ADVERTISEMENT
Friday, June 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಲೆನಾಡಿನ ರಾಜಮಾರ್ಗಗಳು ಮತ್ತು ಧೂಪದ ಮರಗಳ ಸಾಲು; ಮುಳುಗಿ ಹೋದ ಪರಂಪರೆ:

Shwetha by Shwetha
December 22, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv Naavu kelada charitre episode10
Share on FacebookShare on TwitterShare on WhatsappShare on Telegram

ಮಲೆನಾಡಿನ ರಾಜಮಾರ್ಗಗಳು ಮತ್ತು ಧೂಪದ ಮರಗಳ ಸಾಲು; ಮುಳುಗಿ ಹೋದ ಪರಂಪರೆ: Saakshatv Naavu kelada charitre episode10

ದೂರದ ಡಚ್, ಲಂಡನ್ ಮತ್ತು ಫೋರ್ಚುಗೀಸ್ ಆರ್ಕೈವ್ಸ್ ನಲ್ಲಿ ಇರುವ ದಾಖಲಾತಿಗಳನ್ನು ಪರಿಶೋಧಿಸಿದರೆ ಅದರಲ್ಲಿ ಇಂದಿನ ಕರ್ನಾಟಕ್ಕೆ ಸಂಬಂಧಿಸಿದ ಬಿದನೂರು ಅಂದರೆ ಇಕ್ಕೇರಿ ನಾಯಕರ ಮಲೆನಾಡು ಮತ್ತು ಕರಾವಳಿ ಪ್ರದೇಶದ ದಾಖಲಾತಿಗಳೇ ಹೆಚ್ಚು ಇರುವುದು. ಇಕ್ಕೇರಿ ಸಂಸ್ಥಾನದ ಧೂಪದ ಮರಗಳ ಸಾಲಿನ ರಾಜಮಾರ್ಗಗಳು ಎಷ್ಟರಮಟ್ಟಿಗೆ ಪ್ರಸಿದ್ಧಿ ಪಡೆದಿತ್ತು ಅಂದರೆ ದೂರದ ಫೋರ್ಚುಗೀಸ್ ಆರ್ಕೈವ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ಇಡೀ ಕೋಣೆ ತುಂಬುವಷ್ಟು ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿದೆ. Saakshatv Naavu kelada charitre episode10

Related posts

ವಿನಯ್ ಕುಲಕರ್ಣಿ ಶಾಸಕ ಸ್ಥಾನದ ಭವಿಷ್ಯ ಏನು? ಸಿಎಂ ಕುರ್ಚಿ ಮೇಲೆ ಖಾದರ್ ಕಣ್ಣು: 20 ವರ್ಷಗಳ ನಂತರದ ಗುಟ್ಟು ಬಿಚ್ಚಿಟ್ಟ ಸಭಾಧ್ಯಕ್ಷ

ನಾವು ಹೋಗಿ ಮಕ್ಕಳು ಮಾಡಿ ಅಂತ ಹೇಳೋಕೆ ಆಗುತ್ತಾ? ಜನನ ಪ್ರಮಾಣ ಕುಸಿತದ ಬಗ್ಗೆ ಆರೋಗ್ಯ ಸಚಿವ ಯುಟಿ ಖಾದರ್ ಉಡಾಫೆ ಮಾತು

June 26, 2026
ವೈಭವ್ ಶತಕ ಬಾರಿಸಿದರೆ ಬೆತ್ತಲೆಯಾಗಿ ಓಡುತ್ತೇನೆ; ಪಾಕ್ ಮಾಜಿ ಆಟಗಾರನ ವಿಚಿತ್ರ ಸವಾಲು

ವೈಭವ್ ಶತಕ ಬಾರಿಸಿದರೆ ಬೆತ್ತಲೆಯಾಗಿ ಓಡುತ್ತೇನೆ; ಪಾಕ್ ಮಾಜಿ ಆಟಗಾರನ ವಿಚಿತ್ರ ಸವಾಲು

June 26, 2026

Saakshatv Naavu kelada charitre episode9

ಇನ್ನೂ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕರ್ನಾಟಕದ ಅತಿ ಶ್ರೀಮಂತ, ಪ್ರಭಾವಿ ಮತ್ತು ಬಲಿಷ್ಠ ರಾಜ್ಯವಾಗಿ ಹೊರಹೊಮ್ಮಿದ ಇಕ್ಕೇರಿ ಸಂಸ್ಥಾನ ಅಂದು ವಿದೇಶೀ ವ್ಯಾಪಾರಸ್ಥರ ಅಚ್ಚು ಮೆಚ್ಚಿನ ತಾಣವಾಗಿತ್ತು. ಫೋರ್ಚುಗೀಸ್ ಅವರ ದಾಖಲಾತಿಯ ಪ್ರಕಾರ 1600ರಲ್ಲೆ ವಿಜಯನಗರದ ಅಧೀನದಲ್ಲಿರುವ ಇಕ್ಕೇರಿ ನಾಯಕರು ಅಂದಿನ ಕಾಲದಲ್ಲೇ ಕಬ್ಬಿಣದ ರಾಕೆಟ್, ಕತ್ತಿ, ಫಿರಂಗಿ, ಬಂದೂಕು ಮತ್ತು ಇತರೆ ಆಯುಧ ತಯಾರಿಕೆಯಲ್ಲಿ ಉನ್ನತ ಮಟ್ಟದ ತಂತ್ರಜ್ಞಾನವನ್ನು ಹೊಂದಿರುವ ಬಗ್ಗೆ ಉಲ್ಲೇಖವಿರುವುದು ನಿಜಕ್ಕೂ ನಮಗೆಲ್ಲರಿಗೂ ಹೆಮ್ಮೆ ಪಡುವ ಸಂಗತಿ. ನೀರಾವರಿ ಪದ್ಧತಿಯಲ್ಲಿ ವಿಜಯನಗರದ ರಾಯರ ನಂತರ ಅದನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ಕೀರ್ತಿ ಸಹಾ ನಮ್ಮ ಇಕ್ಕೇರಿ ನಾಯಕರಿಗೆ ಸಲ್ಲುತ್ತದೆ. ಇಂದು ಬಿದನೂರಿನ ಪೂರ್ವದಿಂದ ಉತ್ತರದ ಮುಖಾಂತರ ವಾಯುವ್ಯ ದಿಕ್ಕಿನಲ್ಲಿ ಹರಿಯುವ ಶರಾವತಿ ಮತ್ತು ಅದರ ಉಪನದಿಗಳಿಗೆ ಅಡ್ಡಲಾಗಿ ಕಟ್ಟಿಸಿದ ಹಲವಾರು ಸೇತುವೆಗಳು ಇಂದಿಗೂ ಸಹಾ ನಮ್ಮ ನಾಯಕರು ಹೊಂದಿದ ತಂತ್ರಜ್ಞಾನದ ಜೀವಂತ ಸಾಕ್ಷಿಯಾಗಿದೆ.
Saakshatv Naavu kelada charitre episode9

ಇಕ್ಕೇರಿ ಸಂಸ್ಥಾನದ ಕರಾವಳಿಯ ಕೆಲವು ನಿರ್ಧಿಷ್ಟ ಬಂದರಿನಲ್ಲಿ ತಯಾರಾಗುತ್ತಿದ್ದ ಹಡಗು ನಿರ್ಮಾಣದ ಬಗ್ಗೆ ರೋಚಕ ಮಾಹಿತಿಗಳು ಇಂದು ದೂರದ ವಿದೇಶಿ ಆರ್ಕೈವ್ ನಲ್ಲಿ ಸೆರೆ ಆಗಿದ್ದು, ಅದರಲ್ಲಿ ಇರುವ ಮಾಹಿತಿ ನಮ್ಮ ನಾಯಕರ ಬಗ್ಗೆ ಇದ್ದ ಪ್ರೀತಿ ಮತ್ತು ಅಭಿಮಾನ ಇಮ್ಮಡಿ ಗೊಳಿಸುತ್ತದೆ. ಹಡಗಿಗೆ ಬೇಕಾದ ಮರಗಳು, ಮರಗಳ ವಿಶಿಷ್ಟ ಲಕ್ಷಣಗಳು, ಅದರ ಗಾತ್ರ ಆಯಸ್ಸು ಹೀಗೆ ಹತ್ತು ಹಲವಾರು ಮಾಹಿತಿಗಳು ನಿಜಕ್ಕೂ ರೋಚಕ. ನಮ್ಮ ಮಲೆನಾಡಿನ ಕಾಳು ಮೆಣಸು ಏಲಕ್ಕಿಯ ಜೊತೆಗೆ ಹಡಗು ನಿರ್ಮಾಣಕ್ಕೆ ಬೇಕಾದ ಮರಗಳಿಗೆ ವಿದೇಶಿ ವ್ಯಾಪಾರಸ್ಥರಿಂದ ಬಹು ದೊಡ್ಡ ಬೇಡಿಕೆ ಇದ್ದಿದ್ದು ಇಂದು ಯಾರಿಗೂ ತಿಳಿದಿಲ್ಲದ ಸಂಗತಿ. ವಿಜಯನಗರದ ರಾಯರ ಕಾಲದಿಂದ ಇಕ್ಕೇರಿ ನಾಯಕರ ಕಾಲದ ವರೆಗೂ ಅರಬ್, ಫೋರ್ಚುಗೀಸ್, ಡಚ್ ಮತ್ತು ಆಂಗ್ಲರಿಗೆ ಹಡಗು ಕಟ್ಟಲು ಮರಗಳನ್ನು ಪೂರೈಸಿದ್ದು ನಮ್ಮ ಮಲೆನಾಡು. ಒಂದರ್ಥದಲ್ಲಿ ಇಡೀ ವಿಶ್ವಕ್ಕೆ ಒಂದು ಕಾಲದಲ್ಲಿ ಅನ್ನ, ಮಸಾಲೆ ಪದಾರ್ಥಗಳು ಮತ್ತು ಮರಗಳನ್ನು ಪೂರೈಸಿದ್ದು ನಮ್ಮ ಮಲೆನಾಡೇ ಹಾಗಾಗಿ ನಮ್ಮ ಋಣದಲ್ಲಿ ಬಹಳ ದೇಶಗಳು ಇರುವುದು ಇನ್ನೊಂದು ಅಂಶ.

Saakshatv Naavu kelada charitre episode9

ಆದರೆ ಇಂದು ನಮ್ಮ ರಾಜ್ಯದ ಗೆಜೆಟಿಯರ್ ಮತ್ತು ಇತರೆ ದಾಖಲಾತಿಗಳಲ್ಲಿ ಹಳೆಯ ಮೈಸೂರು ಪ್ರದೇಶದ ವೈಭವೀಕರಣ ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ. ಇಂದು ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಹಳೆಯ ಆಣೆಕಟ್ಟು, ಸೇತುವೆ ಮತ್ತು ಕಾಲುಸಂಕಗಳು ನಮ್ಮಲ್ಲಿ ಜೀವಂತವಾಗಿ ಇದ್ದರೂ ಸಹಾ ಅದರ ಬಗ್ಗೆ ಎಲ್ಲೂ ಮಾಹಿತಿ ನೀಡದೇ ಇರುವುದು ಮಲೆನಾಡಿನ ಜನರಿಗೆ ಮಾಡಿದ ದೊಡ್ಡ ಅನ್ಯಾಯ. ಇಂದು ವಿದೇಶಿಯರು ಸಂಚರಿಸಿದ ಮತ್ತು ದಾಖಲಿಸಿದ ನಮ್ಮ ಮಲೆನಾಡಿನ ಹಳೆಯ ರಾಜಮಾರ್ಗಗಳು ಶರಾವತಿ ಹಿನ್ನೀರಿನಲ್ಲಿ ಮುಳುಗಿ ಹೋದರೆ ಅದರ ಜೊತೆಗೆ ನಮ್ಮ (ಮಲೆನಾಡಿಗರ) ಜೀವನ, ಪ್ರತಿಷ್ಠೆ ಮತ್ತು ಭವ್ಯ ಪರಂಪರೆ ಸಹಾ ಮುಳುಗಿರುವುದು ಬೇಸರದ ಸಂಗತಿ. ಇಂದು ಆ ರಾಜಮಾರ್ಗಗಳು ಮುಳುಗಿರುವ ಹಿನ್ನೀರಿನಲ್ಲಿ ಪಯಣಿಸುವಾಗ ನಮ್ಮ ಮಲೆನಾಡಿನ ಹಿಂದಿನ ವೈಭವ ಕಣ್ಣೆದರು ಬಂದಿದ್ದು ಮಾತ್ರ ಸತ್ಯ.

-ಲೇಖನ ಮತ್ತು ಫೋಟೋಗಳು
ಅಜಯ್ ಕುಮಾರ್ ಶರ್ಮಾ
ಇತಿಹಾಸ ಸಂಶೋಧಕ, ಅಧ್ಯಯನಕಾರ ಮತ್ತು ಪರಿಸರ ಹೋರಾಟಗಾರರು

ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Saakshatv Naavu kelada charitre episode10ನಾವು ಕೇಳದ ಚರಿತ್ತೆ
ShareTweetSendShare
Join us on:

Related Posts

ವಿನಯ್ ಕುಲಕರ್ಣಿ ಶಾಸಕ ಸ್ಥಾನದ ಭವಿಷ್ಯ ಏನು? ಸಿಎಂ ಕುರ್ಚಿ ಮೇಲೆ ಖಾದರ್ ಕಣ್ಣು: 20 ವರ್ಷಗಳ ನಂತರದ ಗುಟ್ಟು ಬಿಚ್ಚಿಟ್ಟ ಸಭಾಧ್ಯಕ್ಷ

ನಾವು ಹೋಗಿ ಮಕ್ಕಳು ಮಾಡಿ ಅಂತ ಹೇಳೋಕೆ ಆಗುತ್ತಾ? ಜನನ ಪ್ರಮಾಣ ಕುಸಿತದ ಬಗ್ಗೆ ಆರೋಗ್ಯ ಸಚಿವ ಯುಟಿ ಖಾದರ್ ಉಡಾಫೆ ಮಾತು

by Shwetha
June 26, 2026
0

ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮಕ್ಕಳ ಜನನ ಪ್ರಮಾಣದ ಕುರಿತು ನೀಡಿರುವ ಹೇಳಿಕೆಯೊಂದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಲ್ಸ್ ಪೋಲಿಯೋ ಅಭಿಯಾನದ ಕುರಿತು...

ವೈಭವ್ ಶತಕ ಬಾರಿಸಿದರೆ ಬೆತ್ತಲೆಯಾಗಿ ಓಡುತ್ತೇನೆ; ಪಾಕ್ ಮಾಜಿ ಆಟಗಾರನ ವಿಚಿತ್ರ ಸವಾಲು

ವೈಭವ್ ಶತಕ ಬಾರಿಸಿದರೆ ಬೆತ್ತಲೆಯಾಗಿ ಓಡುತ್ತೇನೆ; ಪಾಕ್ ಮಾಜಿ ಆಟಗಾರನ ವಿಚಿತ್ರ ಸವಾಲು

by Shwetha
June 26, 2026
0

ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶದ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್...

ಕ್ಷಮೆ ಕೇಳಿದ್ರೂ ಆ ಮಾತು ಅಳಿಸಿ ಹೋಗಲ್ಲ: ನಟಿ ರನ್ಯಾ ರಾವ್ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದ ಯತ್ನಾಳ್‌ಗೆ ಹೈಕೋರ್ಟ್ ಖಡಕ್ ವಾರ್ನಿಂಗ್

ಕ್ಷಮೆ ಕೇಳಿದ್ರೂ ಆ ಮಾತು ಅಳಿಸಿ ಹೋಗಲ್ಲ: ನಟಿ ರನ್ಯಾ ರಾವ್ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದ ಯತ್ನಾಳ್‌ಗೆ ಹೈಕೋರ್ಟ್ ಖಡಕ್ ವಾರ್ನಿಂಗ್

by Shwetha
June 26, 2026
0

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರ ಬಗ್ಗೆ ಅತ್ಯಂತ ಅವಹೇಳನಕಾರಿ ಮತ್ತು ಅಶ್ಲೀಲ ಮಾತುಗಳನ್ನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕರ್ನಾಟಕ...

ಅಡ್ಡ ಮತದಾನ ವಿವಾದ; ಅಚ್ಚರಿಯ ಹೇಳಿಕೆ ನೀಡಿದ ಎಸ್.ಟಿ. ಸೋಮಶೇಖರ್

ಅಡ್ಡ ಮತದಾನ ವಿವಾದ; ಅಚ್ಚರಿಯ ಹೇಳಿಕೆ ನೀಡಿದ ಎಸ್.ಟಿ. ಸೋಮಶೇಖರ್

by Shwetha
June 26, 2026
0

ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನಡುವೆಯೇ, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಎಸ್.ಟಿ. ಸೋಮಶೇಖರ್ ಹೊಸ ಆರೋಪವನ್ನು...

ಇವರೇನು ಬದನೆಕಾಯಿ ಬೆಳೆದು ಆಸ್ತಿ ಮಾಡಿದ್ರಾ: ಗಂಡಸ್ತನದ ರಾಜಕಾರಣ ಮಾಡಿ – ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ವಿರುದ್ಧ ನಿಖಿಲ್ ರೋಷಾವೇಷ

ಇವರೇನು ಬದನೆಕಾಯಿ ಬೆಳೆದು ಆಸ್ತಿ ಮಾಡಿದ್ರಾ: ಗಂಡಸ್ತನದ ರಾಜಕಾರಣ ಮಾಡಿ – ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ವಿರುದ್ಧ ನಿಖಿಲ್ ರೋಷಾವೇಷ

by Shwetha
June 26, 2026
0

ಕುಮಾರಸ್ವಾಮಿ ಕುಟುಂಬದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ 100 ಎಕರೆ ಬೇನಾಮಿ ಆಸ್ತಿ ಆರೋಪ ಇದೀಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ. ಸಚಿವ ಎಂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram