“ವಾರ್ ರೂಮ್ ಗೆ ಬಿಜೆಪಿ ಗೂಂಡಾಗಳನ್ನು ನೇಮಿಸಲು ಫೇಕ್ ಬೆಡ್ ಸ್ಕ್ಯಾಮ್ ಸೃಷ್ಠಿ”
ಬೆಂಗಳೂರು : ವಾರ್ ರೂಮ್ ಗೆ ಬಿಜೆಪಿ ಗೂಂಡಾಗಳನ್ನು ನೇಮಿಸಲು ಫೇಕ್ ಬೆಡ್ ಸ್ಕ್ಯಾಮ್ ಅನ್ನು ಸೃಷ್ಠಿಸಲಾಯಿತು ಎಂದು ಕಾಂಗ್ರೆಸ್ ನಾಯಕ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.
ಬೆಡ್ ಸ್ಕ್ಯಾಮ್ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ತಬ್ಲಿಗಿ ಮೇಲೆ ಗೂಬೆ ಕೂರಿಸಿದಂತೆ ಬೆಡ್ ಬುಕಿಂಗ್ ಹಗರಣದಲ್ಲೂ ಅವರ ಮೇಲೆ ಗೂಬೆ ಕೂರಿಸಬಹುದೆಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು.
17 ಮಂದಿಯನ್ನ ಕಿತ್ತು ಹಾಕಿ ಬಿಜೆಪಿ ಗೂಂಡಾಗಳನ್ನು ವಾರ್ ರೂಮ್ ಗೆ ನೇಮಿಸಲು ಯತ್ನಿಸಲಾಗಿತ್ತು. ಹಾಗಾಗಿ ಫೇಕ್ ಬೆಡ್ ಸ್ಕ್ಯಾಮ್ ಅನ್ನ ಸೃಷ್ಠಿಸಲಾಯಿತು ಎಂದು ಕೃಷ್ಣಬೈರೇಗೌಡ ಆರೋಪಿಸಿದರು.
ಬಿಜೆಪಿಯವರು ತಮಗೆ ಬೇಕಾದವರಿಗೆ ಬೆಡ್ ಕೊಡಿಸಲು ಯತ್ನಿಸಿದ್ದು, ಇದನ್ನ ಪಾಲಿಕೆ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದ್ದಾರೆ. ದಿಟ್ಟ ಅಧಿಕಾರಿ ಯಶವಂತ್ ಹಾಗೂ ಬಿಜೆಪಿ ನಾಯಕರ ಆಟಕ್ಕೆ ತಡೆ ಹಾಕಿದ್ದಾರೆ.
ಸಂಸದರ ಹಿಂಬಾಲಕರೇ ಬೆಡ್ ಹಂಚಿಕೆ ಮಾಡುತ್ತಿದ್ದರು. ಆಗ ಐಎಎಸ್ ಅಧಿಕಾರಿ ತುಳಸಿ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿದ್ದರು.
ವಾರ್ ರೂಮ್ ನಲ್ಲಿರುವ ಮುಸ್ಲಿಂ ಸಿಬ್ಬಂದಿಯನ್ನು ತೆಗೆದು ಹಾಕಬೇಕು ಎಂದು ಬೊಮ್ಮನಹಳ್ಳಿ ಶಾಸಕರು ಒತ್ತಡ ಹಾಕಿದರು. ಆದರೆ ಮುಸ್ಲಿಂ ಸಮುದಾಯದ ನೌಕರರ ತಪ್ಪಿರಲಿಲ್ಲ ಇದಕ್ಕೆ ಅಧಿಕಾರಿಗಳು ಏಕಾಏಕಿ ಮಾಡಲು ಸಾಧ್ಯವಿಲ್ಲ ಎಂದರು. ಆಗ ಇವರ ಸಿಟ್ಟು ಅಧಿಕಾರಿಗಳ ಮೇಲೆ ತಿರುಗಿದೆ ಎಂದು ಕೃಷ್ಣಬೈರೇಗೌಡ ಆರೋಪಿಸಿದ್ದಾರೆ.