ಹೊಸದಿಲ್ಲಿ, ಮೇ 15 : ನೈರುತ್ಯ ಮುಂಗಾರು ಈ ವರ್ಷ ನಿಗದಿತ ವೇಳೆಗಿಂತ ನಾಲ್ಕು ದಿನ ತಡವಾಗಿ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ತಲುಪುತ್ತಿದ್ದ ಮುಂಗಾರು ಈ ಬಾರಿ ಜೂನ್ 5ಕ್ಕೆ ಕೇರಳ ತಲುಪಲಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಕ್ಕೆ ಬಂಗಾಳಕೊಲ್ಲಿಯಲ್ಲಿನ ಚಂಡಮಾರುತದ ಕಾರಣ ಮೇ 22ಕ್ಕೆ ಬರಬೇಕಿದ್ದ ಮುಂಗಾರು 6 ದಿನ ಮುಂಚಿತವಾಗಿ ಅಂದರೆ ಮೇ 16ಕ್ಕೆ ತಲುಪಲಿದೆ.
ಕಳೆದ ವರ್ಷ ಮುಂಗಾರು ಎರಡು ದಿನ ಮುಂಚಿತವಾಗಿ ಅಂಡಮಾನ್ ಮತ್ತು ನಿಕೋಬಾರ್ ಗೆ ತಲುಪಿತ್ತು. ಮೇ 20ರಂದು ಬರಬೇಕಿದ್ದ ಮುಂಗಾರು ಮೇ.18ರಂದು ತಲುಪಿತ್ತು. ಕೇರಳದಲ್ಲಿ ಜೂನ್ 8 ಕ್ಕೆ ಮಳೆಗಾಲ ಪ್ರಾರಂಭವಾಗಿದ್ದರೆ, ದೇಶದಾದ್ಯಂತ ಜುಲೈ 19ಕ್ಕೆ ಮಳೆ ಪ್ರಾರಂಭವಾಗಿತ್ತು.
ಈ ವರ್ಷ ಮುಂಗಾರು ಸಾಧಾರಣ ರೀತಿಯಲ್ಲಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇರಾನ್–ಅಮೆರಿಕ ಹಾಗೂ ಇಸ್ರೇಲ್ ನಡುವಿನ ಯುದ್ಧದ...







