ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಅವರು ತಮ್ಮ ಹೊಸ ಸಿನೆಮಾದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಎಲ್ಲಿಗೆ ಪಯಣ ಯಾವುದೋ ದಾರಿ (ellige payana yavudo daari) ಸಿನೆಮಾ ಮೂಲಕ ಮತ್ತೆ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ.
ಮತ್ತೊಂದೆಡೆ ಈ ಚಿತ್ರ ಪೋಸ್ಟರ್ ಹಾಗೂ ಟೈಟಲ್ ಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.
ಇನ್ನೂ ಟೈಟಲ್ ನಿಂದಲೇ ಚಿತ್ರದ ನಿರೀಕ್ಷೆ ಹೆಚ್ಚಾಗಿದ್ದು, ಈಗಾಗಲೇ ಸಿನೆಮಾದ ಪೋಸ್ಟರ್ ಗಳು ಭಾರೀ ಸದ್ದು ಮಾಡ್ತಿವೆ.
ಇನ್ನು ಹೊಸ ಸಿನಿಮಾ ವಿಷಯಗಳನ್ನು ಇಲ್ಲಿ ಓದಿ
ಚಿತ್ರದಲ್ಲಿ ಅಭಿಮನ್ಯು ಕಾಶಿನಾಥ್ , ಸ್ಪೋರ್ತಿ ಉದಿಮಣಿ, ವಿಜಯಶ್ರೀ ಕಲಬುರ್ಗಿ, ಬಾಲರಾಜ್ ವಾದಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ಚಿತ್ರಕ್ಕೆ ಕಿರಣ್ ಸೂರ್ಯ ಆಕ್ಷನ್ ಕಟ್ ಹೇಳಿದ್ದು, ಸುದರ್ಶನ ಆರ್ಟ್ಸ್ ಬ್ಯಾನರ್ ಅಡಿ ಚಿತ್ರ ಮೂಡಿ ಬರುತ್ತಿದೆ.
ಇನ್ನೂ ಈಗಾಗಲೇ ಅರ್ಧ ಚಿತ್ರೀಕರಣ ಮುಗಿದಿದ್ದು, ಇನ್ನೂಳಿದ ಚಿತ್ರೀಕರಣವನ್ನು ಶೀಘ್ರದಲ್ಲೇ ಚಿಕ್ಕಮಗಳೂರಿನಲ್ಲು ನಡೆಸಲು ಚಿತ್ರತಂಡ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ.
ಇನ್ನೂ ಈ ಚಿತ್ರ ಅಭಿಮನ್ಯು ಕಾಶಿನಾಥ್ ಅವರ (ellige payana yavudo daari) ಕಮ್ಬ್ಯಾಕ್ ಚಿತ್ರವೇ ಎಂದು ಹೇಳಲಾಗುತ್ತಿದ್ದು.
ಚಿತ್ರದ ಪೋಸ್ಟರ್ ಗೆ ಈಗಾಗಲೇ ಸಿನಿಪ್ರಿಯರು ಫಿದಾ ಆಗಿದ್ದಾರೆ.
ಸ್ಟೋರಿ ಲೈನ್ ಪೋಸ್ಟರ್, ಟೈಟಲ್ ಚಿತ್ರದ ಕುರಿತು ಈಗಾಗಲೇ ದೊಡ್ಡ ಮಟ್ಟಿಗೆ ಕ್ರೇಜ್ ಕ್ರಿಯೇಟ್ ಮಾಡಿದೆ.
ಇನ್ನೂ ಚಿತ್ರದ ಮೇಕಿಂಗ್ ಚಿತ್ರಗಳು ಸಹ ಲಭ್ಯವಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.