ಕಾಂಗ್ರೆಸ್ ಚಲಾವಣೆ ಇಲ್ಲದ ನಾಣ್ಯವಿದ್ದಂತೆ : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ನಾಣ್ಯವಿದ್ದಂತೆ. ಯಾವುದೇ ಕೆಲಸಕ್ಕೆ ಬರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಹಾ ಪಂಚಾಯತ್ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಮಹಾ ಪಂಚಾಯತ್ ಗೆ ನಮ್ಮದೇನೂ ಅಭ್ಯಂತರವಿಲ್ಲ.
ಆದರೆ, ಮಹಾ ಪಂಚಾಯತ್ ಹೆಸರಿನಲ್ಲಿ ಕಾಂಗ್ರೆಸ್ ನವರು ರೈತರನ್ನು ದುರುಪಯೋಗ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.
ಕಾಂಗ್ರೆಸ್ ನವರು ನೇರವಾಗಿ ಅಖಾಡಕ್ಕೆ ಬಂದ್ರೆ ಅವರೊಂದಿಗೆ ಯಾವ ರೈತನೂ ಬರೋದಿಲ್ಲ. ಹೀಗಾಗಿ ಕಾಂಗ್ರೆಸ್ ರೈತರನ್ನು ಹಿಡಿದುಕೊಂಡು ರೈತರ ಪರ ಇದ್ದೇವೆ ಅನ್ನೋದನ್ನು ತೋರಿಸಲು ಹೊರಟಿದೆ.
ಆದರೆ, ಕಾಂಗ್ರೆಸ್ ಪಕ್ಷ ಚಲಾವಣೆ ಇಲ್ಲದ ನಾಣ್ಯ ಇದ್ದಂತೆ, ಯಾವುದೇ ಕೆಲಸಕ್ಕೆ ಬರಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಬೈ ಎಲೆಕ್ಷನ್ ಬಳಿಕ ಸಿಎಂ ಬದಲಾಗುತ್ತಾರೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯನ್ನ ಬದಲಾವಣೆ ಮಾಡುವ ಶಕ್ತಿ ಯತ್ನಾಳ್ ಗೆ ಇಲ್ಲ.
ಅವರಿಗೆ ಕೇಲವ ಹೇಳುವ ಶಕ್ತಿಯಷ್ಟೇ ಇದೆ ಎಂದು ಟಾಂಗ್ ನೀಡಿದರು.
ಇನ್ನು, ವಿಶ್ವನಾಥ್ ಅವರು ಬಿಜೆಪಿ ಸೇರಿ ತಪ್ಪು ಮಾಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ವಿಶ್ವನಾಥ್ ಗೆ ಮಂತ್ರಿಸ್ಥಾನ ಸಿಕ್ಕಿದ್ದರೆ ಹೀಗೆ ಹೇಳುತ್ತಿದ್ದರಾ? ಎಂದು ಈಶ್ವರಪ್ಪ ಪ್ರಶ್ನಿಸಿದರು.