ಈ ರೀತಿಯ ಭಾಷೆಯನ್ನು ಬಳಸದಂತೆ ಸರ್ಕಾರ ಹೇಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪರೋಕ್ಷವಾಗಿ ಹೇಳಿದರು.
ಕೆಲವು ದಿನಗಳ ಹಿಂದೆ ಕಂಗನಾ ಭಾರತ ಚಿತ್ರೋದ್ಯಮ ಮಾದಕ ನಶೆಯಲ್ಲಿ ಮುಳುಗಿದೆ ಅನ್ನುವ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದರು.
Jaya ji would you say the same thing if in my place it was your daughter Shweta beaten, drugged and molested as a teenage, would you say the same thing if Abhieshek complained about bullying and harassment constantly and found hanging one day? Show compassion for us also 🙏 https://t.co/gazngMu2bA
— Kangana Ranaut (@KanganaTeam) September 15, 2020