ಸ್ವರ ಲೋಕದ ಸಂಗೀತ ಮಾಂತ್ರಿಕನ ಅಗಲಿಕೆಗೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. “ಬಿಜೆಪಿ ಚಾಣಾಕ್ಯ” ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಸಂತಾಪ ಸೂಚಿಸಿದ್ದಾರೆ.
ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ ಲೆಜೆಂಡರಿ ಸಿಂಗರ್, ಪದ್ಮ ಭೂಷಣ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯಿಂದ ಬಹಳ ನೋವಾಗಿದೆ. ಅವರ ಹಾಡುಗಳ ಮೂಲಕ ನಮ್ಮ ನೆನಪಿನಲ್ಲಿ ಸದಾ ಅಮರ. ಅವರ ಪರಿವಾರ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪ. ಓಂ ಶಾಂತಿ.” ಎಂದು ಸಂತಾಪ ಸೂಚಿಸಿದ್ದಾರೆ.
ಮಮತಾ ಬ್ಯಾನರ್ಜಿ
ಇನ್ನೂ ಮಮತಾ ಬ್ಯಾರ್ಜಿ ಅವರು ಸಹ ಟ್ವೀಟ್ ಮಾಡಿದ್ದು, “ ಸಂಗೀತದ ಲೆಜೆಂಡ್ ಎಸ್ ಪಿ ಅವರ ನಿಧನದ ಸುದ್ದಿಯಿಂದ ತೀವ್ರ ಆಘಾತವಾಗಿದೆ. ಮುಂದಿನ ಪೀಳಿಗೆಗಳಲ್ಲಿಯೂ ಅವರ ಗೋಲ್ಡನ್ ವಾಯ್ಸ್ ಅಮರವಾಗಿರಲಿದೆ. ಅವರ ಕುಟುಂಬ , ಅಭಿಮಾನಿಗಳಿಗೆ ನನ್ನ ಸಂತಾಪ ಎಂದಿದ್ದಾರೆ.