ADVERTISEMENT
Sunday, August 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಏಯ್ ನಾಗೇಂದ್ರ ನಿನ್ನದು ಪಶ್ಚಾತ್ತಾಪದ ಕಣ್ಣೀರಲ್ಲ ಇದು ಕರ್ಮದ ಕಣ್ಣೀರು: ಇಡಿ ಚಾರ್ಜ್ ಶೀಟ್ ಹಿಡಿದು ನಾಗೇಂದ್ರನ ಅಣು ಅಣು ನನಗೆ ಗೊತ್ತು ಎಂದು ಗುಡುಗಿದ ಗಾಲಿ ಜನಾರ್ದನ ರೆಡ್ಡಿ

Shwetha by Shwetha
August 30, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬಳ್ಳಾರಿ ಮತ್ತು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕಿಚ್ಚು ಈಗ ಮತ್ತಷ್ಟು ಜೋರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಹಾಗೂ ಹಾಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ನಾಗೇಂದ್ರ ವಿರುದ್ಧ ಅತ್ಯಂತ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ. ಇ.ಡಿ. ಸಲ್ಲಿಸಿರುವ ಚಾರ್ಜ್ ಶೀಟ್ ಆಧಾರದ ಮೇಲೆ ನಾಗೇಂದ್ರ ಅವರ ಭ್ರಷ್ಟಾಚಾರದ ಜಾತಕವನ್ನು ರೆಡ್ಡಿ ಬಿಚ್ಚಿಟ್ಟಿದ್ದಾರೆ.

ನಿನ್ನದು ಕರ್ಮದ ಕಣ್ಣೀರು, ಬಿಡದು ಚಂದ್ರಶೇಖರ್ ಆತ್ಮದ ಶಾಪ

Related posts

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಅಕ್ರಮದ ಆರೋಪ; ಪ್ರಿಯಾಂಕ್ ಖರ್ಗೆ ವಿರುದ್ಧ HDK ವಾಗ್ದಾಳಿ, ‘ನನ್ನ ಮುಂದೆ ಹಗುರವಾಗಿ ಮಾತನಾಡಬೇಡಿ’ ಎಚ್ಚರಿಕೆ

August 30, 2026
ನಾಗೇಂದ್ರ ಸುರಿಸಿದ ಕಣ್ಣೀರು ಬಿಜೆಪಿಯನ್ನೇ ಸುಟ್ಟು ಭಸ್ಮ ಮಾಡಲಿದೆ: ಬಿ. ನಾಗೇಂದ್ರ ಪರ ಸಚಿವ ಮಧು ಬಂಗಾರಪ್ಪ ಭರ್ಜರಿ ಬ್ಯಾಟಿಂಗ್

ನಾಗೇಂದ್ರ ಸುರಿಸಿದ ಕಣ್ಣೀರು ಬಿಜೆಪಿಯನ್ನೇ ಸುಟ್ಟು ಭಸ್ಮ ಮಾಡಲಿದೆ: ಬಿ. ನಾಗೇಂದ್ರ ಪರ ಸಚಿವ ಮಧು ಬಂಗಾರಪ್ಪ ಭರ್ಜರಿ ಬ್ಯಾಟಿಂಗ್

August 30, 2026

ರಾಜೀನಾಮೆ ನೀಡುವ ಸಂದರ್ಭದಲ್ಲಿ ನಾಗೇಂದ್ರ ಕಣ್ಣೀರು ಸುರಿಸಿದ್ದನ್ನು ಕಂಡು ಕೆಂಡಾಮಂಡಲರಾದ ಜನಾರ್ದನ ರೆಡ್ಡಿ, ಏಯ್ ನಾಗೇಂದ್ರ, ನೀನು ಈಗ ಸುರಿಸುತ್ತಿರುವುದು ಪಶ್ಚಾತ್ತಾಪದ ಕಣ್ಣೀರಲ್ಲ, ಅದು ನಿನ್ನ ಕೆಟ್ಟ ಕರ್ಮದ ಕಣ್ಣೀರು ಎಂದು ಗುಡುಗಿದ್ದಾರೆ. ವಾಲ್ಮೀಕಿ ಸಮುದಾಯದ ಬಡ ಜನರಿಗೆ ಸೇರಬೇಕಾದ ಕೋಟ್ಯಂತರ ರೂಪಾಯಿ ಹಣವನ್ನು ಲೂಟಿ ಹೊಡೆದಿದ್ದೀಯಾ. ಈ ಹಗರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮ ನಿನಗೆ ಸುಮ್ಮನೆ ಬಿಡುವುದಿಲ್ಲ. ಆ ಸತ್ತ ವ್ಯಕ್ತಿಯ ಶಾಪ ನಿನ್ನನ್ನು ಸದಾ ಕಾಡಲಿದೆ ಎಂದು ಎಚ್ಚರಿಸಿದ್ದಾರೆ.

ಇಡಿ ಚಾರ್ಜ್ ಶೀಟ್ ಅನ್ನು ಮುಂದಿಟ್ಟುಕೊಂಡು ಮಾತನಾಡಿದ ರೆಡ್ಡಿ, ವಾಲ್ಮೀಕಿ ನಿಗಮದ ಹಣ ನೇರವಾಗಿ ಮುಂಬೈ ಮೂಲದ ಮೂವರ ಖಾತೆಗೆ ವರ್ಗಾವಣೆಯಾಗಿದೆ. ಆ ವ್ಯಕ್ತಿಗಳಿಗೂ ನಿನಗೂ ಏನು ಸಂಬಂಧ? ಬಳ್ಳಾರಿಯ ಜನರಿಗೆ ಮತ್ತು ಮುಸ್ಲಿಂ ಮುಖಂಡರಿಗೆ ಈ ಬಗ್ಗೆ ಸ್ಪಷ್ಟನೆ ನೀಡು ಎಂದು ಸವಾಲು ಹಾಕಿದರು. ಸುಮಾರು 600ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾಯಿಸಿ, ಅಲ್ಲಿಂದ ಡ್ರಾ ಮಾಡಲಾದ ಹಣದಲ್ಲಿ ನಾಗೇಂದ್ರ ಹೊಸ ಕಾರು, ಚಿನ್ನಾಭರಣ ಮತ್ತು ಬಂಗಲೆ ಖರೀದಿಸಿದ್ದಾನೆ. ಬಡವರ ಹಣದಲ್ಲಿ ನೀನು ಸುಖ ಅನುಭವಿಸುತ್ತಿದ್ದೀಯಾ ಎಂದು ಆಕ್ರೋಶ ಹೊರಹಾಕಿದರು.

ರಿಜಕ್ಟ್ ಪೀಸ್ ಎಂದು ಹೀಯಾಳಿಸಿದವರಿಗೆ ರೆಡ್ಡಿ ತಿರುಗೇಟು

ನನ್ನನ್ನು ಮತ್ತು ಶ್ರೀರಾಮುಲು ಅವರನ್ನು ಪದೇಪದೆ ರಿಜಕ್ಟ್ ಪೀಸ್ ಎಂದು ಅವಹೇಳನ ಮಾಡುತ್ತಿರುವ ನಾಗೇಂದ್ರನಿಗೆ ರೆಡ್ಡಿ ಖಡಕ್ ಉತ್ತರ ನೀಡಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಸಿದ್ದರಾಮಯ್ಯ, ಯಡಿಯೂರಪ್ಪ, ಎಸ್‌ಎಂ ಕೃಷ್ಣ ಅವರಂತಹ ದಿಗ್ಗಜರೇ ಸೋತಿದ್ದಾರೆ. ಹಾಗಾದರೆ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಸೋತಾಗ ಅವರು ರಿಜಕ್ಟ್ ಪೀಸ್ ಆಗಿದ್ದರೇ? ಸೋತ ಮೇಲೆ ಅವರು ಎಐಸಿಸಿ ಅಧ್ಯಕ್ಷರಾಗಲಿಲ್ಲವೇ? ಎಂದು ಪ್ರಶ್ನಿಸಿದರು. ಗೆದ್ದ ಮೇಲೆ ನೀನು ಮಾಡಿದ್ದೇನು? ವಾಲ್ಮೀಕಿ ಸಮುದಾಯದ ಹಣ ಲೂಟಿ ಮಾಡಿದ್ದೇ ನಿನ್ನ ದೊಡ್ಡ ಸಾಧನೆಯೇ ಎಂದು ಲೇವಡಿ ಮಾಡಿದರು.

ತಾಕತ್ತಿದ್ದರೆ 10 ಶಾಸಕರಿಂದ ರಾಜೀನಾಮೆ ಕೊಡಿಸು, ನಾನು ರೆಡಿ

ನನ್ನ ತಾಕತ್ತಿನ ಬಗ್ಗೆ ಮಾತನಾಡುವ ನಾಗೇಂದ್ರನಿಗೆ ಜನಾರ್ದನ ರೆಡ್ಡಿ ಓಪನ್ ಚಾಲೆಂಜ್ ಹಾಕಿದ್ದಾರೆ. ನಿನಗೆ ನಿಜಕ್ಕೂ ತಾಕತ್ತಿದ್ದರೆ, ಹಗರಣದ ಹಣದಿಂದ ಗೆದ್ದಿರುವ ಸಂಸದ ತುಕಾರಾಂ ಮತ್ತು ಬಳ್ಳಾರಿ ಜಿಲ್ಲೆಯ ಅಖಂಡ 10 ಶಾಸಕರಿಂದ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ಬನ್ನಿ. ನಾನು ಬಳ್ಳಾರಿಗೆ ಬಂದಿದ್ದೇನೆ, ಜನರ ಮುಂದೆ ತೀರ್ಮಾನವಾಗಲಿ. ಮುಂಬರುವ ಚುನಾವಣೆಯಲ್ಲಿ ಬಳ್ಳಾರಿಯ ಹತ್ತಕ್ಕೆ ಹತ್ತು ಕ್ಷೇತ್ರಗಳನ್ನು ಗೆದ್ದು ತೋರಿಸುತ್ತೇವೆ ಎಂದು ಸವಾಲು ಹಾಕಿದರು.

ಹಗರಣದ ಹಣದಲ್ಲೇ ತುಕಾರಾಂ ಪತ್ನಿ ಶಾಸಕಿಯಾದರು

ವಾಲ್ಮೀಕಿ ನಿಗಮದ ಲೂಟಿ ಮಾಡಿದ ಹಣವನ್ನು ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಳ್ಳಲಾಗಿದೆ. ಇದೇ ಹಣದ ಬಲದಿಂದ ಸಂಸದ ತುಕಾರಾಂ ಅವರ ಪತ್ನಿ ಶಾಸಕಿಯಾಗಿದ್ದಾರೆ. ಇಂತಹ ಭ್ರಷ್ಟಾಚಾರದ ಹಿನ್ನೆಲೆ ಇರುವ ಕುಟುಂಬಕ್ಕೆ ಮತ್ತೆ ಮಂತ್ರಿ ಸ್ಥಾನ ನೀಡಿದರೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾಗೇಂದ್ರ ರಾಜೀನಾಮೆ ನೀಡಿದ ತಕ್ಷಣ ಹಗರಣ ಮುಗಿಯಿತು ಎಂದು ಭಾವಿಸಬೇಡಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವವರೆಗೂ ಬಿಜೆಪಿ ಮತ್ತು ನಮ್ಮ ನಾಯಕರಾದ ವಿಜಯೇಂದ್ರ ಹಾಗೂ ಆರ್. ಅಶೋಕ್ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧವೂ ಟೀಕೆ

ಸದನದಲ್ಲೇ ಹಗರಣ ನಡೆದಿರುವುದನ್ನು ಒಪ್ಪಿಕೊಂಡ ಸಿದ್ದರಾಮಯ್ಯ ಅವರು, ನಾಗೇಂದ್ರನಿಂದ ಯಾಕೆ ರಾಜೀನಾಮೆ ಪಡೆದರು? ತಪ್ಪೇ ಮಾಡದಿದ್ದರೆ ರಾಜೀನಾಮೆ ಪಡೆಯುವ ಅಗತ್ಯವಿರಲಿಲ್ಲ. ಈಗ ಡಿಕೆ ಶಿವಕುಮಾರ್ ಅವರೂ ಕೂಡ ಪಕ್ಷಕ್ಕೆ ಮುಜುಗರವಾಗುತ್ತದೆ ಎಂದು ರಾಜೀನಾಮೆ ಕೊಡಿಸಿದ್ದಾರೆ. ಮನುಸ್ಮೃತಿ, ದಲಿತ ಎಂಬ ಪದಗಳನ್ನು ಬಳಸಿ ಜನರ ದಿಕ್ಕು ತಪ್ಪಿಸಲು ನೋಡಬೇಡ. ಜನರೇನು ಮೂರ್ಖರಲ್ಲ, ನಿನ್ನ ಪ್ರತಿಯೊಂದು ವಂಚನೆಯೂ ಈಗ ಬಯಲಾಗಿದೆ ಎಂದು ರೆಡ್ಡಿ ವಾಗ್ದಾಳಿ ನಡೆಸಿದರು.

ShareTweetSendShare
Join us on:

Related Posts

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಅಕ್ರಮದ ಆರೋಪ; ಪ್ರಿಯಾಂಕ್ ಖರ್ಗೆ ವಿರುದ್ಧ HDK ವಾಗ್ದಾಳಿ, ‘ನನ್ನ ಮುಂದೆ ಹಗುರವಾಗಿ ಮಾತನಾಡಬೇಡಿ’ ಎಚ್ಚರಿಕೆ

by Shwetha
August 30, 2026
0

ರಾಜ್ಯ ರಾಜಕಾರಣದಲ್ಲಿ KPSC ನೇಮಕಾತಿ ಅಕ್ರಮದ ಆರೋಪದ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಕುಮಾರಸ್ವಾಮಿ...

ನಾಗೇಂದ್ರ ಸುರಿಸಿದ ಕಣ್ಣೀರು ಬಿಜೆಪಿಯನ್ನೇ ಸುಟ್ಟು ಭಸ್ಮ ಮಾಡಲಿದೆ: ಬಿ. ನಾಗೇಂದ್ರ ಪರ ಸಚಿವ ಮಧು ಬಂಗಾರಪ್ಪ ಭರ್ಜರಿ ಬ್ಯಾಟಿಂಗ್

ನಾಗೇಂದ್ರ ಸುರಿಸಿದ ಕಣ್ಣೀರು ಬಿಜೆಪಿಯನ್ನೇ ಸುಟ್ಟು ಭಸ್ಮ ಮಾಡಲಿದೆ: ಬಿ. ನಾಗೇಂದ್ರ ಪರ ಸಚಿವ ಮಧು ಬಂಗಾರಪ್ಪ ಭರ್ಜರಿ ಬ್ಯಾಟಿಂಗ್

by Shwetha
August 30, 2026
0

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ನಾಗೇಂದ್ರ ಅವರ ಬೆನ್ನಿಗೆ...

ಬಿಡದಿ ಟೌನ್ ಶಿಪ್ ಕಿಚ್ಚು- ಕೇಂದ್ರ ಸಚಿವರಾಗಿ ಚಿಲ್ಲರೆ ರಾಜಕಾರಣ ಮಾಡ್ತೀರಾ: ಕ್ಷುಲ್ಲಕ ಹೇಳಿಕೆ ಕೊಡಲು ನಾಚಿಕೆಯಾಗಲ್ವಾ; ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಗುಡುಗು

HDK–ಬಾಲಕೃಷ್ಣ ವಾಕ್ಸಮರ ತೀವ್ರ; ‘ಗನ್ ತೋರಿಸಿದ ಆರೋಪ ಸಾಬೀತುಪಡಿಸಿ’ ಎಂದು ಸಚಿವ ಸವಾಲು

by Shwetha
August 30, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸಚಿವ ಹೆಚ್.ಸಿ. ಬಾಲಕೃಷ್ಣ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ತಮ್ಮ ವಿರುದ್ಧ 'ಗನ್ ತೋರಿಸಿ ಬೆದರಿಕೆ ಹಾಕಿದ್ದರು'...

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (30-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 30, 2026
0

ದಿನ ಭವಿಷ್ಯ: 30-08-2026 1. ಮೇಷ ರಾಶಿ ಸಾಮಾನ್ಯ ಫಲ: ಇಂದಿನ ದಿನ ನಿಮಗೆ ಅತ್ಯುತ್ಸಾಹದಿಂದ ಕೂಡಿರುತ್ತದೆ. ನಿಮ್ಮಲ್ಲಿರುವ ನಾಯಕತ್ವದ ಗುಣಗಳು ಮುನ್ನೆಲೆಗೆ ಬರಲಿವೆ. ಉದ್ಯೋಗ ಮತ್ತು...

ashoka-demands-drought-declaration-farmer-loan-waiver-nagendra-resignation

ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟದಿಂದಾಗಿ ರಾಜೀನಾಮೆ ನೀಡಿದ ನಾಗೇಂದ್ರ, ಇದು ದಲಿತ ಸಮುದಾಯಕ್ಕೆ ಸಂದ ಜಯ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
August 29, 2026
0

ಇದು ಕೇವಲ ಬಿಜೆಪಿಗೆ ಸಿಕ್ಕಿರುವ ಜಯವಲ್ಲ, ಇದು ಇಡೀ ದಲಿತ ಸಮುದಾಯಕ್ಕೆ ಸಂದಿರುವ ಜಯ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram