ಬೆಂಗಳೂರು: ದೆಹಲಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲ, ಉಗ್ರರು ಎಂದಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಫ್ರೀಡಂಪಾರ್ಕ್ನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರೈತರ ಹೋರಾಟದ ಹಿಂದೆ ಪಾಕಿಸ್ತಾನಿಗಳು, ಖಲಿಸ್ತಾನಿಗಳು, ನಕ್ಸಲರು ಇದ್ದಾರೆ ಎನ್ನುತ್ತಿದ್ದಾರೆ. ಅನ್ನ ತಿನ್ನೋರು ಹೇಳೋ ಮಾತಾ ಇದು. ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇವೆ. ನಿಮಗೆ ಈ ದುರಹಂಕಾರ ಬರಲು ನಾವೆ ಕಾರಣ ಎಂದು ತಿರುಗೇಟು ನೀಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್. ಇದು ರೈತರ ಪ್ರತಿಭಟನೆಯಲ್ಲ, ಬದಲಿಗೆ ಭಯೋತ್ಪಾದಕರ ಕೃತ್ಯ, ಇದರ ಹಿಂದೆ ಖಲಿಸ್ತಾನಿಗಳು, ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ್ದರು.
ರೈತ ಹೋರಾಟಗಾರರು ಸ್ವಾಭಿಮಾನಿಗಳು, ಆದರೆ, ಕೆಲ ಬಿಜೆಪಿ ನಾಯಕರು ರೈತರನ್ನು ಭಯೋತ್ಪಾದಕರಿಗೆ ಹೋಲಿಸುತ್ತಿದ್ದಾರೆ. ನಿಮಗೆ ದುರಹಂಕಾರ ಬರಲು ರೈತರೇ ಕಾರಣ, ಹೊತ್ತು ಬಿತ್ತು ನಿಮಗೆ ಅನ್ನ ಹಾಕಿದ್ದೀವಲ್ಲಾ ? ಅದಕ್ಕೆ ನಮ್ಮದೇ ಅನ್ನ ತಿಂದು ನಮ್ಮನ್ನೇ ಭಯೋತ್ಪಾದಕರು ಎಂದು ಹೀಯಾಳಿಸುತ್ತಿದ್ದೀರಾ ? ಎಂದು ಕೋಡಿಹಳ್ಳಿ ಪ್ರಶ್ನಿಸಿದ್ದಾರೆ.
ನಿಮಗೆ ಭಾರಿ ಬಹುಮತ ಕೊಟ್ಟೆವು. ಈ ಹಿಂದೆ ಇಂದಿರಾಗಾಂಧಿಗೂ ಹೀಗೆ ಬಹುಮತ ಕೊಟ್ಟು ಎಮರ್ಜೆನ್ಸಿ ಹೇರಿಸಿಕೊಂಡೆವು. ಈಗ ನರೇಂದ್ರ ಮೋದಿ ಅಹಂಕಾರಕ್ಕೂ ಇದೇ ಕಾರಣ. `ಮನ್ ಕಿ ಬಾತ್ ನಲ್ಲಿ ಎಂದಾದರೂ ರೈತರ ಬಗ್ಗೆ ಮಾತನಾಡಿದ್ದೀಯಾ..ಈ ಸರ್ವಾಧಿಕಾರಿ ಧೋರಣೆ, ಸರ್ವಾಧಿಕಾರತ್ವ ಧೋರಣೆ ಹೆಚ್ಚು ದಿನ ನಡೆಯೋದಿಲ್ಲ ಮಿಸ್ಟರ್ ನರೇಂದ್ರ ಮೋದಿ’ ಎಂದು ಪ್ರಧಾನಿ ಮೋದಿ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಲಕ್ಷಾಂತರ ಟ್ರಾಕ್ಟರ್ ಗಳ ಮೂಲಕ ರೈತರು ದೆಹಲಿ ಪ್ರವೇಶ ಮಾಡಿದ್ದಾರೆ. 10ನೇ ಸುತ್ತು ಮಾತುಕತೆ ಮುಕ್ತಾಯವಾಗುವರೆಗೆ ಕಾಯ್ದೆಗಳನ್ನು ವಾಪಸ್ ತೆಗೆಯೋದು ಬಿಟ್ಟು ಬೇರೆ ಬೇಡಿಕೆಗಳೇನಿವೆ ಹೇಳಿ ಎಂಬುದು ಸರ್ಕಾರದ ವಾದವಾಗಿತ್ತು. ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಕಾಯ್ದೆಗಳ ತಾತ್ಕಾಲಿಕ ತಡೆ ಮಾಡಿತು. ಸುಪ್ರೀಂ ಕೋರ್ಟ್ಗೆ ಅಷ್ಟೇ ಅಧಿಕಾರ ಇರೋದು. ಹಾಗಾಗಿ ರೈತರು ಪ್ರತಿಭಟನೆ ಮುಂದುವರಿಸಿದ್ರು. ಸರ್ಕಾರ ಹನ್ಮೊಂದನೆ ಸುತ್ತಿನ ಮಾತುಕತೆ ವೇಳೆ ಕಾಯ್ದೆಗಳನ್ನು ಒಂದೂವರೆ ತಿಂಗಳು ಮುಂದೂಡುವ ಆಶ್ವಾಸನೆ ನೀಡಿತು. ಆದರೆ ರೈತರು ಒಪ್ಪಲಿಲ್ಲ. ಪರ್ಯಾಯ ಗಣರಾಜ್ಯೋತ್ಸವ ಪೆರೇಡ್ ಮಾಡಿದ್ರು ಎಂದು ವಿವರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel