ಅರ್ಧ ಅರ್ಧ ಲಾಕ್ ಡೌನ್ ಮಾಡಿದರೆ ಪ್ರಯೋಜನ ಏನು : ವಿಶ್ವನಾಥ್
ಮೈಸೂರು : ಮುಖ್ಯಮಂತ್ರಿ ಘೋಷಣೆ ಮಾಡಿರುವುದು ಸಂಪೂರ್ಣ ಲಾಕ್ ಡೌನ್ ಅಲ್ಲ, ಹಾಫ್ ಲಾಕ್ ಡೌನ್. ಎಲ್ಲವನ್ನು ಅರ್ಧ ಅರ್ಧ ಲಾಕ್ ಡೌನ್ ಮಾಡಿದರೆ ಏನು ಪ್ರಯೋಜನವಿಲ್ಲ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿರುವುದು ಸಂಪೂರ್ಣ ಲಾಕ್ ಡೌನ್ ಅಲ್ಲ, ಹಾಫ್ ಲಾಕ್ ಡೌನ್.
ಕೂಡಲೇ ಸರ್ಕಾರ ಸಂಪೂರ್ಣ ಲಾಕ್ ಡೌನ್ ಮಾಡಲು ಮರು ವಿಮರ್ಶೆ ಮಾಡಬೇಕು. ಈ ಲಾಕ್ ಡೌನ್ ಸರಿಯಿಲ್ಲ. ಇದೊಂದು ಕಫ್ರ್ಯೂ ತರ. ಅಂದರೆ ಹಾಫ್ ಲಾಕ್ಡೌನ್. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟರು.
ಇನ್ನು ಬೆಳಗ್ಗೆ 6 ರಿಂದ 10 ಗಂಟೆವರೆಗೆ ಲಿಕ್ಕರ್ ಶಾಪ್, ಹೋಟೆಲ್, ಮಾರುಕಟ್ಟೆ ತೆರೆದಿರುತ್ತವೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ತಳ್ಳುವ ಗಾಡಿಯವರು ತರಕಾರಿ ವ್ಯಾಪಾರ ಮಾಡಬಹುದು.
ಈ ರೀತಿ ಎಲ್ಲವನ್ನು ಅರ್ಧ ಅರ್ಧ ಲಾಕ್ ಡೌನ್ ಮಾಡಿದರೆ ಏನು ಪ್ರಯೋಜನವಿಲ್ಲ. ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಕೊಟ್ಟು ಸಂಪೂರ್ಣವಾಗಿ 15 ದಿನ ಲಾಕ್ ಡೌನ್ ಮಾಡಿ. ಇಲ್ಲದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.