ADVERTISEMENT
Friday, May 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಮಲ್ಲಿಕಾರ್ಜುನ ಖರ್ಗೆಯವರನ್ನೇ ಸಿಎಂ ಮಾಡಿ: ದಲಿತರಿಗೆ ಕಾಂಗ್ರೆಸ್ ನಿರಂತರ ವಂಚನೆ ಮಾಡುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಗುಡುಗು

Shwetha by Shwetha
May 29, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೀದರ್: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಗಾಳಿ ಬೀಸುತ್ತಿರುವ ನಡುವೆಯೇ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವೇಳೆ ರಾಜೀನಾಮೆ ನೀಡಿದರೆ, ಆ ಸ್ಥಾನಕ್ಕೆ ಅತ್ಯಂತ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ. ಜಿ. ಪರಮೇಶ್ವರ್ ಅವರನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬೀದರ್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ರಾಜ್ಯವನ್ನು ಆಳಿದ ಪ್ರಭಾವಿ ನಾಯಕರು. ಅವರಿಗೆ ಹೈಕಮಾಂಡ್ ಸೂಕ್ತ ಗೌರವ ನೀಡಬೇಕಿತ್ತು. ಆದರೆ ದೆಹಲಿಗೆ ಹೋದಾಗ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಅತ್ಯಂತ ಕಠೋರವಾಗಿ ನಡೆಸಿಕೊಂಡಿದ್ದಾರೆ ಎಂಬ ಸುದ್ದಿ ಇದೆ. ಕೂಡಲೇ ರಾಜೀನಾಮೆ ಸಲ್ಲಿಸಿ ಎಂದು ಅವರಿಗೆ ತಾಕೀತು ಮಾಡಲಾಗಿದೆ ಎನ್ನಲಾಗಿದೆ. ಹಿರಿಯ ನಾಯಕರೊಬ್ಬರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಇದರಿಂದ ಅಸಮಾಧಾನವಾಗುವುದು ಮತ್ತು ಆಕ್ರೋಶ ಬರುವುದು ಸಹಜ ಎಂದು ಹೇಳಿದರು.

Related posts

ಸಿದ್ದರಾಮನಹುಂಡಿಯಿಂದ ವಿಧಾನಸೌಧದವರೆಗೆ: ರಾಜಕಾರಣದ ದಿಕ್ಕು ಬದಲಿಸಿದ ಜನನಾಯಕನ  ಯುಗಾಂತ್ಯ

ಸಿದ್ದರಾಮನಹುಂಡಿಯಿಂದ ವಿಧಾನಸೌಧದವರೆಗೆ: ರಾಜಕಾರಣದ ದಿಕ್ಕು ಬದಲಿಸಿದ ಜನನಾಯಕನ ಯುಗಾಂತ್ಯ

May 29, 2026
ಪ್ರಿಯಾಂಕಾ ಗಾಂಧಿ ತಂತ್ರ ಯಶಸ್ವಿ: ಡಿಕೆ ಶಿವಕುಮಾರ್‌ಗೆ ಸಿಎಂ ಗಾದಿ ಫಿಕ್ಸ್!

ಪ್ರಿಯಾಂಕಾ ಗಾಂಧಿ ತಂತ್ರ ಯಶಸ್ವಿ: ಡಿಕೆ ಶಿವಕುಮಾರ್‌ಗೆ ಸಿಎಂ ಗಾದಿ ಫಿಕ್ಸ್!

May 29, 2026

ಕಾಂಗ್ರೆಸ್ ಹೈಕಮಾಂಡ್ ಎಂದರೆ ಕೇವಲ ಗಾಂಧಿ ಕುಟುಂಬ ಮಾತ್ರವೇ ಎಂದು ಪ್ರಶ್ನಿಸಿದ ಛಲವಾದಿ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದರೂ ಅವರಿಗೆ ಅಧಿಕಾರ ನೀಡುವಲ್ಲಿ ಬೆಲೆ ಇಲ್ಲದಂತಾಗಿದೆ. ಖರ್ಗೆ ಅವರಂತಹ ಎತ್ತರದ ವ್ಯಕ್ತಿತ್ವದ ದಲಿತ ನಾಯಕರು ದೇಶದಲ್ಲಿ ಬೇರೆ ಯಾರಿದ್ದಾರೆ? ಅವರಿಗೇ ಮುಖ್ಯಮಂತ್ರಿ ಸ್ಥಾನ ನೀಡಬಹುದಿತ್ತು. ಆದರೆ ಕಾಂಗ್ರೆಸ್ ಕಳೆದ 80 ವರ್ಷಗಳಿಂದ ದಲಿತ ಸಮುದಾಯವನ್ನು ಕೇವಲ ವಂಚಿಸುತ್ತಾ ಬಂದಿದೆ ಎಂದು ಕಿಡಿಕಾರಿದರು.

ಈ ಬಾರಿಯಾದರೂ ದಲಿತ ನಾಯಕರು ಸಿಎಂ ಆಗುತ್ತಾರೆ ಎಂದು ರಾಜ್ಯದ ಜನರು ಭಾವಿಸಿದ್ದರು. ಆದರೆ ಕಾಂಗ್ರೆಸ್ ಈಗಲೂ ಅಂತಹ ನಿರ್ಧಾರಕ್ಕೆ ಬಂದಿಲ್ಲ. ದಲಿತರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಧೋರಣೆ ಹೀಗೆಯೇ ಮುಂದುವರಿದರೆ, ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಪಕ್ಷವು ಕರ್ನಾಟಕದಲ್ಲಿಯೂ ಇನ್ನು ಮುಂದೆ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು.

ShareTweetSendShare
Join us on:

Related Posts

ಸಿದ್ದರಾಮನಹುಂಡಿಯಿಂದ ವಿಧಾನಸೌಧದವರೆಗೆ: ರಾಜಕಾರಣದ ದಿಕ್ಕು ಬದಲಿಸಿದ ಜನನಾಯಕನ  ಯುಗಾಂತ್ಯ

ಸಿದ್ದರಾಮನಹುಂಡಿಯಿಂದ ವಿಧಾನಸೌಧದವರೆಗೆ: ರಾಜಕಾರಣದ ದಿಕ್ಕು ಬದಲಿಸಿದ ಜನನಾಯಕನ ಯುಗಾಂತ್ಯ

by Shwetha
May 29, 2026
0

ಮೈಸೂರು ಜಿಲ್ಲೆಯ ಒಂದು ಪುಟ್ಟ ಹಳ್ಳಿ ಸಿದ್ದರಾಮನಹುಂಡಿ. ಅಲ್ಲಿನ ಮಣ್ಣಿನ ಮಗನೊಬ್ಬ ಇಡೀ ಕರ್ನಾಟಕದ ರಾಜಕೀಯ ದಿಕ್ಕನ್ನೇ ಬದಲಿಸುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ವಕೀಲ ವೃತ್ತಿಯಿಂದ ಆರಂಭವಾಗಿ...

ಪ್ರಿಯಾಂಕಾ ಗಾಂಧಿ ತಂತ್ರ ಯಶಸ್ವಿ: ಡಿಕೆ ಶಿವಕುಮಾರ್‌ಗೆ ಸಿಎಂ ಗಾದಿ ಫಿಕ್ಸ್!

ಪ್ರಿಯಾಂಕಾ ಗಾಂಧಿ ತಂತ್ರ ಯಶಸ್ವಿ: ಡಿಕೆ ಶಿವಕುಮಾರ್‌ಗೆ ಸಿಎಂ ಗಾದಿ ಫಿಕ್ಸ್!

by Shwetha
May 29, 2026
0

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ದಶಕದ ದೊಡ್ಡ ಬದಲಾವಣೆಯೊಂದು ಸಂಭವಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ದೆಹಲಿ ಮತ್ತು ಬೆಂಗಳೂರಿನ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಈಗ...

​ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ: ಜೂನ್ 1ರಿಂದ ರಾಜ್ಯಾದ್ಯಂತ ಶಾಲೆಗಳು ಪುನಾರಂಭ – ಸಚಿವ ಮಧು ಬಂಗಾರಪ್ಪ ಘೋಷಣೆ

​ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ: ಜೂನ್ 1ರಿಂದ ರಾಜ್ಯಾದ್ಯಂತ ಶಾಲೆಗಳು ಪುನಾರಂಭ – ಸಚಿವ ಮಧು ಬಂಗಾರಪ್ಪ ಘೋಷಣೆ

by Shwetha
May 29, 2026
0

ಬೆಂಗಳೂರು: ರಾಜ್ಯದ ಶಾಲಾ ಮಕ್ಕಳ ಸುದೀರ್ಘ ಬೇಸಿಗೆ ರಜೆ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ಶೈಕ್ಷಣಿಕ ವರ್ಷದ ಕಲಿಕಾ ಹಬ್ಬಕ್ಕೆ ಜೂನ್ 1ರಂದು ಅಧಿಕೃತವಾಗಿ ಚಾಲನೆ ಸಿಗಲಿದೆ...

ದಿನ ಭವಿಷ್ಯ (25-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (29-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 29, 2026
0

ದಿನ ಭವಿಷ್ಯ : 29-05-2026 ಮೇಷ ರಾಶಿ ಮೇಷ ರಾಶಿಯವರಿಗೆ ಈ ದಿನ ಅತ್ಯಂತ ಉತ್ಸಾಹದಿಂದ ಕೂಡಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಬಹುದಿನಗಳ ಕನಸು ನನಸಾಗುವ ಸಾಧ್ಯತೆ...

ಕೊನೆಗೂ ಡಿಕೆಶಿಗೆ ಕೂಲಿ ಕೂಡಲು ರೆಡಿಯಾದ ರಾಮಯ್ಯ : ಡಿಕೆಶಿ ರಾಜ್ಯಭಾರದೊಂದಿಗೆ  ಸಿದ್ದರಾಮಯ್ಯ ಯುಗಾಂತ್ಯದ ಕೌಂಟ್‌ಡೌನ್ ಶುರು!

ಕೊನೆಗೂ ಡಿಕೆಶಿಗೆ ಕೂಲಿ ಕೂಡಲು ರೆಡಿಯಾದ ರಾಮಯ್ಯ : ಡಿಕೆಶಿ ರಾಜ್ಯಭಾರದೊಂದಿಗೆ ಸಿದ್ದರಾಮಯ್ಯ ಯುಗಾಂತ್ಯದ ಕೌಂಟ್‌ಡೌನ್ ಶುರು!

by Shwetha
May 28, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಇಂದು ಒಂದು ಮಹತ್ವದ ದಿನವಾಗಿ ದಾಖಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಕುರ್ಚಿ ಬದಲಾವಣೆಯ ಹಗ್ಗಜಗ್ಗಾಟ ಈಗ ಅಂತಿಮ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram