Monsoon Health Tips: ಮಳೆಗಾಲದಲ್ಲಿ ಚರ್ಮದ ತುರಿಕೆ ಮತ್ತು ಅಲರ್ಜಿಗೆ ಮನೆ ಮದ್ದು…
Monsoon Health Tips: ದೇಶದೆಲ್ಲೆಡೆ ಮಳೆಗಾಲ ಶುರುವಾಗಿದೆ ರಾಜ್ಯದಲ್ಲಂತೂ ವರುಣ ಅಬ್ಬರಿಸುತ್ತಿದ್ದಾನೆ. ಮಳೆಗಾಲದ ಜೊತೆ ಜೊತೆಗೆ ಸಾಂಕ್ರಾಮಿಕ ರೋಗಗಳ ಅಪಾಯವೂ ಹೆಚ್ಚಾಗುತ್ತಿದೆ. ಡೆಂಗ್ಯೂ-ಮಲೇರಿಯಾ ಸೇರಿದಂತೆ ಹಲವು ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳು ಮಾನ್ಸೂನ್ ನಲ್ಲಿ ಕಾಣಿಸಿಕೊಳ್ಳುತ್ತವೆ. ಈ ಋತುವಿನಲ್ಲಿ ಚರ್ಮದ ಅಲರ್ಜಿ, ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆಗಳು ಸಾಮಾನ್ಯ. ವಾತಾವರಣ, ಕೆಟ್ಟ ಗಾಳಿ, ಧೂಳು ಮತ್ತು ತೇವಾಂಶದ ಕಾರಣದಿಂದಾಗಿ ಕುತ್ತಿಗೆ, ಮೊಣಕೈಗಳು, ಕೈಗಳು, ಎದೆಯ ಕೆಳಗೆ, ಸೊಂಟದ ಚರ್ಮ ಇತ್ಯಾದಿಗಳಲ್ಲಿ ಹೆಚ್ಚಾಗಿ ಬೆವರು ಕಂಡುಬರುತ್ತದೆ. ಇದರಿಂದಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್ಗಳು ಉತ್ಪತ್ತಿಯಾಗುತ್ತವೆ. ಇದು ಅಲರ್ಜಿ, ಫಂಗಸ್, ರಿಂಗ್ವರ್ಮ್, ಸ್ಕೇಬಿಸ್, ಚರ್ಮದ ದದ್ದುಗಳು, ಗಂಟಲು ನೋವು, ಶೀತ ಮತ್ತು ಜ್ವರದಂತಹ ರೋಗಗಳಿಗೆ ಕಾರಣವಾಗುತ್ತದೆ. ತೇವಾಂಶ ಮತ್ತು ಬೆವರುವಿಕೆಯಿಂದಾಗಿ ಚರ್ಮದಲ್ಲಿ ತುರಿಕೆ ಪ್ರಾರಂಭವಾಗುತ್ತದೆ.
ನಿಮಗೂ ಮಳೆಗಾಲದಲ್ಲಿ ತುರಿಕೆ ಮತ್ತು ದದ್ದುಗಳ ಸಮಸ್ಯೆ ಇದ್ದರೆ ಈ ಮನೆಮದ್ದುಗಳನ್ನ ಒಮ್ಮೆ ಟ್ರೈ ಮಾಡಿ ಪರಿಹಾರ ಪಡೆಯಬಹುದು.
ಶ್ರೀಗಂಧದ ಪೇಸ್ಟ್
ಮಾನ್ಸೂನ್ ನಲ್ಲಿ ತ್ವಚೆಯ ತುರಿಕೆ ಹೆಚ್ಚಾದರೆ ಶ್ರೀಗಂಧದ ಪೇಸ್ಟ್ ನ್ನ ತ್ವಚೆಯ ಮೇಲೆ ಹಚ್ಚಿ. ಶ್ರೀಗಂಧ ಚರ್ಮದ ತುರಿಕೆಯನ್ನ ಕಡಿಮೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಶ್ರೀಗಂಧದ ಪುಡಿ ಸುಲಭವಾಗಿ ಸಿಗುತ್ತದೆ. ಇದಕ್ಕೆ ರೋಸ್ ವಾಟರ್ ಬೆರೆಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿ. ನಿಯಮಿತವಾದ ಹಚ್ಚುವುದರಿಂದ ತುರಿಕೆಗೆ ಪರಿಹಾರವನ್ನು ನೀಡುತ್ತದೆ. ತ್ವಚೆಯ ಮೈ ಬಣ್ಣವೂ ಕಾಂತಿಯುತವಾಗುತ್ತದೆ.
ತೆಂಗಿನ ಎಣ್ಣೆ
ತೆಂಗಿನೆಣ್ಣೆ ಚರ್ಮವನ್ನ ಮೃದುಗೊಳಿಸುವುದರ ಜೊತೆಗೆ ಸೋಂಕುಗಳನ್ನ ನಿವಾರಿಸುತ್ತದೆ. ತೆಂಗಿನ ಎಣ್ಣೆ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಮಾನ್ಸೂನ್ನಲ್ಲಿ ತೆಂಗಿನ ಎಣ್ಣೆ ಹಚ್ಚುವುದರಿಂದ ತುರಿಕೆ ಮತ್ತು ದದ್ದುಗಳು ಉಂಟಾಗುವುದಿಲ್ಲ.
ನಿಂಬೆ ಮತ್ತು ಅಡಿಗೆ ಸೋಡಾ
ಮಳೆಗಾಲದಲ್ಲಿ ತೇವಾಂಶದಿಂದ ಚರ್ಮ ತುರಿಕೆಯಾಗುತ್ತಿದ್ದರೆ ಎರಡು ಚಮಚ ಅಡುಗೆ ಸೋಡಾ ಮತ್ತು ಒಂದು ಚಮಚ ನಿಂಬೆಹಣ್ಣನ್ನು ಬೆರೆಸಿ ತ್ವಚೆಗೆ ಚೆನ್ನಾಗಿ ಹಚ್ಚಿಕೊಳ್ಳಿ. 5-10 ನಿಮಿಷಗಳ ನಂತರ ಚರ್ಮವನ್ನು ತೊಳೆಯಿರಿ. ದಿನಕ್ಕೆ ಒಮ್ಮೆ ಈ ವಿಧಾನವನ್ನು ಮಾಡುವುದರಿಂದ ತುರಿಕೆ ದೂರವಾಗುತ್ತದೆ.
ಬೇವಿನ ಮರ
ಬೇವು ಆಯುರ್ವೇದದ ಅದ್ಭುತ ಔಷಧಿ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಬೇವಿನ ಬಳಕೆ ಯಥೇಚ್ಛವಾಗಿ ಮಾಡಲಾಗುತ್ತದೆ. ತುರಿಕೆ ಸಮಸ್ಯೆ ದೂರವಾಗಬೇಕಾದರೆ ಬೇವಿನ ಸೊಪ್ಪನ್ನ ಅರೆದು ಚರ್ಮಕ್ಕೆ ಹಚ್ಚಿಕೊಳ್ಳಿ. ಬೇವಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತುರಿಕೆಗೆ ವೇಗವಾಗಿ ಪರಿಹಾರ ನೀಡುತ್ತದೆ.