KGF 3 ಸಿನಿಮಾದಲ್ಲಿ ಯಶ್ ಬದಲಿಗೆ ಮತ್ತೊಬ್ಬ ಹೀರೋ ಎಂಟ್ರಿ
ಕೆಜಿಎಫ್ ಎಂದ ಕೂಡಲೇ ಕಣ್ಣ ಮುಂದೆ ಬರೋದು ರಾಖಿಭಾಯ್ ಅವತಾರ.
ಸಲಾಂ ರಾಖಿಭಾಯ್ ಅನ್ನೋ ಕಟೌಟ್ ಕಾಣಿಸುತ್ತದೆ.
ಪ್ರಶಾಂತ್ ನೀಲ್ ಮೇಕಿಂಗ್, ಹೈ ವೋಲ್ಟೇಜ್ ಎಲಿವೇಷನ್ಸ್ ಕಾಣಸಿಗುತ್ತವೆ. ಕೆಜಿಎಫ್ ಹೆಸರಲ್ಲಿ ಬಂದ ಎರಡೂ ಸಿನಿಮಾಗಳನ್ನು ಸಿನಿಮಾ ಪ್ರೇಕ್ಷಕರು ಸೂಪರ್ ಡೂಪರ್ ಹಿಟ್ ಮಾಡಿದ್ದಾರೆ.
ಇದೇ ಜೋಷ್ ನಲ್ಲಿ ಪ್ರತಾಂಶ್ ನೀಲ್, ನಟ ಯಶ್ ಮೂರನೇ ಭಾಗ ಮಾಡುವುದಾಗಿ ತಿಳಿಸಿದ್ದಾರೆ.
ಆದ್ರೆ ಪಾರ್ಟ್ 3 ಯಲ್ಲಿ ಯಶ್ ಬದಲಿಗೆ ಹೀರೋ ಚಿಯಾನ್ ವಿಕ್ರಮ್ ಎಂಟ್ರಿ ಕೊಡಲಿದ್ದಾರಂತೆ.
ಇತ್ತೀಚೆಗೆ ತಮಿಳು ನಿರ್ದೇಶಕ ಪಾ ರಂಜಿತ್ ಜೊತೆಗೆ ವಿಕ್ರಂ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ.
ತ್ರಿಡಿ ಫಾರ್ಮೆಟ್ ನಲ್ಲಿ ಭಾರಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದೆಯಂತೆ.
1800 ರಲ್ಲಿ ದಲಿತರ ಮೇಲೆ ನಡೆದ ಕೆಲವು ಘಟನೆಗಳ ಆಧಾರವಾಗಿ ಈ ಸಿನಿಮಾ ತೆರೆಕಾಣಲಿದೆಯಂತೆ.
ಹಾಗಾದ್ರೆ ಈ ಸಿನಿಮಾಗೂ ಕೆಜಿಎಫ್ ಸಿನಿಮಾಗೂ ಏನು ಸಂಬಂಧ ಅಂತೀರಾ.. ಮುಂದೆ ಓದಿ..
ಇಂಡಿಪೆನ್ಡೆನ್ಸ್ ಗೂ ಮೊದಲು ನರಾಚಿಯಲ್ಲಿ ಜರುಗಿದ ಅರಾಚಕತೆಯ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ ಎಂದು ಹೇಳಲಾಗುತ್ತಿದೆ.
ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕೆಜಿಎಫ್ ನಲ್ಲಿ ಏನು ನಡೀತು ಅಂತಾ ಪ್ರಶಾಂತ್ ನೀಲ್ ತೋರಿಸಿದ್ದಾರೆ.
ಇದೀಗ ಸ್ವತಂತ್ರ್ಯಕ್ಕೂ ಮುನ್ನಾ ಕೆಜಿಎಫ್ ನಲ್ಲಿ ಏನು ನಡೀತು ಅಂತಾ ಪಾ ರಂಜಿತ್ ತೋರಿಸಿಕೊಡಲಿದ್ದಾರೆ.