ಬೆಂಗಳೂರು: ನಾನು ಕೂಡ ರಾಮನ ಭಕ್ತ. ಶ್ರೀರಾಮ ನಮ್ಮ ಮನೆ ದೇವರು. ನಾನು ಮುಡಾದಿಂದ (MUDA) ದಾಖಲೆ ತೆಗೆದುಕೊಂಡಿದ್ದೇನೆ ಎಂದು ಶ್ರೀರಾಮನ ಮೇಲೆ ಬಂದು ಪ್ರಮಾಣ ಮಾಡಲಿ ಎಂದು ಮೈಸೂರಿನ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಹಾಗೂ ಸಚಿವೆ ಶೋಭಾ ಕರಂದ್ಲಾಜೆಗೆ ಸಚಿವ ಬೈರತಿ ಸುರೇಶ್ (Byrathi Suresh) ಸವಾಲು ಹಾಕಿದ್ದಾರೆ.
ಮುಡಾ ದಾಖಲೆಗಳ ಸಾಗಣೆ ಆರೋಪ ಕುರಿತು ಮಾತನಾಡಿರುವ ಅವರು, ಮುಡಾಕ್ಕೆ ಸಂಬಂಧಪಟ್ಟ ಒಂದೇ ಒಂದು ದಾಖಲೆಯನ್ನೂ ನಾನು ತಗೆದುಕೊಂಡು ಹೋಗಿಲ್ಲ. ನಾನು ಈ ವಿಚಾರವಾಗಿ ಮೈಸೂರು ಶಾಸಕ ಶ್ರೀವತ್ಸ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಅಣೆ ಮಾಡಲು ಸವಾಲು ಹಾಕುತ್ತೇನೆ ಎಂದಿದ್ದಾರೆ.
ಚಾಮುಂಡಿ ಬೆಟ್ಟ, ಧರ್ಮಸ್ಥಳಕ್ಕೆ ಬಂದು ಅಣೆ ಮಾಡಲಿ ನಾನೂ ಮಾಡುತ್ತೇನೆ. ಶಾಸಕ ಶ್ರೀವತ್ಸ, ಶೋಭಾ ಕರಂದ್ಲಾಜೆ ಬಂದು ಆಣೆ ಮಾಡಲಿ. ಇವರು ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಗುಡುಗಿದ್ದಾರೆ.