ರಾಯಚೂರು: ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಶಾಸಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಲಿಂಗಸುಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ತಪ್ಪಿತಸ್ಥ ಇದ್ದಾನೆ. ಅಕ್ರಮ ದುಡ್ಡು ಹೊಡೆದಿದ್ದಾನೆ. ಡಿಸಿಎಂ ಸ್ಥಾನದಲ್ಲಿ ಇರಬಾರದು. ತಕ್ಷಣ ರಾಜೀನಾಮೆ ಕೊಡಬೇಕು. ಕೋರ್ಟ್ ಹೇಳಿದೆ ಮೂರು ತಿಂಗಳಲ್ಲಿ ತನಿಖೆ ಆಗಲಿ. ಆನಂತರ ನೀವು ಬೇಕಾದರೆ ಮಂತ್ರಿ ಆಗಿ, ಇಲ್ಲವಾದರೆ ಜೈಲಿಗೆ ಹೋಗಿ ಎಂದು ಗುಡುಗಿದ್ದಾರೆ.
ಟಿವಿಯಲ್ಲಿ, ಅವರ ಮನೆಯಲ್ಲಿ ಸಿಕ್ಕ ಬಂಡಲ್ ಗಟ್ಟಲೇ ನೋಟನ್ನು ನಾವು ನೋಡಿದ್ದೇವೆ. ನಮಗೆ ಅದಕ್ಕಿಂತ ಸಾಕ್ಷಿಬೇಕಾ? ಬಾಕ್ಸ್ಗಟ್ಟಲೇ ದಾಖಲೆ ಬಂತು ಅದಕ್ಕಿಂತ ದಾಖಲೆ ಬೇಕಾ..? ಎಂದು ಪ್ರಶ್ನಿಸಿದ್ದಾರೆ.