‘ನಿಮ್ಮ ಈ ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ಜನರನ್ನು ಪ್ಯಾನಿಕ್ ಮಾಡಬೇಡಿ’ – ಹೆಚ್ ಡಿಕೆ
ಮಂಡ್ಯ : ನಿನ್ನೆ ಬೆಂಗಳೂರಿನಲ್ಲಿ ದೊಡ್ಡ ಡ್ರಾಮಾ ನಡೆದಿದೆ.. ಚಾಮರಾಜನಗರದ ಲೋಪ ಮುಚ್ಚುಲು ನಡೆಸಿರುವ ಡ್ರಾಮಾ ಇದು.. ಸಂಕಷ್ಟದ ಸಮಯದಲ್ಲಿ ಆಸ್ಪತ್ರೆಯಲ್ಲಿ ರಾಜಕಾರಣ ಬೇಕಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಿಡಿಕಾರಿದ್ಧಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಆಸ್ಪತ್ರೆಯಲ್ಲಿ ಕೆಲಸ ಮಾಡೋರು ಯಾವ ಜಾತಿಯವರಾದರೇನು. ಇಲ್ಲೇನು ಮದರಸ ಮಾಡ್ತಿದ್ದೀರಾ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ. ಬೆಡ್ ಬ್ಲಾಕ್ ದಂಧೆ ವಿಚಾರವಾಗಿ ಮಾತನಾಡಿದ ಹೆಚ್ ಡಿಕೆ ಬಂಧಿತ ನೇತ್ರಾವತಿ ಅನ್ನೋಳು NGO ಒಂದರ ಮುಖ್ಯಸ್ಥೆ. ಆಕೆಯನ್ನ ಆಸ್ಪತ್ರೆಗೆ ಕರ್ತವ್ಯಕ್ಕೆ ನೇಮಿಸಿದ್ದು ಯಾರು. ನಿಮ್ಮ ಈ ಸರ್ಕಾರಕ್ಕೆ ಯೋಗ್ಯತೆ, ಮಾನ ಮರ್ಯಾದೆ ಇದ್ದರೆ..ಈ ರಾಜ್ಯದ ಜನರನ್ನ ಪ್ಯಾನಿಕ್ ಮಾಡಬೇಡಿ.. ನಿಮ್ಮ ಲೋಪಗಳನ್ನ ಮುಚ್ಚಿಕೊಳ್ಳಲು ಹೊಸ ಡ್ರಾಮಾ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ ಸಿಸಿಬಿ ತನಿಖೆಗೆ ಕೊಡ್ತೀನಿ ಅಂತೀರಿ.. ಡ್ರಗ್ಸ್ ಕೇಸ್, ಸಿಡಿ ಕೇಸ್ ಏನಾಯ್ತು ಎಲ್ಲವೂ ಗೊತ್ತಿದೆ.. ಇದರಲ್ಲಿ ಸರ್ಕಾರದ ಲೋಪವಿದೆ.. ನಿನ್ನೆ ದೊಡ್ಡ ಸಾಧನೆ ಮಾಡಿದ ಬಗ್ಗೆ ಹೇಳ್ತಾರೆ.. ತನ್ನ ಕ್ಷೇತ್ರದ ಒಬ್ಬನಿಗೆ ಬೆಡ್ ಕೊಡಿಸೋಕೆ ಆಗಲಿಲ್ಲ.. ನಿನ್ನೆಯಿಂದ ಬೆಡ್ ಗಾಗಿ ಅಲೆಯುತ್ತಿದ್ದಾನೆ.. ಬಿಬಿಎಂಪಿಗೆ 20-30 ಲಕ್ಷ ಕೊಟ್ಟು ಬರ್ತಾನೆ. ಅವನು ಹೇಗೆ ವರದಿ ಕೊಡ್ತಾನೆ. ವಿಧಾನಸೌಧದ ಲೆವಲ್ ನಲ್ಲಿ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಅಲ್ಲದೇ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿರುವ ಕುಮಾರಸ್ವಾಮಿ ಅವರು ವಿಶ್ವಗುರು ಎನಿಸಿಕೊಳ್ಳಲು ವಿದೇಶಗಳಿಗೆ ದಾನ ಮಾಡಿದ್ರು.. ಈಗ ವ್ಯಾಕ್ಸೀನ್ ಅಭಾವ ಹೆಚ್ಚಾಗಿದೆ.. ವಿದೇಶಗಳಿಂದಾದರೂ ಸರಿ ಕನಿಷ್ಠ 50 ಲಕ್ಷ ವ್ಯಾಕ್ಸೀನ್ ತಕ್ಷಣ ತರಿಸಲಿ. ಮಾರ್ಚ್ 15ರಲ್ಲೇ ನಾನು ಲಾಕ್ ಡೌನ್ ಮಾಡಿ ಅಂದಿದ್ದೆ.. ಲಾಕ್ ಡೌನ್ ಜೊತೆಗೆ ಬಡವರಿಗೆ ಅಗತ್ಯ ನೆರವು ಕೊಡಿ.. ಒಂದು ವರ್ಷ ಅಭಿವೃದ್ಧಿ ಕೆಲಸ ನಿಲ್ಲಿಸಿ.. ತಕ್ಷಣಕ್ಕೆ ತಂಬ್ ಇಂಪ್ರೆಸನ್ ಕಿತ್ತೆಸೆಯಿರಿ.. ಎಲ್ಲಾ ಬಡವರಿಗೆ ಉಚಿತ ಪಡಿತರ ಕೊಡಿ. ಎಂದಿದ್ಧಾರೆ. ಅಲ್ಲದೇ ರೆಮ್ ಡಿಸಿವೆರ್ ಸಿಕ್ತಿಲ್ಲ. ಬಹುತೇಕರು ಕಾಳಸಂತೆಯಲ್ಲಿ ಮಾರಾಟ ಮಾಡ್ತಿದ್ದಾರೆ. ಈ ಸರ್ಕಾರದಿಂದ ಯಾರೂ ಏನೂ ನಿರೀಕ್ಷೆ ಮಾಡೋಕೆ ಸಾಧ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.