ಚಾಮರಾಜನಗರದ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಯಲಿದೆ – ಎಸ್ ಟಿ ಸೋಮಶೇಖರ್
ಮೈಸೂರು : ಮೈಸೂರಿನಲ್ಲಿ ಏನ್ ಸಮಸ್ಯೆ ಇದೆ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಲ್ಲ ಜನಪ್ರತಿನಿಧಿಗಳ ಆಯಾ ಕ್ಷೇತ್ರದ ಸಂಪೂರ್ಣ ಪಡೆದಿದ್ದೇವೆ ಎಂದು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಯಾವ ಕ್ಷೇತ್ರಕ್ಕೆ ಏನ್ ಅಗತ್ಯ ಇದೆ ಎಂಬುದನ್ನ ಮಾಹಿತಿ ಪಡೆದಿದ್ದೇವೆ. ಕೆಲವರು ರೆಮಿಡಿಸಿವರ್, ಆಕ್ಸಿಜನ್, ಬೆಡ್ ಹಾಗೂ ಸಿಬ್ಬಂದಿಗಳ ಕೊರತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಎಲ್ಲರ ಮಾಹಿತಿಯನ್ನ ನಾವು ಪಡೆದು ಅವರಿಗೆ ಅದನ್ನ ಕೊಡುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಇದೇ ವೇಳೆ ಚಾಮರಾಜನಗರದ ಘಟನೆ ಬಗ್ಗೆ ಪ್ರಸ್ತಾಪ ಆಗಿದೆ. ಆದರೆ ಇದು ಮೈಸೂರಿಗೆ ತನಿಖಾಧಿಕಾರಿ ಬಂದಿದ್ದಾರೆ. ಹಾಗಾಗಿ ನಾನು ಈ ಬಗ್ಗೆ ಈಗ ಮಾತಾಡುವುದಿಲ್ಲ. ಆದರೆ ಪ್ರಕರಣದಲ್ಲಿ ಯಾರೇ ಪ್ರಭಾವಿ ಇದ್ದರು ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ. ಇದನ್ನ ಖುದ್ದು ಸಿರಂ ಅವರು ಕೂಡ ತಿಳಿಸಿದ್ದಾರೆ. ಹಾಗಾಗಿ ಇದರಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.