ದೇಶ ಬಿಟ್ಟು ಹೋಗದಂತೆ ದೆಹಲಿ ಉಪಮುಖ್ಯಮಂತ್ರಿಗೆ CBI ಲುಕ್ ಔಟ್ ನೋಟೀಸ್..
ದೆಹಲಿಯ ಉಪಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ಮತ್ತು ಇತರ 12 ಮಂದಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಲುಕ್ಔಟ್ ನೋಟಿಸ್ ನೀಡಿದೆ. ಅವರೆಲ್ಲರೂ ದೇಶ ತೊರೆಯದಂತೆ ನಿರ್ಬಂಧಿಸಿದೆ. ಅಬಕಾರಿ ನೀತಿ ಅನುಷ್ಠಾನದಲ್ಲಿ ಭ್ರಷ್ಟಾಚಾರ ಆರೋಪವನ್ನ ಮನೀಶ್ ಸಿಸೋಡಿಯಾ ಎದುರಿಸುತ್ತಿದ್ದಾರೆ. ಹಾಗಾಗಿ ಸಿಬಿಐ ಆವರ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದೆ.
ತಮಗೆ ಲುಕ್ ಔಟ್ ನೋಟಿಸ್ ನೀಡುರುವುದರ ವಿರುದ್ಧ ಮನೀಶ್ ಸಿಸೋಡಿಯಾ ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಿಬಿಐನ ಲುಕ್ಔಟ್ ನೋಟಿಸ್ ಅನ್ನು ಪ್ರಧಾನಿ ಮೋದಿಯವರ “ಗಿಮಿಕ್” ಎಂದು ಕರೆದಿದ್ದಾರೆ.
“ನಿಮ್ಮ ಎಲ್ಲಾ ದಾಳಿಗಳು ವಿಫಲವಾಗಿವೆ ಮತ್ತು ಏನೂ ಕಂಡುಬಂದಿಲ್ಲ… ಈಗ ನೀವು ಮನೀಶ್ ಸಿಸೋಡಿಯಾ ಪತ್ತೆಯಾಗಿಲ್ಲ ಎಂದು ಲುಕ್ಔಟ್ ಸುತ್ತೋಲೆ ಹೊರಡಿಸಿದ್ದೀರಿ. ಇದೇನು ಗಿಮಿಕ್ ಮೋದಿಜಿ…ನಾನು ದೆಹಲಿಯಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದೇನೆ. ನೀವು ನನ್ನನ್ನು ಹುಡುಕಲಾಗಲಿಲ್ಲವೇ? ಎಲ್ಲಿಗೆ ಬರಬೇಕೆಂದು ದಯವಿಟ್ಟು ಹೇಳಿ?” ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಎಎಪಿ ನಾಯಕ ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಿದ ನಂತರ ಸಿಸೋಡಿಯಾ ಈ ಹೇಳಿಕೆ ನೀಡಿದ್ದಾರೆ. ದೆಹಲಿ ಮದ್ಯ ನೀತಿಯ ಮೇಲಿನ ತನಿಖೆಗೆ ಸಂಬಂಧಿಸಿದಂತೆ ಸಂಸ್ಥೆಯು ಇತರ 13 ಜನರ ವಿರುದ್ಧವೂ ಇದೇ ರೀತಿಯ ನೋಟಿಸ್ ನೀಡಿದೆ.