ಬೆಂಗಳೂರು : ಸಿದ್ದರಾಮಯ್ಯ ಜೊತೆ 64 ಶಾಸಕರು ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಕೇವಲ ಒಬ್ಬರೇ ಶಾಸಕ ಇರೋದು ಎಂದು ಆರ್ ಆರ್ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ( Munirathna ) ಡಿಕೆಶಿಗೆ ಟಾಂಗ್ ನೀಡಿದ್ದಾರೆ.
ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ 64 ಶಾಸಕರು ಇದ್ದಾರೆ.
ಡಿಕೆಶಿವಕುಮಾರ್ ಜೊತೆ ಕುಣಿಗಲ್ ರಂಗನಾಥ್ ಮಾತ್ರ ಇದ್ದಾರೆ. ಉಳಿದವರೆಲ್ಲ ಸಿದ್ದರಾಮಯ್ಯ ಜೊತೆಗಿದ್ದಾರೆ.
ಕಾಂಗ್ರೆಸ್ ನ ಶಾಸಕರು ನಮಗೆ ಸಿದ್ದರಾಮಯ್ಯ ನಾಯಕತ್ವ ಬೇಕು ಅಂತಾರೆ.
ಇದನ್ನೂ ಓದಿ : ಸುರೇಶ್ ಅಂಗಡಿ ಬದುಕುಳಿದಿದ್ರೆ 2-3 ತಿಂಗ್ಳಲ್ಲಿ ದೊಡ್ಡ ಹುದ್ದೆ ಸಿಗುತ್ತಿತ್ತು
ಕಾಂಗ್ರೆಸ್ ನ ಯಾರೊಬ್ಬರೂ ಡಿ.ಕೆ.ಶಿವಕುಮಾರ ಅವರ ನಾಯಕತ್ವ ಬೇಕು ಅಂತಾ ಹೇಳಲ್ಲ.
ಇದು ಕಾಂಗ್ರೆಸ್ ನಲ್ಲಿ ಡಿಕೆಶಿವಕುಮಾರ್ ಅವರ ಈಗಿನ ಪರಿಸ್ಥಿತಿ ಎಂದು ಬಂಡೆಯ ಕಾಲೆಳೆದಿದ್ದಾರೆ ಮುನಿರತ್ನ.
ಇದೇ ವೇಳೆ ಡಿಕೆ ಸಹೋದರರ ಆರೋಪಗಳ ಬಗ್ಗೆ ಪ್ರತಿಕ್ರಿಸಿದ ಮುನಿರತ್ನ, ಕಾಂಗ್ರೆಸ್ ಪಕ್ಷದಲ್ಲಿ ನಾನು 10 ವರ್ಷ ಇದ್ದೆ.
ಆಗ ಡಿ.ಕೆ ಸಹೋದರರಿಗೆ ಈ ಮುನಿರತ್ನ ಒಳ್ಳೆಯವನಾಗಿದ್ದ. ಈಗ ಮುನಿರತ್ನ ಇವರಿಗೆ ಅಷ್ಟೊಂದು ಕಹಿಯಾಗಿ ಬಿಟ್ನಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ರೋಲ್ಸ್ ರಾಯ್ಸ್, ಫೆರಾರಿ, ಬೆಂಝ್ ಐಷಾರಾಮಿ ಕಾರುಗಳಿಗೆ ಎಂಟಿಬಿ ಪೂಜೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel