Koppala | ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ತುಂಗಭದ್ರಾ
ಕೊಪ್ಪಳ : ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇದರಿಂದ ಕಳೆದ ಐದು ದಿನಗಳಿಂದ ನದಿ ಪಾತ್ರದ ಭಾಗದಲ್ಲಿ ಪ್ರವಾಹ ಉಂಟಾಗಿದೆ.
ಜಲಾಶಯದಿಂದ ಈಗ ನದಿಗೆ 1.44 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
![Koppala Tungabhadra is flowing beyond danger level saaksha tv](http://saakshatv.com/wp-content/uploads/2022/07/da-300x204.jpg)
ಭಾರಿ ಮಳೆಯಿಂದಾಗಿ ಜಲಾಶಯಕ್ಕೆ 1.66 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಜಲಾಶಯದ ಒಟ್ಟು 105.788. ಟಿಎಂಸಿ ಸಾಮಾರ್ಥ್ಯ ದ ಜಲಾಶಯ ಇದಾಗಿದ್ದು, ಈಗ 95.925 ಟಿಎಂಸಿ ನೀರು ಸಂಗ್ರಹವಾಗಿದೆ.
ನದಿಯ ಪ್ರವಾಹದಿಂದ ಗಂಗಾವತಿ ಕಂಪ್ಲಿ ಸೇತುವೆ, ನವವೃಂದಾವನ ಗಡ್ಡೆ, ವಿರುಪಾಪುರ ಗಡ್ಡೆ ಸೇರಿ ಹಲವು ಕಡೆ ರಸ್ತೆ ಸಂಪರ್ಕ ಕಡಿತವಾಗಿದೆ. ನದಿ ಪಾತ್ರದ ಜನರಲ್ಲಿ ಭೀತಿ ಮತ್ತಷ್ಟು ಹೆಚ್ಚಾಗಿದೆ.