ಹಿರಿಯ ನಟಿ ಲೀಲಾವತಿ ಅವರ ಸಾವಿಗೆ ಚಿತ್ರರಂಗ ಕಂಬನಿ ಮಿಡಿಯುತ್ತದೆ. ಸದ್ಯ ನಟ ಉಪೇಂದ್ರ ಅವರು ಸಂತಾಪ ಸೂಚಿಸಿದ್ದಾರೆ.
ಲೀಲಾವತಿ ಅವರ ಅಂತಿಮ ದರ್ಶನ ಪಡೆದ ಅವರು, ಲೀಲಾವತಿ ಅಮ್ಮನವರು ಭಾರತ ಕಂಡ ಶ್ರೇಷ್ಠ ನಟಿ ಎಂದು ಹೇಳಿ ಭಾವುಕರಾಗದ್ದಾರೆ.
ನಾವೆಲ್ಲ ಇಂದು ಇಂತಹ ಶ್ರೇಷ್ಠ ನಟಿಯನ್ನು ಕಳೆದುಕೊಂಡಿದ್ದೇವೆ. ಆಸ್ಪತ್ರೆ ಕಟ್ಟಿಸೋದು ಸೇರಿದಂತೆ ಸಾಕಷ್ಟು ಸಮಾಜ ಸೇವೆ ಮಾಡಿಯೇ ಹೋಗಿದ್ದಾರೆ. ವಿನೋದ್ ರಾಜ್ ಹೇಳುತ್ತಿದ್ದರು ಅವರಿಗೆ ತುಂಬಾ ಕನಸಿತ್ತು. ಅದನ್ನ ಈಡೇರಿಸುತ್ತೇನೆ ಎಂದು ಕೂಡ ಹೇಳಿದ್ದರು. ಅದನ್ನೆಲ್ಲಾ ಪೂರೈಸುವ ಶಕ್ತಿ ದೇವರು ಅವರಿಗೆ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಅಂತಿಮ ದರ್ಶನ ಪಡೆಯಲು ಕಲಾವಿದರು, ಆಪ್ತರು, ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಮಧ್ಯಾಹ್ನ 3.30ಕ್ಕೆ ಸರ್ಕಾರಿ ಗೌರವದೊಂದಿಗೆ ಸೋಲದೇವನಹಳ್ಳಿಯಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.








