Mangaluru Blast : ಇನ್ನೆರೆಡು ದಿನದಲ್ಲಿ ಉಗ್ರ ಶಾರಿಕ್ ವಿಚಾರಣೆ ಆರಂಭ…
ಮಂಗಳೂರು ಸ್ಪೋಟಕ್ಕೆ ಸಂಬಂಧಿಸಿದಂತೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿರುವ ಉಗ್ರ ಶಾರಿಕ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೆರೆಡು ದಿನಗಳಲ್ಲಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಶಾರಿಕ್ ಮೊಹ್ಮದ್ ವೈದ್ಯರ ಜೊತೆಗೆ ಸ್ವಲ್ಪ ಮಾತನಾಡುತ್ತಿದ್ದು, ಪೊಲೀಸರು ವಿಚಾರಣೆ ನಡೆಸಲು ಎರಡು ದಿನ ಅವಕಾಶ ನೀಡಲಾಗಿದೆ. ವಿಚಾರಣೆ ನಂತರ ಶಾರಿಕ್ನ ಮತ್ತಷ್ಟು ಸೀಕ್ರೆಟ್ ತಿಳಿಯಲಿದೆ. NIA ಶಾರಿಕ್ ವಿಚಾರಣೆ ಮಾಡಲು ತಯಾರಿ ಮಾಡಿಕೊಂಡಿದ್ಧಾರೆ.
ಈಗಾಗಲೇ NIA ಮಂಗಳೂರಿನಲ್ಲಿ ತನಿಖೆ ಮಾಡುತ್ತಿದ್ದು, ಸ್ಫೋಟದ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್, ಸ್ಫೋಟಕ ಸೇರಿದಂತೆ ಹಲವು ವಿಚಾರ ತನಿಖೆ ನಡೆಯುತ್ತಿದೆ. ತನಿಖಾಧಿಕಾರಿ ಎಲ್ಲದರ ಬಗ್ಗೆ ಶಾರಿಕ್ ವಿಚಾರಣೆ ಮಾಡಬೇಕಿದೆ.
ಮತ್ತೊಂದೆಡೆ, ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಹಿಂದಿನ ದಿನ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ರಕ್ಷಿತಾರಣ್ಯದಲ್ಲಿ ಸಾಟಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ ಎಂದು ಎಸ್ ಪಿ. ಋುಷಿಕೇಶ್ ಸೋನಾವಣೆ ಸ್ಪಷ್ಟಪಡಿಸಿದ್ದಾರೆ.
Mangaluru Blast: Terrorist Sharik trial to begin in next two days…