ಹೊಸದಿಲ್ಲಿ, ಮೇ 15 : ನೈರುತ್ಯ ಮುಂಗಾರು ಈ ವರ್ಷ ನಿಗದಿತ ವೇಳೆಗಿಂತ ನಾಲ್ಕು ದಿನ ತಡವಾಗಿ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ತಲುಪುತ್ತಿದ್ದ ಮುಂಗಾರು ಈ ಬಾರಿ ಜೂನ್ 5ಕ್ಕೆ ಕೇರಳ ತಲುಪಲಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಕ್ಕೆ ಬಂಗಾಳಕೊಲ್ಲಿಯಲ್ಲಿನ ಚಂಡಮಾರುತದ ಕಾರಣ ಮೇ 22ಕ್ಕೆ ಬರಬೇಕಿದ್ದ ಮುಂಗಾರು 6 ದಿನ ಮುಂಚಿತವಾಗಿ ಅಂದರೆ ಮೇ 16ಕ್ಕೆ ತಲುಪಲಿದೆ.
ಕಳೆದ ವರ್ಷ ಮುಂಗಾರು ಎರಡು ದಿನ ಮುಂಚಿತವಾಗಿ ಅಂಡಮಾನ್ ಮತ್ತು ನಿಕೋಬಾರ್ ಗೆ ತಲುಪಿತ್ತು. ಮೇ 20ರಂದು ಬರಬೇಕಿದ್ದ ಮುಂಗಾರು ಮೇ.18ರಂದು ತಲುಪಿತ್ತು. ಕೇರಳದಲ್ಲಿ ಜೂನ್ 8 ಕ್ಕೆ ಮಳೆಗಾಲ ಪ್ರಾರಂಭವಾಗಿದ್ದರೆ, ದೇಶದಾದ್ಯಂತ ಜುಲೈ 19ಕ್ಕೆ ಮಳೆ ಪ್ರಾರಂಭವಾಗಿತ್ತು.
ಈ ವರ್ಷ ಮುಂಗಾರು ಸಾಧಾರಣ ರೀತಿಯಲ್ಲಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಲಂಡನ್ ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತೊಂದರೆ; ಓರ್ವ ಪ್ರಯಾಣಿಕ ಸಾವು
ಲಂಡನ್ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತೀವ್ರ ಪ್ರಕ್ಷುಬ್ಧತೆ ಉಂಟಾದ ಪರಿಣಾಮ ಪ್ರಯಾಣಿಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಲ್ಲದೇ, ಘಟನೆಯಲ್ಲಿ 30 ಜನ ಗಾಯಗೊಂಡಿದ್ದಾರೆ. ಸದ್ಯ ವಿಮಾನ ಬ್ಯಾಂಕಾಕ್ನಲ್ಲಿ...