ದಾವಣಗೆರೆ: ಹೆದ್ದಾರಿಯಲ್ಲಿ ದರೋಡೆ ನಡೆಸುತ್ತಿದ್ದ ಖದೀಮರ ಹೆಡೆಮೂರಿಯನ್ನು ಪೊಲೀಸರು ಕಟ್ಟಿದ್ದಾರೆ.
ಡಿಸಿಆರ್ ಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಐವರನ್ನು ಬಂಧಿಸಿದ್ದಾರೆ. ತಾಲೂಕಿನ ಆನಗೋಡ ಹತ್ತಿರದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದ ವಾಹನ ತಡೆದು ಚಾಕು ತೋರಿಸಿ ಹಲ್ಲೆ ನಡೆಸಿ, ಹಣ ದೋಚುತ್ತಿದ್ದರು ಎನ್ನಲಾಗಿದೆ. ಹಾಗೆಯೇ ತುಮಕೂರು ಜಿಲ್ಲೆಯ ಮೂಲದ ಮಾದಿಹಳ್ಳಿ ಸುರೇಶ್ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಚಾಕು ತೊರಿಸಿ ಹಲ್ಲೆ ನಡೆಸಿ 15 ಸಾವಿರ ರೂ. ಹಾಗೂ ಮೊಬೈಲ್ ಕರಿದು ಪರಾರಿಯಾಗಿದ್ದರು ಎನ್ನಲಾಗಿದೆ.
ಕುಮಾರ ಬಿ (26), ಮಂಜುನಾಥ ಯು ಎಸ್ (24), ಪ್ರವೀಣಕುಮಾರ ಎಬಿ (22), ಪರಶುರಾಮ್ (20) ಹಾಗೂ ಶಿವಕುಮಾರ ಡಿ (21) ಬಂಧಿತ ಆರೋಪಿಗಳು ಎನ್ನಲಾಗಿದೆ. ಇವರೆಲ್ಲ ಸುತ್ತಮುತ್ತಲಿನ ಊರಿನವರು. ರಾತ್ರಿಯಾಗುತ್ತಿದ್ದಂತೆ ದರೋಡೆಗೆ ಒಂದಾಗುತ್ತಿದ್ದರು. ಆರೋಪಿಗಳಿಂದ ಒಂದು ಆಟೋ, ಮೊಬೈಲ್ ಹಾಗೂ ಹಣ ವಶಕ್ಕೆ ಪಡೆಯಲಾಗಿದ್ದು, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.