ADVERTISEMENT
Monday, August 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Karnataka : ನವಭಾರತ ಸೇನಾ ಆರಂಭೋತ್ಸವದ ಅಧ್ಯಕ್ಷತೆ ವಹಿಸಿದ್ದ ಜೆಡಿಯು ಮಾಜಿ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ…

Namratha Rao by Namratha Rao
February 11, 2022
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

Karnataka : ನವಭಾರತ ಸೇನಾ ಆರಂಭೋತ್ಸವದ ಅಧ್ಯಕ್ಷತೆ ವಹಿಸಿದ್ದ ಜೆಡಿಯು ಮಾಜಿ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ…

ಬೆಂಗಳೂರು: ನಾನು ಒಂದು ರಾಜಕೀಯ ಪಕ್ಷದ ಮುಖ್ಯಸ್ಥನಾಗಿದ್ದುಕೊಂಡೂ ಇನ್ನೊಂದು ರಾಜಕೀಯ ಸಂಘಟನೆಯು ಆರಂಭೋತ್ಸವ ವೇದಿಕೆ ಹಂಚಿಕೊಂಡಿದ್ದೇನೆ. ನನ್ನ ಈ ತೀರ್ಮಾನಕ್ಕೆ ಈ ಸಂಘಟನೆಯ ಧ್ಯೇಯೋದ್ದೇಶಗಳೇ ಕಾರಣ ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಹಾಗೂ ಜೆಡಿಯು ಮಾಜಿ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ಹೇಳಿದರು.

Related posts

ದೇಶದ ಶೇ 80ರಷ್ಟು ಮಹಿಳೆಯರು ಕಿರುಕುಳದ ಸುಳಿಯಲ್ಲಿ: ಅಂಕಿ ಅಂಶಗಳ ಮೂಲಕ ಸಮಾಜದ ಕರಾಳ ಮುಖ ಅನಾವರಣಗೊಳಿಸಿದ ರಾಹುಲ್ ಗಾಂಧಿ

ದೇಶದ ಶೇ 80ರಷ್ಟು ಮಹಿಳೆಯರು ಕಿರುಕುಳದ ಸುಳಿಯಲ್ಲಿ: ಅಂಕಿ ಅಂಶಗಳ ಮೂಲಕ ಸಮಾಜದ ಕರಾಳ ಮುಖ ಅನಾವರಣಗೊಳಿಸಿದ ರಾಹುಲ್ ಗಾಂಧಿ

August 24, 2026
ಮೀಸಲಾತಿ ಎಂಬುದು ಭಿಕ್ಷೆಯಲ್ಲ ಅದು ಸಾಂವಿಧಾನಿಕ ಹಕ್ಕು: ಮೀಸಲಾತಿ ರದ್ದತಿ ಕೂಗಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಖಡಕ್ ಉತ್ತರ

ಮೀಸಲಾತಿ ಎಂಬುದು ಭಿಕ್ಷೆಯಲ್ಲ ಅದು ಸಾಂವಿಧಾನಿಕ ಹಕ್ಕು: ಮೀಸಲಾತಿ ರದ್ದತಿ ಕೂಗಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಖಡಕ್ ಉತ್ತರ

August 24, 2026

ಹಲವಾರು ರಾಜಕೀಯ ಸಂಘಟನೆಗಳು ವಿವಿಧ ಹುದ್ದೆಗಳಲ್ಲಿ ಅನುಭವ ಗಳಿಸಿರುವ ರುಕ್ಮಾಂಗದ ಅವರ ನೇತೃತ್ವದ ನವಭಾರತ ಸೇನಾ ಆರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಗೌಡರು ತಮ್ಮ ಈ ನಿರ್ಧಾರಕ್ಕೆ ಈ ಸಂಘಟನೆಯ ತತ್ವಾದರ್ಶ ಮತ್ತು ಧ್ಯೇಯೋದ್ದೇಶಗಳೇ ಕಾರಣ ಎಂದರು.

ಯಾವುದೇ ಪಕ್ಷದಲ್ಲಿ ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಅಧಿಕಾರ ಸಿಗುತ್ತದೆ. ಆದರೆ ಆತನ ಧ್ಯೇಯೋದ್ದೇಶಗಳ ಅನುಷ್ಠಾನಕ್ಕೆ ಅವಕಾಶ ಸಿಗುವುದಿಲ್ಲ ಎಂಬುದೇ ಅತ್ಯಂತ ವಿಷಾದದ ಸಂಗತಿ ಎಂದು ನಾಡಗೌಡರು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿ ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ಈಗಾಗಲೇ ಹಲವಾರು ಪಕ್ಷಗಳಿಂದ ತುಂಬಿ ತುಳುಕುತ್ತಿರುವ ಪ್ರಸಕ್ತ ರಾಜಕಾರಣ ಕ್ಷೇತ್ರಕ್ಕೆ ಇನ್ನೊಂದು ರಾಜಕೀಯ ಸಂಘಟನೆಯ ಅಗತ್ಯವಿದೆಯೇ ಎಂದು ಪ್ರಶ್ನಿಸುತ್ತ ಅವರ ಪ್ರಶ್ನೆಗೆ ಅವರೇ ಉತ್ತರವನ್ನೂ ಕೊಟ್ಟರು.
ಈ ರಾಜಕೀಯ ಸಂಘಟನೆ ಹಮ್ಮಿಕೊಂಡಿರುವ ಮಧ್ಯಮ, ಕೆಳ ಮಧ್ಯಮ ಮತ್ತು ಶೋಷಿತರ ಕಣ್ಣೀರೊರೆಸುವ ಧ್ಯೇಯೋದ್ದೇಶ ನನಗೆ ತುಂಬಾ ಮೆಚ್ಚುಗೆ ಯಾಯಿತು. ಹಾಗಾಗಿ ಈ ಸಂಘಟನೆಗೆ ನನ್ನ ಬೆಂಬಲ ನೀಡುತ್ತಿದ್ದೇನೆ ಎಂದರು.

ಹಲವಾರು ರಾಜಕೀಯ ಸಂಘಟನೆಗಳ ವಿವಿಧ ಹುದ್ದೆಗಳಲ್ಲಿ ಅಪಾರ ಅನುಭವ ಗಳಿಸಿದ ರುಕ್ಮಾಂಗದ ಅವರು ಆ ಪಕ್ಷಗಳಲ್ಲಿ ತಮ್ಮ ಕನಸು ಸಾಕಾರವಾಗದಿದ್ದಾಗ ಅಲ್ಲಿಂದ ಹೊರಬಿದ್ದು ತಮ್ಮ ಧ್ಯೇಯೋದ್ದೇಶಗಳ ಸಾಕಾರಕ್ಕೆ ತಮ್ಮ ಬೆಂಬಲಿಗರೊಂದಿಗೆ “ನವಭಾರತ ಸೇನಾ ” ಎಂಬ ನೂತನ ಸಂಘಟನೆ ಯೊಂದನ್ನು ಆರಂಭಿಸಿದ್ದಾರೆ.

ರುಕ್ಮಾಂಗದ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಈ ಸೇನೆಯ ರೂಪು ರೇಷೆಗಳನ್ನು ವಿವರಿಸುತ್ತಾ ಮಧ್ಯಮ, ಕೆಳಮಧ್ಯಮ ಮತ್ತು ಶೋಷಿತರ ವರ್ಗಗಳ ದನಿ ಯಾಗುವುದೇ ಸಂಘಟನೆಯ ಮುಖ್ಯ ಉದ್ದೇಶ ಎಂದರು.
ಯಾವುದೇ ಜಾತಿ, ಮತ, ಕೋಮುಗಳ ಓಲೈಕೆಯಿಲ್ಲದ ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಅವರ ತತ್ವಾದರ್ಶಗಳೇ ನಮ್ಮ ಬೀಜಮಂತ್ರ ಎಂದರು.
ನಮಗೆ ಅಧಿಕಾರ ಬೇಡ. ನಮ್ಮ ಕಾರ್ಯಕರ್ತರೇ ನಮ್ಮ ಮಾರ್ಗಪ್ರವರ್ತಕರು ಎಂದು ವಿವರಿಸಿದರು.

Hijab Controvercy : ಧೈರ್ಯ ಇದ್ದರೆ ಹೋಗಿ ಬುರ್ಖಾ ಧರಿಸಿದೇ ಅಫ್ಗಾನಿಸ್ತಾನದಲ್ಲಿ ಓಡಾಡಿ : ಕಂಗನಾ

ಈ ಸಂಘಟನೆ ಹೋಬಳಿ ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೂ ವ್ಯಾಪಿಸಲಿದ್ದು ಈಗಾಗಲೇ ಒಂಬತ್ತು ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ ಎಂದೂ ರುಕ್ಮಾಂಗದ ಹೇಳಿದರು.

ಸಮಾರಂಭದಲ್ಲಿ ಗೋಡವಾಡ್ ಭವನದ ಕಾರ್ಯದರ್ಶಿ ಕುಮಾರ್ ಪಾಲ್ ಸಿಸೋಡಿಯಾ, ಸಮಾಜ ಸೇವಕ ಕೆ.ಪಿ.ಪಾಟೀಲ್, ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ರವಿ ರೇಡ್ಕರ್, ಚಲನಚಿತ್ರ ನಟ ರಾಜಶೇಖರ್, ಕೋಲಾರ ಜಿಲ್ಲಾ ಹಿಂದು ಪರಿಷತ್ ಅಧ್ಯಕ್ಷ ನಾರಾಯಣ ಸ್ವಾಮಿ, ನ್ಯಾಯವಾದಿ ಸಂದರ್ಶಿಣಿ ಡಿ.ಕೆ. ಉಪಸ್ಥಿತರಿದ್ದು ಸಂಘಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದರು.

ಶಿಶಿರ ಸಂಗೀತ ಶಾಲೆಯ ಸ್ಥಾಪಕ,ಚಿತ್ರ ಸಂಗೀತರಚನೆ ಕಾರ, ಧಾರಾವಾಹಿ ನಿರ್ಮಾಪಕ ಜೆಮ್ ಶಿವು ಅವರು ಸಂಘಟನೆಯ ಧ್ಯೇಯೋದ್ದೇಶ ಕುರಿತು ಮೂರು ಹಾಡುಗಳನ್ನು ರಚಿಸಿದ್ದು ಒಂದು ಹಾಡನ್ನು ಹಾಡಿದರು.
ಸಮಾರಂಭದಲ್ಲಿ ವಿವಿಧ ವಾರ್ಡುಗಳ ಸಂಚಾಲಕರ ನೇಮಕ ಪ್ರಕಟಿಸಿ ಧ್ವಜ ನೀಡಲಾಯಿತು.
ಶೋಭಾ ರಾಣಿಯವರು ಮಹಿಳಾ ಘಟಕದ ಸಂಚಾಲಕರಾಗಿದ್ದಾರೆ.
ಸಂಘಟನೆಯ ಮಾಧ್ಯಮ ಸಲಹೆಗಾರ ದತ್ತಾತ್ರೇಯ ಹೆಗಡೆ ಸ್ವಾಗತಿಸಿದರು. ಉಮಾ ಅವರು ಕಾರ್ಯಕ್ರಮ ನಿರೂಪಿಸಿದರು.

Tags: #saakshatvbengaluruJdukarnatakapolitics
ShareTweetSendShare
Join us on:

Related Posts

ದೇಶದ ಶೇ 80ರಷ್ಟು ಮಹಿಳೆಯರು ಕಿರುಕುಳದ ಸುಳಿಯಲ್ಲಿ: ಅಂಕಿ ಅಂಶಗಳ ಮೂಲಕ ಸಮಾಜದ ಕರಾಳ ಮುಖ ಅನಾವರಣಗೊಳಿಸಿದ ರಾಹುಲ್ ಗಾಂಧಿ

ದೇಶದ ಶೇ 80ರಷ್ಟು ಮಹಿಳೆಯರು ಕಿರುಕುಳದ ಸುಳಿಯಲ್ಲಿ: ಅಂಕಿ ಅಂಶಗಳ ಮೂಲಕ ಸಮಾಜದ ಕರಾಳ ಮುಖ ಅನಾವರಣಗೊಳಿಸಿದ ರಾಹುಲ್ ಗಾಂಧಿ

by Shwetha
August 24, 2026
0

ಪುಣೆ: ದೇಶದ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆತಂಕಕಾರಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ....

ಮೀಸಲಾತಿ ಎಂಬುದು ಭಿಕ್ಷೆಯಲ್ಲ ಅದು ಸಾಂವಿಧಾನಿಕ ಹಕ್ಕು: ಮೀಸಲಾತಿ ರದ್ದತಿ ಕೂಗಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಖಡಕ್ ಉತ್ತರ

ಮೀಸಲಾತಿ ಎಂಬುದು ಭಿಕ್ಷೆಯಲ್ಲ ಅದು ಸಾಂವಿಧಾನಿಕ ಹಕ್ಕು: ಮೀಸಲಾತಿ ರದ್ದತಿ ಕೂಗಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಖಡಕ್ ಉತ್ತರ

by Shwetha
August 24, 2026
0

ನವದೆಹಲಿ: ದೇಶದಲ್ಲಿ ಮೀಸಲಾತಿ ಕುರಿತಾದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮೀಸಲಾತಿ ಪರವಾಗಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಯಾರ ಒತ್ತಾಯಕ್ಕೂ...

ಗಾರ್ಡನ್ ಸಿಟಿ ಬೆಂಗಳೂರಿನ ಉಸಿರು ನಿಲ್ಲಿಸಬೇಡಿ: ಪಾರ್ಕ್ ಗಳು ನಿಮ್ಮ ಖಾಸಗಿ ಆಸ್ತಿಯಲ್ಲ-ಉದ್ಯಾನವನಗಳ ಶೇ 5ರಷ್ಟು ಜಾಗದ ಸರ್ಕಾರದ ಬಳಕೆಗೆ ತೇಜಸ್ವಿ ಸೂರ್ಯ ಬ್ರೇಕ್

ಗಾರ್ಡನ್ ಸಿಟಿ ಬೆಂಗಳೂರಿನ ಉಸಿರು ನಿಲ್ಲಿಸಬೇಡಿ: ಪಾರ್ಕ್ ಗಳು ನಿಮ್ಮ ಖಾಸಗಿ ಆಸ್ತಿಯಲ್ಲ-ಉದ್ಯಾನವನಗಳ ಶೇ 5ರಷ್ಟು ಜಾಗದ ಸರ್ಕಾರದ ಬಳಕೆಗೆ ತೇಜಸ್ವಿ ಸೂರ್ಯ ಬ್ರೇಕ್

by Shwetha
August 24, 2026
0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಉದ್ಯಾನವನಗಳ ಶೇಕಡಾ 5ರಷ್ಟು ಜಾಗವನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳುವ ರಾಜ್ಯ ಸರ್ಕಾರದ ತೀರ್ಮಾನ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವು...

ರಾಹುಲ್ ಗಾಂಧಿ ಪುಣೆ ಸಂವಾದ ಒಂದು ರಾಜಕೀಯ ಕಾಮಿಡಿ ಶೋ: ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನಾಟಕವಾಡುತ್ತಿದೆ ಕಾಂಗ್ರೆಸ್-ಬಿಜೆಪಿ ನಾಯಕ ಕೇಶವ್ ಉಪಾಧ್ಯೆ ವ್ಯಂಗ್ಯ

ರಾಹುಲ್ ಗಾಂಧಿ ಪುಣೆ ಸಂವಾದ ಒಂದು ರಾಜಕೀಯ ಕಾಮಿಡಿ ಶೋ: ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನಾಟಕವಾಡುತ್ತಿದೆ ಕಾಂಗ್ರೆಸ್-ಬಿಜೆಪಿ ನಾಯಕ ಕೇಶವ್ ಉಪಾಧ್ಯೆ ವ್ಯಂಗ್ಯ

by Shwetha
August 24, 2026
0

ಮುಂಬೈ: ಪುಣೆಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಇದೊಂದು ರಾಜಕೀಯ ಕಾಮಿಡಿ ಶೋ ಎಂದು...

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

by Shwetha
August 24, 2026
0

ಬಾಗಲಕೋಟೆ: ರಾಜ್ಯದಲ್ಲಿ ಸಕ್ಕರೆ ಬೆಲೆ ಏರಿಕೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಬೆಲೆ ಏರಿಕೆಯನ್ನು ವಿಭಿನ್ನವಾಗಿ ಸಮರ್ಥಿಸಿಕೊಂಡಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram