ADVERTISEMENT
Saturday, July 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ksca- ಬಿಸಿಸಿಐ ವಿರುದ್ಧ ಮೆನನ್ ಕಾನೂನು ಸಮರ – “ಸಂತೋಷ”ದ ಅಧಿಕಾರಕ್ಕಾಗಿ ಕರ್ನಾಟಕ ಕ್ರಿಕೆಟ್ ಬಲಿಯಾಗಬೇಕಾ..?

admin by admin
July 18, 2026
in Sports, Newsbeat, ಕ್ರಿಕೆಟ್
santhosh menon new

santhosh menon new

Share on FacebookShare on TwitterShare on WhatsappShare on Telegram

                                                                                            ಹಲೋ..! ಸಂತೋಷ್ ಮೆನನ್ ಅವರೇ..!

santhosh menon ksca
santhosh menon ksca

ಹೇಗಿದ್ದೀರಿ..? ಸ್ವಲ್ಪ ಬಿಝಿ ಇರಬೇಕು ಅಲ್ವಾ..? ವಿಷ್ಯ ಗೊತ್ತಾಯ್ತು…! ಹಾಗಾಗಿ ನಿಮ್ಮಿಂದ ಯಾವುದೇ ಉತ್ತರವನ್ನು ನಿರೀಕ್ಷಿಸದ ಕೆಲವು ಪ್ರಶ್ನೆಗಳು ಮೂಡಿವೆ. ನೀವು ಸಾಗುವ ದಾರಿ ಸರಿ ಇಲ್ಲ ಅಂದ್ರು, ನೀವು ಸರಿ ಇದೆ ಎಂದು ವಾದ ಮಾಡುತ್ತೀರಿ. ಯಾಕಂದ್ರೆ ತಪ್ಪುಗಳಿಗೆ ನಿಮ್ಮ ಬಳಿ ಸಮರ್ಥನೆಯ ಉತ್ತರ ಇದ್ದೇ ಇರುತ್ತದೆ ಅಲ್ವಾ..?
ಇರಲಿ, ಅಷ್ಟಕ್ಕೂ ನೀವು ಯಾರು..? ಛೇ..ಹೀಗೆ ಕೇಳಿದ್ರೆ ತಪ್ಪಾಗುತ್ತೆ. ಆದ್ರೆ ನಿಮ್ಮನ್ನು ನೀವು ಏನು ಅಂದುಕೊಂಡಿದ್ದೀರಿ..? ಈ ರೀತಿ ಕೇಳುವುದರಲ್ಲಿ ಯಾವ ತಪ್ಪು ಇರಲ್ಲ.

Related posts

astrology

Astro -ಈ ಆಷಾಢ ಶುಕ್ಲ ಮಾಸದಲ್ಲಿ ದೇವಿಯ ದೇವಸ್ಥಾನದಲ್ಲಿ ಈ ಒಂದು ವಸ್ತುವನ್ನು ದಾನ ಮಾಡಿ..! ಎಷ್ಟೇ ದೊಡ್ಡ ಸಾಲವು ಕರಗುತ್ತದೆ..!.!!

July 18, 2026
fifa world cup trophy old and new

fifa trophy : ಹಿಟ್ಲರ್ ಕೈಗೆ ಸಿಗದೆ..ಸಾಕು ನಾಯಿಯಿಂದ ಕಳ್ಳರ ಕೈಯಿಂದ ತಪ್ಪಿಸಿಕೊಂಡು..ಲೂಟಿಕೋರರ ದಾಳಿಗೆ ನಲುಗಿ ಹೋದ ಜಗದೇಕ ಸುಂದ್ರಿ..!

July 18, 2026

ಹೌದು, ನೀವೇನು ಕ್ರಿಕೆಟ್‍ಗಿಂತಲೂ ದೊಡ್ಡ ವ್ಯಕ್ತಿಯಾಗಿಬಿಟ್ರಾ..? ಕಾನೂನಿಗಿಂತಲೂ ನೀವು ದೊಡ್ಡವರಾ..? ಕೆಎಸ್‍ಸಿಎನಲ್ಲಿ 9 ವರ್ಷ ಅಧಿಕಾರ ಅನುಭವಿಸಿದ್ದು ನಿಮಗೆ ಸಾಕಾಗಿಲ್ವಾ..? ಲೋಧಾ ಸಮಿತಿಯ ನಿಯಮ ಏನು ಅನ್ನೋದು ನಿಮಗೆ ಗೊತ್ತಿಲ್ವಾ..? ಎಲ್ಲಾ ಗೊತ್ತಿದ್ದು ನೀವು ಯಾಕೆ ಕೋರ್ಟ್ ಮೊರೆ ಹೋಗಿದ್ದು..? ಬಿಸಿಸಿಐಯನ್ನು ಎದುರು ಹಾಕೊಂಡ್ರೆ ಏನು ಆಗುತ್ತೆ ಅನ್ನೋ ಪರಿಜ್ಞಾನ ಇದೆಯಾ..? ನಿಮ್ಮ ಈ ಅಧಿಕಾರದ ದಾಹಕ್ಕೆ ಬಲಿಯಾಗೋದು ಯಾರು ಅಂತ ಗೊತ್ತಿದೆಯಾ..?

ಆದ್ರೆ ಇದೆಲ್ಲಾ ನಿಮಗೆ ಒಂದೇ ವಾಖ್ಯದಲ್ಲಿ ಉತ್ತರಿಸುವ ಸುಲಭದ ಪ್ರಶ್ನೆಗಳು. ಯಾಕಂದ್ರೆ ನೀವು ಬಹುಮುಖ ಪ್ರತಿಭೆಯ ಕಣಜ. ಎಲ್ಲವನ್ನು ಅರೆದು ಕುಡಿದವರು. ನಿಮಗೆ ಕಾನೂನು ಹೋರಾಟ ಮಾಡುವ ಶಕ್ತಿ ಇದೆ. ಅಧಿಕಾರ ಪಡೆಯುವ ಸಾಮಥ್ಯ ್ ಇದೆ. ಕಾಲಚಕ್ರಕ್ಕೆ ತಕ್ಕಂತೆ ನಾಟಕವಾಡುವ ಅದ್ಭುತ ಪ್ರತಿಭೆ ಇದೆ.

ನಿಮಗೆ ಕ್ರಿಕೆಟ್ ಕೇವಲ ಒಂದು ದಾಳ ಅಷ್ಟೇ..! ಕೆಎಸ್‍ಸಿಎ ಗರ್ಭಗುಡಿಯಲ್ಲಿ ಕುಳಿತುಕೊಂಡು ಹೇಗೆಲ್ಲಾ ಪಗಡೆಯಾಟ ಆಡಿದ್ದೀರಿ..? ಯಾರ ಮೇಲೆ ಯಾವ ದಾಳ ಉರುಳಿಸಿದ್ದೀರಿ..? ಯಾರಿಗೆ ಎಲ್ಲಾ ಚೆಕ್‍ಮೆಟ್ ಕೊಟ್ಟಿದ್ದೀರಿ ಎಂಬುದು ಗೊತ್ತಿರುವ ವಿಚಾರವೇ ಬಿಡಿ..!

venkatesh prasad ksca presindent
venkatesh prasad ksca presindent

ನೀವು ಕ್ರಿಕೆಟ್ ಆಡಿದ್ದೀರಾ ಇಲ್ವೋ ಗೊತ್ತಿಲ್ಲ. ಆದ್ರೆ ಯುವ ಆಟಗಾರರಿಗೆ ನಿಮ್ಮ ಕ್ಲಬ್ ಮೂಲಕ ಕ್ರಿಕೆಟ್ ಆಟವನ್ನು ಕಲಿಸಿದ್ದೀರಿ. ಯುವ ಪ್ರತಿಭೆಗಳನ್ನು ಗುರುತಿಸಿದ್ದೀರಿ. ಕೆಎಸ್‍ಸಿಎ ಆಡಳಿತದ ಎಲ್ಲಾ ಆಯಮಾಗಳನ್ನು ಬಲ್ಲವರಾಗಿದ್ದೀರಿ. ಇಷ್ಟೆಲ್ಲಾ ಜ್ಞಾನ ಬುದ್ಧಿವಂತಿಕೆಯನ್ನು ಹೊಂದಿರುವ ನೀವು ಕೋರ್ಟ್ ಮೊರೆ ಹೋಗಿರುವುದು ಸರಿನಾ..?

ಲೋಧಾ ಸಮಿತಿಯ ನಿಯಮದಂತೆ ನೀವು ಕಾರ್ಯದರ್ಶಿ ಹುದ್ದೆಯನ್ನು ತ್ಯಜಿಸಲೇಬೇಕು. ಯಾಕಂದ್ರೆ 9 ವರ್ಷದ ನಿಮ್ಮ ಅವದಿ ಮುಗಿದೆ. ಒಂದು ಕಾಲದ ನಿಮ್ಮ ಆಪ್ತ ಸ್ನೇಹಿತರ ಬಳಿ ಕೇಳಿ ನೋಡಿ. ಆದ್ರೆ ಎಲ್ಲಾ ನೀತಿ ನಿಯಮ, ಕಾನೂನು ಗೊತ್ತಿದ್ರೂ ಕೋರ್ಟ್ ಮೆಟ್ಟಿಲು ಹತ್ತಿದ್ದು ನ್ಯಾಯಕ್ಕಾಗಿಯೋ..? ಅನ್ಯಾಯ ಮಾಡುವುದಕ್ಕಾಗಿಯೋ.?

ನಿಮಗೆ ಅನ್ಯಾಯವಾಗಿದೆ. ನ್ಯಾಯ ಸಿಗಬೇಕು ಅಂತ ಕಾನೂನು ಹೋರಾಟ ಮಾಡಿ. ಬೇಡ ಅನ್ನಲ್ಲ. ಆದರೆ ಅದಕ್ಕಿಂತ ಮುಂಚೆ ಸ್ವಲ್ಪ ಯೋಚನೆ ಮಾಡಿಕೊಳ್ಳಿ..! ನಿಮ್ಮ ಬದುಕು ರೂಪಿಸಿದ್ದು, ನಿಮ್ಮ ವ್ಯಕ್ತಿತ್ವಕ್ಕೆ ಗೌರವ ತಂದುಕೊಟ್ಟಿದ್ದು ಯಾವುದು ಅನ್ನೋದು ನಿಮಗೆ ಮರೆತು ಹೋಯ್ತಾ..?

ಒಂದು ವೇಳೆ ಮರೆತಿದ್ರೆ ನೆನೆಪು ಮಾಡಿಸೋಣ..! ನಿಮ್ಮ ಹಳೆಯ ಕುಚುಕು ಗೆಳೆಯರನ್ನು ನೀವು ಮರೆತಿರಬಹುದು. ಆದ್ರೆ ಕ್ರಿಕೆಟ್, ರಾಜ್ಯ ಕ್ರಿಕೆಟ್ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಇಷ್ಟು ಬೇಗ ಮರೆಯಬಾರದಿತ್ತು. ನಿಮಗೆ ಬಯಸಿದ್ದನ್ನೆಲ್ಲಾ ಕೊಟ್ಟಿರುವ ಕ್ರಿಕೆಟ್‍ಗೆ, ಕೆಎಸ್‍ಸಿಎಗೆ ದ್ರೋಹ ಬಗೆಯುವಂತಹ ಕೆಲಸವನ್ನು ಮಾಡಬಾರದಿತ್ತು.

ನಿಮ್ಮ ಈ ಕಾನೂನು ಹೋರಾಟದಿಂದ ಎಷ್ಟು ಜನರ ಮೇಲೆ ಪರಿಣಾಮ ಬೀಳುತ್ತಿದೆ ಗೊತ್ತಾ…? ಒಂದು ವೇಳೆ ಈ ಕಾನೂನು ಹೋರಾಟದಲ್ಲಿ ನಿಮಗೆ ಗೆಲುವು ಸಿಕ್ಕಿದ್ರೂ ಬಿಸಿಸಿಐ ಏನು ಸುಮ್ಮನೆ ಕೂರುತ್ತೆ ಅಂದುಕೊಂಡ್ರಾ..?

ಅಂದ ಹಾಗೇ ನೀವು ಕೋರ್ಟ್ ನಲ್ಲಿ ಬಿಸಿಸಿಐಗೆ ಚಾಲೆಂಜ್ ಮಾಡಿದ್ದೀರಿ. ಆದ್ರೆ ಕೆಎಸ್‍ಸಿಎ ಹೆಸರನ್ನು ಬಳಸಿಕೊಂಡಿದ್ದು ಯಾಕೆ..? ಸ್ವತಃ ಬಿಸಿಸಿಐಯೇ ಲೋಧಾ ಸಮಿತಿಯ ನೀತಿ ನಿಯಮಗಳನ್ನು ಪಾಲಿಸುತ್ತಿದೆ. ಅಂದ ಮೇಲೆ ನಿಮಗೆ ಯಾಕೆ ಪಾಲಿಸಲು ಸಾಧ್ಯವಾಗುತ್ತಿಲ್ಲ..? ಬೆವರು ಸುರಿಸಿ ಕ್ರಿಕೆಟ್ ಆಡುವ ಕ್ರಿಕೆಟಿಗರೇ ಆಡಳಿತಗಾರರಾಗಿ ಲೋಧಾ ಸಮಿತಿಗೆ ತಲೆಬಾಗುತ್ತಾರೆ. ಅಂದ ಮೇಲೆ ನೀವು ಕ್ರಿಕೆಟ್, ಸಂಸ್ಥೆಗಳಿಗಿಂತಲೂ ದೊಡ್ಡ ವ್ಯಕ್ತಿನಾ..?

ಸರಿ ಈಗ ವಿಷ್ಯಕ್ಕೆ ಬರೋಣ. ಕಳೆದ ಹತ್ತು ವರ್ಷಗಳಿಂದ ರಾಜ್ಯ ಕ್ರಿಕೆಟ್ ಸಂಸ್ಥೆ ತೊಂದರೆಯಲ್ಲಿದೆ. ಒಂದು ವೇಳೆ ದೊಡ್ಡಣ್ಣ ಬಿಸಿಸಿಐ, ಕೆಎಸ್‍ಸಿಎ ಮೇಲೆ ವಕ್ರದೃಷ್ಟಿ ಬೀರಿದ್ರೆ ಆಗುವ ಪರಿಣಾಮವನ್ನು ಒಂದು ಬಾರಿ ಊಹಿಸಿಕೊಳ್ಳಿ..! ವರ್ಷಕ್ಕೆ 100ರಿಂದ 150 ಕೋಟಿ ನೀಡುತ್ತಿರುವ ಅನುದಾನವನ್ನು ಬಿಸಿಸಿಐ ಸ್ಥಗಿತಗೊಳಿಸಿದ್ರೆ ನಷ್ಟ ಯಾರಿಗೆ ಆಗೋದು ಮೆನನ್ ಅವ್ರೇ..!

ನಿಮ್ಮ ಈ ಕಾನೂನು ಹೋರಾಟದಲ್ಲಿ ನೀವು ಕೆಎಸ್‍ಸಿಎಯನ್ನು ಬಳಸಿಕೊಂಡಿರುವುದು ಎಷ್ಟು ಸರಿ..? ಕೆಎಸ್‍ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರಾದ್ರೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿತ್ತು. ಒಂದಂತೂ ಸತ್ಯ, ಈ ಕಾನೂನು ಹೋರಾಟ ಹೀಗೆ ಮುಂದುವರಿದ್ರೆ ಕರ್ನಾಟಕ ಕ್ರಿಕೆಟ್‍ನ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆ. ಹಾಗಾಗಿ ವೆಂಕಿ ಜಾಣ್ಮೆಯ ನಡೆಯನ್ನು ಇಡಬೇಕಿದೆ. (WP 19719/2026 ಅರ್ಜಿ)

ಕೊನೆಯದಾಗಿ ಕೆಎಸ್‍ಸಿಎನಲ್ಲಿ ಕಾರ್ಯದರ್ಶಿ ಹುದ್ದೆ ಖಾಲಿ ಇದೆ. ಆದ್ರೆ ಅದನ್ನು ಈಗಲೇ ಭರ್ತಿ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಮೆನನ್ ಅವರ ಕಾನೂನು ಹೋರಾಟ ಮುಗಿಯಬೇಕು. ಅಲ್ಲಿಯ ತನಕ ಕೆಎಸ್‍ಸಿಎನಲ್ಲಿ ಕಾರ್ಯದರ್ಶಿ ಕುರ್ಚಿ ಖಾಲಿ ಇರುತ್ತದೆ.

ನಿಜ, ನೀವು ಎಷ್ಟಾದ್ರೂ ನಿಮ್ಮ ಹಳೆಯ ಬಿಗ್‍ಬಾಸ್ ಗರಡಿಯಲ್ಲಿ ಪಳಗಿದ್ದವರು. ಅವರಂತೆ ನೀವು ಕೂಡ ಕಾರ್ಯದರ್ಶಿ ಸ್ಥಾನಕ್ಕೇರಿದವರು. ಅವರಾದ್ರೂ ಕೆಎಸ್‍ಸಿಎಗೆ ನೆನಪಿನಲ್ಲಿ ಉಳಿಯುವಂತಹ ಕೊಡುಗೆ ಕೊಟ್ಟಿದ್ದಾರೆ. ಆದ್ರೆ ನೀವು…? ಯೋಚನೆ ಮಾಡಿ..! ನಿಮ್ಮ ನಿರ್ಧಾರ ಬೇಗ ತಿಳಿಸಿ.!

ಸನತ್ ರೈ

Tags: #KarnatakaCricket #KSCAvsBCCI #SaveKarnatakaCricket #SantoshMenon #CricketPolitics #LodhaCommittee #VenkateshPrasad #sanathrai #saakshatv
ShareTweetSendShare
Join us on:

Related Posts

astrology

Astro -ಈ ಆಷಾಢ ಶುಕ್ಲ ಮಾಸದಲ್ಲಿ ದೇವಿಯ ದೇವಸ್ಥಾನದಲ್ಲಿ ಈ ಒಂದು ವಸ್ತುವನ್ನು ದಾನ ಮಾಡಿ..! ಎಷ್ಟೇ ದೊಡ್ಡ ಸಾಲವು ಕರಗುತ್ತದೆ..!.!!

by admin
July 18, 2026
0

ಸಾಲ ಎಂಬುದು ಎಲ್ಲರ ಬದುಕಿನ ಭಾಗವಾಗಿಬಿಟ್ಟಿದೆ. ಒಂದೇ ವ್ಯತ್ಯಾಸವೆಂದರೆ ಸಾಲ ಎಷ್ಟು ದೊಡ್ಡದು ಮತ್ತು ಸಾಲ ಎಷ್ಟು ಚಿಕ್ಕದಾಗಿದೆ. ಸಾಮಾನ್ಯ ಕೂಲಿ ಮಾಡುವವರಾದರೂ ಸಾಲದ ಹೊರೆ ಅವರಿಗೂ...

fifa world cup trophy old and new

fifa trophy : ಹಿಟ್ಲರ್ ಕೈಗೆ ಸಿಗದೆ..ಸಾಕು ನಾಯಿಯಿಂದ ಕಳ್ಳರ ಕೈಯಿಂದ ತಪ್ಪಿಸಿಕೊಂಡು..ಲೂಟಿಕೋರರ ದಾಳಿಗೆ ನಲುಗಿ ಹೋದ ಜಗದೇಕ ಸುಂದ್ರಿ..!

by admin
July 18, 2026
0

ಈಕೆ ಅಂತಿಂಥ ಚೆಲುವೆಯಲ್ಲ..! ಶಿಲ್ಪಿಯ ಕೈಯಲ್ಲಿ ಅರಳಿದ ಅಪ್ರತಿಮ ರೂಪಸಿ..! ಹೌದು, ಸರ್ವಾಧಿಕಾರಿ ಹಿಟ್ಲರ್‍ನ ಕೈ ಹಿಡಿಯಲಿಲ್ಲ. ಆಂಗ್ಲರ ಮೋಹದ ಬಲೆಗೂ ಬೀಳಲಿಲ್ಲ. ಕಳ್ಳರ ಕೈಗೆ ಸಿಲುಕಿದಾಗ...

ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

by Shwetha
July 18, 2026
0

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನೀವು ಕೇವಲ ಪಿಯುಸಿ ಪಾಸಾಗಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಪಡೆಯಬೇಕೆಂದು ಬಯಸುತ್ತಿದ್ದರೆ ನಿಮಗಾಗಿ ಒಂದು...

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

by Shwetha
July 18, 2026
0

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ದೇಶದ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಎನ್‌ಡಿಎ ಹಾಗೂ ವಿರೋಧ ಪಕ್ಷಗಳ ಒಕ್ಕೂಟದ ನಡುವೆ ತೀವ್ರ ವಾಕ್ಸಮರ...

ಮೊಟ್ಟೆ ದರದಲ್ಲಿ ನಿರಂತರ ಏರಿಕೆ; ಉತ್ಪಾದನೆ ಕುಸಿತದಿಂದ ಗ್ರಾಹಕರಿಗೆ ಬೆಲೆ ಬರೆ

ಮೊಟ್ಟೆ ದರದಲ್ಲಿ ನಿರಂತರ ಏರಿಕೆ; ಉತ್ಪಾದನೆ ಕುಸಿತದಿಂದ ಗ್ರಾಹಕರಿಗೆ ಬೆಲೆ ಬರೆ

by Shwetha
July 18, 2026
0

ರಾಜ್ಯದಲ್ಲಿ ಕೋಳಿ ಮೊಟ್ಟೆಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ. ಕೆಲವೇ ವಾರಗಳ ಹಿಂದೆ 5 ರಿಂದ 6 ರೂಪಾಯಿಗೆ ದೊರೆಯುತ್ತಿದ್ದ ಮೊಟ್ಟೆ ಇದೀಗ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram