ಬಳ್ಳಾರಿ: ಸೇಬು (Apple) ತುಂಬಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿಯಾದ(Lorry Overturn) ಪರಿಣಾಮ ರಸ್ತೆಯಲ್ಲಿಯೇ ಸೇಬು ಹಣ್ಣುಗಳು ಬಿದ್ದಿದ್ದು, ಜನರು ತುಂಬಿಕೊಂಡು ಹೋಗಿ ಅಮಾನವೀಯತೆ ಮೆರೆದಿದ್ದಾರೆ.
ಈ ಘಟನೆ ವಿಜಯನಗರ (Vijayanagar) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಹತ್ತಿರ ನಡೆದಿದೆ. ಈ ಗ್ರಾಮದ ಬಳಿ ಲಾರಿ ಬರುತ್ತಿದ್ದಂತೆ ಸೇಬುಗಳನ್ನು ತುಂಬಿದ್ದ ಲಾರಿ ಪಲ್ಟಿಯಾಗಿದೆ. ಪೊಲೀಸರು ಸ್ಥಳಕ್ಕೆ ಬಂದರೂ ಜನರು ಮಾತ್ರ ಹಣ್ಣು ದೋಚುವ ಕಾರ್ಯ ಬಿಟ್ಟಿಲ್ಲ. ಈ ವೇಳೆ ಪೊಲೀಸರು ಏನೂ ಮಾಡಲಾಗದೆ ಅಸಹಾಯಕರಂತೆ ನಿಂತಿದ್ದಾರೆ.
ನಾ ಮುಂದು, ತಾ ಮುಂದು ಎಂದು ಹೆಣ್ಣು ಮಕ್ಕಳು, ಗಂಡು ಮಕ್ಕಳು ಸೇರಿದಂತೆ ನೂರಾರು ಜನರು ಸೇಬುಗಳನ್ನು ತುಂಬಿಕೊಂಡಿದ್ದಾರೆ. ಕೆಲವೇ ಸಮಯದಲ್ಲಿ ಹಣ್ಣು ದೋಚಿ ಪರಾರಿಯಾಗಿದ್ದಾರೆ.