ಮುಂಬೈ : ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆ ಆಗಾಗ ಕೆಲ ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇದೀಗ ಈ ಸಾಲಿಗೆ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕೂಡ ಸೇರಿಕೊಂಡಿದ್ದಾರೆ.
ವಿರಾಟ್ ನಾಯಕತ್ವದ ಬಗ್ಗೆ ಕೈಫ್ ಹೇಳಿದ್ದೇನು.?
ವಿರಾಟ್ ಕೊಹ್ಲಿ ತಂಡದ ಆಟಗಾರರ ಮೇಲೆ ಹೆಚ್ಚು ವಿಶ್ವಾಸ ಹೊಂದಿಲ್ಲ, ಅವರು ಆಟಗಾರರನ್ನ ಬ್ಯಾಕ್ ಅಪ್ ಮಾಡುವುದಿಲ್ಲ, ತಂಡದ ಆಯ್ಕೆಯಲ್ಲಿ ಕೊಹ್ಲಿ, ಸಾಕಷ್ಟು ಪ್ರಯೋಗ ಮಾಡುತ್ತಾರೆ. ಈ ಹಿಂದೆ ಕೊಹ್ಲಿ ಸಾಕಷ್ಟು ಕಾಂಬಿನೇಷನ್ ಪ್ರಯೋಗ ಮಾಡಿದ್ದಾರೆ. ಸಾಮರ್ಥ್ಯ ಇಲ್ಲದ ಆಟಗಾರರನ್ನೂ ಕಳೆದ ವಿಶ್ವಕಪ್ ಗೆ ಆಯ್ಕೆ ಮಾಡಿಕೊಂಡಿದ್ದರು ಎಂದಿದ್ದಾರೆ ಕೈಫ್. ಅಲ್ಲದೆ ಕೊಹ್ಲಿ, ಉತ್ತಮ ನಾಯಕನಾಗಲು, ತಂಡದ ಆಟಗಾರರನ್ನ ಬೆಂಬಲಿಸಬೇಕು. ಒಂದು ವೇಳೆ, ಆಟಗಾರ ಫಾರ್ಮ್ ಕಳೆದುಕೊಂಡಿದ್ರೆ, ಆತನಿಗೆ ಸಪೋರ್ಟ್ ಮಾಡಬೇಕು. ಆಗಲೇ ವಿರಾಟ್ ಒಬ್ಬ ಉತ್ತಮ ನಾಯಕನಾಗಲು ಸಾಧ್ಯ ಎಂದು ಕೈಫ್ ಹೇಳಿದ್ದಾರೆ.
ಪಂತ್ ವಾಟರ್ ಬಾಯ್ ಅಲ್ಲ
ವಿಕೆಟ್ ಕೀಪರ್ ವಿಚಾರವಾಗಿಯೂ ಕೊಹ್ಲಿ ಬಗ್ಗೆ ಕೈಫ್ ಅಸಮಾಧಾನ ಹೊರಹಾಕಿದ್ದಾರೆ.
ವಿಕೆಟ್ ಕೀಪರ್ ಆಯ್ಕೆಯಲ್ಲೂ ಕೊಹ್ಲಿ ಸಾಕಷ್ಟು ಆಟಗಾರರನ್ನು ಬದಲಾಯಿಸಿದ್ದಾರೆ. ಧೋನಿ ಜಾಗಕ್ಕೆ ಎಂದು ಒಬ್ಬ ಪರ್ಮನೆಂಟ್ ವಿಕೆಟ್ ಕೀಪರ್ ಅಗತ್ಯವಿದೆ. ಕೆಎಲ್ ರಾಹುಲ್ ಬ್ಯಾಕಪ್ ವಿಕೆಟ್ ಕೀಪರ್ ಆಗಿದ್ದಾರೆ. ಆದರೆ, ಅವರನ್ನ ಪರ್ಮನೆಂಟ್ ವಿಕೆಟ್ ಕೀಪರ್ ಆಗಿ ನೋಡಲು ಸಾಧ್ಯವಿಲ್ಲ. ನೀವು ಧೋನಿ ಬಿಟ್ಟು ಪಂತ್ ಗೆ ಬೆಂಬಲ ನೀಡುವುದಾದರೆ, ಕೊಹ್ಲಿ ಪಂತ್ ಹಿಂದೆ ನಿಲ್ಲಬೇಕು. ಆತ ತಂಡದ ವಾಟರ್ ಬಾಯ್ ಅಲ್ಲ ಎಂದು ಕೈಫ್ ಹೇಳಿದ್ದಾರೆ.
ಇನ್ನು 2019 ವಿಶ್ವಕಪ್ ನಲ್ಲಿ ಅಂಬಾಟಿ ರಾಯುಡು ಅವರನ್ನು ತಂಡದಿಂದ ಕೈಬಿಟ್ಟು ವಿಜಯ್ ಶಂಕರ್ ರಿಗೆ ಅವಕಾಶ ನೀಡಿದ್ದು, ಫೈನಲ್ ಪಂದ್ಯದಲ್ಲೂ ಧೋನಿಯನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸಿದ ವಿಚಾರವಾಗಿಯೂ ಕೊಹ್ಲಿ ನಾಯಕತ್ವನ್ನು ಪ್ರಶ್ನಿಸಲಾಗಿತ್ತು.








