ಎಪ್ರಿಲ್ 5 ರಂದು ರಾತ್ರಿ ಒಂಬತ್ತು ಗಂಟೆಗೆ ದೇಶದ ಜನ ತಮ್ಮ ಮನೆಯ ಲೈಟ್ ಬಂದ್ ಮಾಡಿ, 9 ನಿಮಿಷಗಳ ಕಾಲ ಮೇಣದ ಬತ್ತಿ, ಮೊಬೈಲ್ ಲೈಟ್, ದೀಪ ಉರಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.
ಇಂದು ಬೆಳಿಗ್ಗೆ 9 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪಿ.ಎಂ ಮೋದಿ, ದೇಶ ಲಾಕ್ ಡೌನ್ ಆಗಿ ಇಂದಿಗೆ 9 ದಿನಗಳು ಕಳೆದಿವೆ.ಮಾರ್ಚ್ 22 ರಂದು ಆಚರಿಸಿದ ಜನತಾ ಕರ್ಫ್ಯೂ ಗೆ ದೊಡ್ಡ ಪ್ರಮಾಣದ ಬೆಂಬಲ ನೀಡಿದ್ದಾರೆ. ಇದು ಬೇರೆ ದೇಶಗಳು ಸಹ ಅನುಸರಿಸಿದ್ದಾರೆ.ಎಲ್ಲರಿಗೂ ಒಂದು ಸಹಜವಾದ ಪ್ರಶ್ನೆ ಕಾಡುತ್ತಿದೆ. ಲಾಕ್ ಡೌನ್ ಗೆ ಅಂತ್ಯ ಯಾವಗ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ದೇಶವಾಸಿಗಳಿಗೆ ಲಾಕ್ ಡೌನ್ ಅನಿವಾರ್ಯ. ಹಾಗಾಗಿ ಮನೆಯಲ್ಲಿ ಇರಿ. ಮನೆಯಲ್ಲಿ ಒಬ್ಬರೇ ಇದ್ದೀರಾ ಎಂದು ಭಾವಿಸಬೇಡಿ. ಯಾಕೆಂದರೆ 130 ಕೋಟಿ ಜನ ಇದ್ದಾರೆ. ಕೊರೊನಾ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಹಾಗಾಗಿ ತಾವು ಎಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಮನೆಯ ಲೈಟ್ ಬಂದ್ ಮಾಡಿ, ನಿಮ್ಮ ಮೊಬೈಲ್ ಲೈಟ್, ದೀಪ, ಟಾರ್ಜ್ ಮೇಣದ ಬತ್ತಿ ಬೆಳಗಿ. ಮನೆಯಿಂದ ಹೊರ ಬಂದು ಅಥಾವ ಮನೆಯ ಬಾಲ್ಕನಿಯಲ್ಲಿ ನಿಂತು ದೀಪ, ಮೇಣದ ಬತ್ತಿ, ಮೊಬೈಲ್ ಲೈಟ್, ಟಾರ್ಚ್ ಬೆಳಗಿ.ಕೊರೊನಾ ಎಂದ ಅಂಧಕಾರಕ್ಕೆ ಅಂತ್ಯ ಹಾಡೋಣ ಎಂದು ಮೋದಿ ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ.