ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಪಟ್ಟಿ ಹೀಗಿದೆ.
ಬೆಂಗಳೂರು : ಸಂಪುಟ ವಿಸ್ತರಣೆ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕೆಲ ಸಚಿವರ ಅಸಮಾಧಾನ ಮತ್ತು ಹಲವರ ಗೊಂದಲದಿಂದಾಗಿ ಮುಖ್ಯಮಂತ್ರಿಗಳು ಇಷ್ಟು ದಿನ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡದೇ ಇದ್ದರು. ಇದೀಗ ಸಂಪುಟ ವಿಸ್ತರಣೆ ಮತ್ತು ಬಜೆಟ್ ಹತ್ತಿರ ಬಂದಿರುವ ಕಾರಣದಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ.
ಪಟ್ಟಿ ಹೀಗಿದೆ
ಬೆಂಗಳೂರ ನಗರ – ಸಿಎಂ ಬೊಮ್ಮಾಯಿ
ಬೆಳಗಾವಿ – ಗೋವಿಂದ ಕಾರಜೋಳ
ಚಿಕ್ಕಮಗಳೂರು – ಈಶ್ವರಪ್ಪ
ಬಳ್ಳಾರಿ – ಶ್ರೀ ರಾಮುಲು
ಚಾಮರಾಜನಗರ – ವಿ ಸೋಮಣ್ಣ
ಉಡುಪಿ – ಅಂಗಾರ
ವಿಜಯಪುರ – ಉಮೇಶ್ ಕತ್ತಿ
ತುಮಕೂರು – ಆರಗ ಜ್ಞಾನೇಂದ್ರ
ರಾಮನಗರ – ಅಶ್ವಥ್ ನಾರಾಯಣ್
ಕೊಪ್ಪಳ – ಆನಂದ್ ಸಿಂಗ್
ಬಾಗಲಕೋಟೆ – ಸಿಸಿ ಪಾಟೀಲ್
ಉತ್ತರ ಕನ್ನಡ – ಕೋಟ ಶ್ರೀನಿವಾಸ್ ಪೂಜಾರಿ
ಯಾದಗಿರಿ- ಪ್ರಭು ಚೌಹಾಣ್
ಕಲಬುರಗಿ – ಮುರುಗೇಶ್ ನಿರಾಣಿ
ಹಾವೇರಿ- ಶಿವರಾಮ್ ಹೆಬ್ಬಾರ್
ಮೈಸೂರು- ಸೋಮಶೇಖರ್
ಚಿತ್ರದುರ್ಗ ಮತ್ತು ಗದಗ – ಬಿಸಿ ಪಾಟೀಲ್
ದಾವಣಗೆರೆ- ಬೈರತಿ ಬಸವರಾಜ್
ವಿಜಯನಗರ- ಶಶಿಕಲಾ ಜೊಲ್ಲೆ
ಬೆಂ. ಗ್ರಾಮಾಂತರ- ಸುಧಾಕರ್
ಹಾಸನ, ಮಂಡ್ಯ- ಕೆ.ಗೋಪಾಲಯ್ಯ
ಶಿವಮೊಗ್ಗ- ನಾರಾಯಣ ಗೌಡ
ಚಿಕ್ಕಬಳ್ಳಾಪುರ-ಎಂಟಿಬಿ ನಾಗರಾಜ್
ಕೊಡಗು- ಬಿ.ಸಿ. ನಾಗೇಶ್
ಧಾರವಾಡ- ಹಾಲಪ್ಪ ಆಚಾರ್
ರಾಯಚೂರು, ಬೀದರ್, ಶಂಕರ್ ಪಾಟೀಲ್ ಮುನೇನಕೊಪ್ಪ
ಕೋಲಾರ- ಮುನಿರತ್ನ