ಕಲಬುರಗಿ: ವಿಶ್ವ ರಕ್ತದಿನದ ಅಂಗವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ರಕ್ತದಾನ ಮಾಡಿದರು.
ಕಲಬುರಗಿಯ ಜಿಲ್ಲಾಸ್ಪತ್ರೆ ಜಿಮ್ಸ್ನಲ್ಲಿ ಸಚಿವ ಸುಧಾಕರ್ ಜತೆ ಸಂಸದ ಡಾ.ಉಮೇಶ್ ಜಾಧವ್ ಕೂಡ ರಕ್ತದಾನ ಮಾಡಿದರು. ನಂತರ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿರ್ಮಿಸಿರುವ ಟ್ರಾಮಾ ಸೆಂಟರ್ ಪರಿಶೀಲನೆ ನಡೆಸಿದರು. ಟ್ರಾಮಾ ಸೆಂಟರ್ನ್ನು ಅಕ್ಟೋಬರ್ನಲ್ಲಿ ಉದ್ಘಾಟಿಸಲಾಗುವುದು. ಇದಕ್ಕೆ ಅಗತ್ಯವಿರುವ ಎಲ್ಲಾ ಕಾಮಗಾರಿಗಳನ್ನು ಮುಗಿಸಬೇಕು. ವೈದ್ಯಕೀಯ ಉಪಕರಣಗಳನ್ನು ತರಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಖಾಲಿಯಾಗಿರುವ ಪ್ರಾಧ್ಯಾಪರ ಹುದ್ದೆಗಳ ಭರ್ತಿಗೆ ತಕ್ಷಣವೇ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ಸಚಿವರು ಅಧಿಕಾರಿಗಳು ಸೂಚನೆ ನೀಡಿದರು.
ಸಿದ್ದರಾಮಯ್ಯ CM ಸ್ಥಾನಕ್ಕೆ ಅಡ್ಡಿ ಇಲ್ಲವೇ? ರಾಜಣ್ಣ ಮಹತ್ವದ ಸುಳಿವು
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ ಮಾಜಿ ಸಚಿವ KN ರಾಜಣ್ಣ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ಪುನಾರಚನೆ ನಡೆದರೂ...








