ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಒಲ್ಲದ ಮನಸ್ಸಿನಿಂದಲೇ ಪ್ರೀತಿಯ ಟೆಸ್ಟ್ ಕ್ರಿಕೆಟ್‍ಗೆ ಕೊಹ್ಲಿ ಡಿವೋರ್ಸ್..!

Kohli divorces his beloved Test cricket out of a reluctant mind..!

Shwetha by Shwetha
May 14, 2025
in ಕ್ರಿಕೆಟ್, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ನಿನ್ನ ಹೆಸರು ಹೇಳಿದ ತಕ್ಷಣ… ನಿನ್ನ ಆಟದ ವೈಖರಿ ರಪ್ಪನೆ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತದೆ. ತಂಡದ ಗೆಲುವಿಗಾಗಿ ನೀನು ಹೋರಾಡುವ ರೀತಿಯಂತೂ ರೋಮಾಂಚನಗೊಳಿಸುತ್ತದೆ.

ಅದು ಶತಕದ ಸಂಭ್ರಮವೇ ಆಗಿರಲಿ, ಗೆಲುವಿನ ಖುಷಿಯೇ ಆಗಿರಲಿ..ಯಾವುದೇ ದಾಖಲೆಗಳೇ ಆಗಿರಲಿ..ನೀನಾಡುವ ಪರಿ ಪುಳಕಗೊಳ್ಳುವಂತೆ ಮಾಡುತ್ತದೆ.
ಅಷ್ಟೇ ಯಾಕೆ ಸಹ ಆಟಗಾರರ ಅದ್ಭುತ ಸಾಧನೆಯನ್ನು ಮನಸಾರೆ ಆಸ್ವಾದಿಸುವ ಗುಣ ನಿನ್ನ ಮೇಲಿನ ಅಭಿಮಾನವನ್ನು ಇಮ್ಮಡಿಗೊಳಿಸುತ್ತದೆ.ಪ್ರತಿ ಪಂದ್ಯವನ್ನು ಜಿದ್ದಿಗೆ ಬಿದ್ದಂತೆ ಆಡುವುದನ್ನು ನೋಡಿದಾಗ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ.

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

ಏಟಿಗೆ ಏಟು..ಮಾತಿಗೆ ಮಾತು.. ಅಲ್ಲೆ ಡ್ರಾ ಅಲ್ಲೆ ಬಹುಮಾನ ಅನ್ನೋ ದಾದಾಗಿರಿಯ ಪ್ರವೃತ್ತಿ ಮೀತಿ ಮೀರುತ್ತಿದೆ ಎಂದು ಅನ್ನಿಸಿದ್ರೂ ಅದು ಇರಬೇಕು ಎಂದು ಅನ್ನಿಸುತ್ತಿದೆ.
ಟೀಮ್ ಇಂಡಿಯ ಟೆಸ್ಟ್ ತಂಡದ ಮನೋಭಾವನೆಯನ್ನೇ ಬದಲಾಯಿಸಿದ ಕ್ರಾಂತಿಕಾರಿ ನಾಯಕ ಎಂದು ಸಾರಿ ಸಾರಿ ಹೇಳಬೇಕಾಗುತ್ತದೆ.

ಸೂಜಿಗಲ್ಲಿನಂತೆ ಸೆಳೆಯುವ ನೋಟ..ಬೆಂಕಿಯಂತೆ ಕಾರುವ ದೃಷ್ಟಿ.. ದಿಟ್ಟ ಹೆಜ್ಜೆ…ಲಯಬದ್ಧವಾದ ಟೆಸ್ಟ್ ಕ್ರಿಕೆಟ್‍ನ ಶಾಸ್ತ್ರೀಯ ಆಟದ ಕಲೆ.. ಸೋಲಲೇ ಬಾರದು ಅನ್ನೋ ಹಠ..ಏಕಾಂಗಿಯಾಗಿ ಹೋರಾಟ ಮಾಡೋ ಛಲ..ತಂಡಕ್ಕಾಗಿ ಎಲ್ಲವನ್ನೂ ಸಮರ್ಪಣೆ ಮಾಡೋ ಪರಿಶ್ರಮ,ತ್ಯಾಗ..ಇದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ

ಕ್ರಿಕೆಟ್ ಆಟದಲ್ಲಿ ಪ್ರಬುದ್ಧನಾದ್ರೂ ಚಿಕ್ಕ ಮಕ್ಕಳಂತೆ ಅಂಗಣದಲ್ಲಿ ಹಾರಾಡುತ್ತಾ,, ಕುಣಿಯುತ್ತಾ..ಆಟ-ಚೆಲ್ಲಾಟವಾಡುತ್ತಾ..ಹೀಗೆ ನಾನಾ ಚೇಷ್ಠೆಗಳನ್ನು ಮಾಡುತಾ.್ತ ಸಹ ಆಟಗಾರರನ್ನು ಹುರಿದುಂಬಿಸುತ್ತಾ..ಆಟವನ್ನು ಸೃಜಿಸುತ್ತಾ.. ಅಭಿಮಾನಿಗಳನ್ನು ರಂಜಿಸುತ್ತಾ ನಿನ್ನ ತಾಳ ಮೇಳವನ್ನು ಮತ್ತೆ ನೋಡಬೇಕು ಎಂದು ಎನಿಸುತ್ತಿದೆ.
36ರ ಹರೆಯದಲ್ಲೂ ಫಿಟ್ ಆಂಡ್ ಫೈನ್ ಆಗಿರುವ ನೀನು ಇನ್ನೂ ಮೂರು ನಾಲ್ಕು ವರ್ಷ ಟೆಸ್ಟ್ ಮ್ಯಾಚ್ ಆಡಬೇಕು ಎಂದು ಮನಸು ಹೇಳುತ್ತದೆ. ಆದ್ರೆ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯ ಕಠಿಣ ನಿರ್ಧಾರ ತಗೊಂಡಿರುವುದು ಹೃದಯಕ್ಕೆ ವೇದನೆಯಾಗುತ್ತಿದೆ.

ನಿನಗೂ ಗೊತ್ತಿದೆ ಈ ನಿರ್ಧಾರ ನಿನಗಷ್ಟೇ ಅಲ್ಲ, ಖಂಡಿತವಾಗಿಯೂ ಅಭಿಮಾನಿಗಳಿಗೆ ಎಂದೆಂದಿಗೂ ನಿರಾಸೆಯಾಗುತ್ತದೆ. ಯಾಕಂದ್ರೆ ನಿನ್ನ ಕಟ್ಟ ಕಡೆಯ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಆಗಲಿಲ್ಲ ಅನ್ನೋ ಕೊರಗು ಕಾಡುತ್ತಿದೆ.

ಯುವ ಆಟಗಾರನಾಗಿ, ನಾಯಕನಾಗಿ, ಹಿರಿಯ ಆಟಗಾರನಾಗಿ ರೆಡ್ ಬಾಲ್ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾಗೆ ಐತಿಹಾಸಿಕ ಜಯ ದಾಖಲಿಸಿದ್ದ ನಿನ್ನನ್ನು ಮೈದಾನದಲ್ಲಿ ಮೆರವಣಿಗೆ ಮಾಡಿ ನಿನ್ನ ಟೆಸ್ಟ್ ಕ್ರಿಕೆಟ್ ಬದುಕನ್ನು ಅರ್ಥಪೂರ್ಣಗೊಳಿಸದ ಬಿಸಿಸಿಐ ಮೆಲೆ ಸಿಟ್ಟು, ಕೋಪ ಬರುತ್ತಿದೆ. ಅದು ಕೋಚ್ ಆಗಿರಲಿ, ಬಿಸಿಸಿಐ ಆಗಿರಲಿ ಅಥವಾ ಆಯ್ಕೆ ಸಮಿತಿಯೇ ಆಗಿರಲಿ.. ಒಬ್ಬ ಮಹಾ ಕ್ರಿಕೆಟಿಗನಿಗೆ ಅಪಮಾನ ಮಾಡಿದೆ.
ಹಾಗಂತ ಬಿಸಿಸಿಐಗೆ ಇದು ಹೊಸತು ಅಲ್ಲ.. ಹಳೆಯದ್ದು ಅಲ್ಲ..ಇದು ತಪ್ಪು – ಸರಿ ಅನ್ನೋ ವಾದ ಮಾಡೋ ಸಮಯ ಕೂಡ ಅಲ್ಲ. ಭವಿಷ್ಯದ ಟೀಮ್ ಇಂಡಿಯಾದ ಹಿತದೃಷ್ಟಿಯಿಂದ ಬಿಸಿಸಿಐನ ಕೆಲವೊಂದು ನಿರ್ಧಾರಗಳನ್ನು ಅರಗಿಸಿಕೊಳ್ಳಬೇಕಾಗುತ್ತದೆ

ಅದೇನೇ ಇರಲಿ, 14 ವರ್ಷಗಳ ಕಾಲ ರೆಡ್ ಬಾಲ್ ಕ್ರಿಕೆಟ್‍ನಲ್ಲಿ ರಸದೌತಣವನ್ನು ಉಣಬಡಿಸಿದ ಚೇಸಿಂಗ್ ಗಾಡ್ ವಿರಾಟ್ ಕೊಹ್ಲಿ ಇನ್ನು ಮುಂದೆ ಶ್ವೇತ ಬಣ್ಣದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಕೆಂಪು ಸುಂದರಿ ಕೊಹ್ಲಿಯ ಬ್ಯಾಟ್ ಅನ್ನು ಕೂಡ ಸ್ಪರ್ಶ ಕೂಡ ಮಾಡಲ್ಲ. ರೆಡ್ ಬ್ಯೂಟಿಗೆ ವಿರಾಟ್ ಒಲ್ಲದ ಮನಸ್ಸಿನಿಂದಲೇ ಡಿವೋರ್ಸ್ ನೀಡಿದ್ದಾರೆ.

ಸಚಿನ್ ತೆಂಡುಲ್ಕರ್ ಉತ್ತರಾಧಿಕಾರಿ ಎಂದೆ ಬಿಂಬಿತವಾಗಿದ್ದ ವಿರಾಟ್ ಕೊಹ್ಲಿ ಎಲ್ಲರ ನಿರೀಕ್ಷೆಗೂ ಮೀರಿ ಆ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ, ಸಚಿನ್‍ಗಿಂತಲೂ ಮೀರಿಸುವ ಆಟವನ್ನು ಆಡಿದ್ದಾರೆ

ಅಂದ ಹಾಗೇ, ಟೆಸ್ಟ್ ಕ್ರಿಕೆಟ್ ಅಂದ್ರೆ ಅದು ಹೊಡಿಬಡಿ ಆಟವಲ್ಲ.. ಅಲ್ಲಿ ತಾಳ್ಮೆ, ಏಕಾಗ್ರತೆ, ಪರಿಶ್ರಮದ ಜೊತೆಗೆ ತಾಂತ್ರಿಕ ಕೌಶಲ್ಯಗಳಿಗೆ ಹೆಚ್ಚಿನ ಆದ್ಯತೆ. ಈ ಎಲ್ಲಾ ಕಟ್ಟುಪಾಡುಗಳನ್ನು ಪಾಲಿಸಿಕೊಂಡು, ತನ್ನದೇ ಶೈಲಿಯಿಂದ ಆಕ್ರಮಣಕಾರಿ ಆಟವಾಡುತ್ತಾ ವಿಶ್ವಟೆಸ್ಟ್ ಕ್ರಿಕೆಟ್‍ನಲ್ಲಿ ಚರಿತ್ರೆ ಬರೆದ ಚೀಕೂಗೆ ತುಂಬು ಹೃದಯದ ಅಭಿನಂದನೆಗಳು.. ಕೃತಜ್ಜತೆಗಳು.. ಥ್ಯಾಂಕ್ಯೂ ವಿರಾಟ್ ಕೊಹ್ಲಿ.. ಟೆಸ್ಟ್ ಕ್ರಿಕೆಟ್ ಜಗತ್ತಿನಲ್ಲಿ ನೀನು ಮಾಡಿರೋ ಒಡ್ಡೋಲಗ.. ನಿನ್ನ ವಿರಾಟ ದರ್ಶನ ಎಂದೆಂದಿಗೂ ನೆನಪಿನಲ್ಲಿರುತ್ತೆ.. ಮುಂದೆ ಇದೆಯಲ್ವಾ ಏಕದಿನ ಕ್ರಿಕೆಟ್.. ಐಪಿಎಲ್..ಅಲ್ಲಿ ನಿನ್ನ ಆಟವನ್ನು ಇನ್ನಷ್ಟು ವರ್ಷಗಳ ಕಾಲ ನೋಡೋಣ..!

ಸನತ್ ರೈ

ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram