ಗ್ರಾಪಂ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧ : ಕೆ.ಎಸ್.ಈಶ್ವರಪ್ಪ ( KS Eshwarappa )
ಶಿವಮೊಗ್ಗ : ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ( KS Eshwarappa ) ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧವಿದೆ.
ಇದನ್ನೂ ಓದಿ : ಆರ್.ಆರ್ ನಗರದಲ್ಲಿ ಸಿದ್ದು ಅಬ್ಬರದ ಮತಬೇಟೆ: ಬಿಜೆಪಿ ಕಾರ್ಯಕರ್ತರಿಂದ ಮೋದಿ ಘೋಷಣೆ
ಆದರೆ ರಾಜ್ಯದ 6,021 ಗ್ರಾಮ ಪಂಚಾಯಿತಿ ಚುನಾವಣೆ ನಡೆಸಿದರೆ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಗ್ರಾಮೀಣ ಭಾಗದ ಜನರು ಕೂಡ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ್ದಾರೆ.
ಚುನಾವಣೆ ಮುಂದೂಡಲು ಬಿಜೆಪಿ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಕೂಡ ಹೌದು. ಚುನಾವಣೆ ಮುಂದೂಡುವ ನಿಟ್ಟಿನಲ್ಲಿ ಸ್ಪಷ್ಟ ನಿರ್ಧಾರ ಶೀಘ್ರವೇ ಆಗಬೇಕಿದೆ.
ಆರೋಗ್ಯ ಸಚಿವ ಸುಧಾಕರ್ ಮಾರ್ಚ್ ವರೆಗೂ ಚುನಾವಣೆ ಮುಂದೂಡುವಂತೆ ಸಲಹೆ ಕೊಟ್ಟಿದ್ದಾರೆ. ಇದು ಕೇವಲ ಅಭಿಪ್ರಾಯ ಅಲ್ಲ, ಗ್ರಾಮೀಣ ಪ್ರದೇಶದ ಜನತೆಯ ಅಭಿಪ್ರಾಯ ಕೂಡ.
ಆದರೆ ನಾವು ನ್ಯಾಯಾಲಯ ಮತ್ತು ಚುನಾವಣಾ ಆಯೋಗ ನೀಡುವ ನಿರ್ದೇಶನಕ್ಕೆ ಬದ್ದರಾಗಿರಬೇಕಿದೆ ತಿಳಿಸಿದರು.
ಇದನ್ನೂ ಓದಿ : ಬಿಜೆಪಿ ಬ್ರಹ್ಮಾಸ್ತ್ರಗಳಿಗೆ ಕಾಂಗ್ರೆಸ್ ಬಳಿ ಅಸ್ತ್ರ ಇಲ್ಲ : ಆರ್.ಅಶೋಕ್ ವ್ಯಂಗ್ಯ
ಉಪಚುನಾವಣೆಯಲ್ಲಿ ಗೆಲುವು ನಿಶ್ಚಿತ
ಇದೇ ವೇಳೆ ಉಪಚುನಾವಣೆಗಳ ಬಗ್ಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ.
ಇದನ್ನೂ ಓದಿ : ನಾನೇ ಸಿಎಂ ಆಗ್ತೇನೆ ಎಂದು ಯತ್ನಾಳ್ ನನ್ನ ಬಳಿ ಹೇಳಿದ್ದಾರೆ : ಹೊರಟ್ಟಿ
ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿಗೆ ನಿರೀಕ್ಷೆ ಮೀರಿದ ಬೆಂಬಲವಿದೆ. ಹೀಗಾಗಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆಗಳು ನುರಿತ ರಾಜಕಾರಣಿಗಳು ಮಾಡುವ ಟೀಕೆ ಅಲ್ಲ. ಅವರು ಬಳಸುವ ಭಾಷೆ ನಮಗೆ ಹೇಳಲು ನಾಚಿಕೆ ಆಗುತ್ತದೆ.
ಇದನ್ನೂ ಓದಿ : `ಸಿದ್ದರಾಮಯ್ಯ ಧಮ್’ ಗೆ ಸವಾಲ್ ಹಾಕಿದ ಕಟೀಲ್
ಬಳಸುವ ಭಾಷೆಯಿಂದಲೇ ಮತದ ಮೇಲೆ ಪ್ರಭಾವ ಬೀರಲಿದ್ದು, ಅವರಿಗೆ ಉತ್ತರ ದೊರಕಲಿದೆ. ಸೋಲುವ ಭಯದಿಂದ ಈ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಅವರ ಹೇಳಿಕೆಗಳೇ ಶಿರಾ ಕ್ಷೇತ್ರದಲ್ಲಿ ಸೋಲುವುದನ್ನು ಒಪ್ಪಿಕೊಂಡಂತೆ ಆಗಿದೆ ಎಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel