ADVERTISEMENT
Sunday, December 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಷ್ಟ್ರೀಯ ಕ್ರೀಡಾ ದಿನ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಾಂದ್ ನೆನಪು…! 

admin by admin
August 29, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

Related posts

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

December 14, 2025
ಹನುಮಂತನಿಗೆ ಇಷ್ಟವಾದ 3 ರಾಶಿಗಳು ಯಾವುವು ಗೊತ್ತಾ? ಪ್ರತಿದಿನ ಈ ರೀತಿ ಹನುಮಾನ್ ನಮಸ್ಕರಿಸಿದರೆ ನೀವು ಯಾವಾಗಲೂ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.

ಹನುಮಂತನಿಗೆ ಇಷ್ಟವಾದ 3 ರಾಶಿಗಳು ಯಾವುವು ಗೊತ್ತಾ? ಪ್ರತಿದಿನ ಈ ರೀತಿ ಹನುಮಾನ್ ನಮಸ್ಕರಿಸಿದರೆ ನೀವು ಯಾವಾಗಲೂ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.

December 14, 2025

ರಾಷ್ಟ್ರೀಯ ಕ್ರೀಡಾ ದಿನ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಾಂದ್ ನೆನಪು…! 

ಆಗಸ್ಟ್ 29… ರಾಷ್ಟ್ರೀಯ ಕ್ರೀಡಾ ದಿನ. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಾಂದ್ ಅವರ ಹುಟ್ಟಿದ್ದ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತಿದೆ. 1905ರಲ್ಲಿ ಅಲಹಬಾದ್ ನಲ್ಲಿ ಹುಟ್ಟಿದ್ದ ಧ್ಯಾನ್ ಚಾಂದ್ ಹೆಚ್ಚು ಓದಿದವರಲ್ಲ. ತನ್ನ 17ರ ಹರೆಯದಲ್ಲೇ ಭಾರತೀಯ ಸೇನೆ ಸೇರಿಕೊಂಡಿದ್ದರು. ಹಾಕಿ ಆಟದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದ ಧ್ಯಾನ್ ಚಾಂದ್ ಅವರಿಗೆ ಸುಬೇದಾರ್ ಮೇಜರ್ ತಿವಾರಿ ಬೆಂಬಲ ನೀಡಿದ್ರು. ಅಲ್ಲದೆ ತಿವಾರಿ ಅವರ ಮಾರ್ಗದರ್ಶನದಲ್ಲಿ ಹಾಕಿ ಆಟವನ್ನು ಆಡಲು ಶುರು ಮಾಡಿದ್ದರು.

ಹಾಕಿ ಆಟದಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ಧ್ಯಾನ್ ಚಾಂದ್ ಅವರಿಗೆ ಸೇನೆಯಲ್ಲಿ ವಿವಿಧ ಹುದ್ದೆಗಳು ಒಲಿದು ಬಂದಿದ್ದವು. ಸೈನಿಕನಾಗಿ ಸೇನೆ ಸೇರಿಕೊಂಡ ಧ್ಯಾನ್ ಚಾಂದ್ ಅವರು ನಾಯಕ, ಸುಬೇದಾರ್ ನಂತರ ಲೆಫ್ಟಿನೆಂಟ್ ಹಾಗೂ ಮೇಜರ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ 1936ರಲ್ಲಿ ಧ್ಯಾನ್ ಚಾಂದ್ ಅವರು ಭಾರತ ಹಾಕಿ ತಂಡದ ನಾಯಕನಾಗಿದ್ದರು.

ನಾವು ಧ್ಯಾನ್ ಚಾಂದ್ ಅವರ ಆಟವನ್ನು ನೋಡಿಲ್ಲ. ನೋಡಿದ್ದವರು ಅವರ ಆಟವನ್ನು ಬಣ್ಣಿಸುತ್ತಿರುವ ರೀತಿಯೇ ರೋಮಾಂಚನಗೊಳಿಸುತ್ತಿದ್ದವು. ಒಂದು ಬಾರಿ ಧ್ಯಾನ್ ಚಾಂದ್ ಅವರ ಹಾಕಿ ಸ್ಟಿಕ್ ನೊಳಗಡೆ ಚೆಂಡು ಸಿಲುಕಿಕೊಂಡ್ರೆ ಸಾಕು… ಎದುರಾಳಿ ತಂಡದ ಆಟಗಾರರು ಎಷ್ಟೇ ಸಾಹಸ ಪಟ್ಟರೂ ಚೆಂಡನ್ನು ಕಸಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಕಿ ಸ್ಟಿಕ್ ನಲ್ಲೇ ಬುಗರಿಯಂತೆ ಚೆಂಡನ್ನು ತಿರುಗಿಸಿಕೊಂಡು ಹೋಗುತ್ತಿದ್ದ ಧ್ಯಾನ್ ಚಾಂದ್ ಗೋಲು ದಾಖಲಿಸಿದ್ದ ನಂತರವೇ ಚೆಂಡಿಗೆ ವಿರಾಮ ಸಿಗುತ್ತಿತ್ತು. ಅಷ್ಟರ ಮಟ್ಟಿಗೆ ಧ್ಯಾನ್ ಚಾಂದ್ ಹಾಕಿ ಆಟವನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಧ್ಯಾನ್ ಚಾಂದ್ ಅವರ ಹಾಕಿ ಸ್ಟಿಕ್ ನಲ್ಲಿ ಮ್ಯಾಗ್ನೇಟ್ ಇದೆಯೋ ಅಂತ ಪರೀಕ್ಷೆ ಕೂಡ ಮಾಡಲಾಗುತ್ತಿತ್ತು. ಆ ರೀತಿಯ ಚಮತ್ಕಾರಿಯ ಆಟವನ್ನು ಆಡುತ್ತಿದ್ದರು ಧ್ಯಾನ್ ಚಾಂದ್.

1922ರಿಂದ 1948ರವರೆಗೆ ಹಾಕಿ ಆಟದಲ್ಲಿ ಜಾದು ಮಾಡುತ್ತಿದ್ದ ಧ್ಯಾನ್ ಚಾಂದ್ ಅವರು 400ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳನ್ನು ದಾಖಲಿಸಿದ್ದರು. ಒಟ್ಟಾರೆ ತನ್ನ ಹಾಕಿ ಆಟದ ಬದುಕಿನಲ್ಲಿ ಧ್ಯಾನ್ ಚಾಂದ್ ಅವರು ಸುಮಾರು ಒಂದು ಸಾವಿರ ಗೋಲು ದಾಖಲಿಸಿದ್ದಾರೆ. ಹೀಗೆ ಧ್ಯಾನ್ ಚಾಂದ್ ಅವರ ಅದ್ಭುತ ಆಟ ಮತ್ತು ಬದ್ಧತೆ, ದೇಶ ಪ್ರೇಮಕ್ಕೆ 2012ರಿಂದ ಭಾರತ ಸರ್ಕಾರ ಅವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಿದೆ. ಇದಕ್ಕೂ ಮೊದಲು ಧ್ಯಾನ್ ಅವರಿಗೆ 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ರಾಷ್ಟ್ರೀಯ ಕ್ರೀಡಾ ದಿನದಂದು ಭಾರತದ ಶ್ರೇಷ್ಠ ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರಧಾನ ಮಾಡುತ್ತಾರೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಜೊತೆಗೆ ಧ್ಯಾನ್ ಚಾಂದ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಈ ಹಿಂದೆಯೇ ಮೇಜರ್ ಧ್ಯಾನ್ ಚಾಂದ್ ಅವರ ಕ್ರೀಡಾ ಸೇವೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಮೊದಲಿನಿಂದಲೂ ಕೇಳಿಬರುತ್ತಿದೆ. ಆದ್ರೆ ಭಾರತ ಸರ್ಕಾರ ಧ್ಯಾನ್ ಚಾಂದ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಮನಸ್ಸು ಮಾಡಲಿಲ್ಲ. ಅದ್ರಲ್ಲೂ  ಭಾರತ ರತ್ನ ಪ್ರಶಸ್ತಿ ಯ ನಿಯಮಗಳನ್ನು ಬದಿಗೊತ್ತಿ ಸಚಿನ್ ತೆಂಡುಲ್ಕರ್ ಗೆ ನೀಡಲಾಗಿತ್ತು. ಅದೇ ರೀತಿಯಲ್ಲಿ ಧ್ಯಾನ್ ಚಾಂದ್ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಒತ್ತಾಯ ಇಂದಿಗೂ ನಡೆಯುತ್ತಿದೆ.

ಅದೇನೇ ಇರಲಿ, ಧ್ಯಾನ್ ಚಾಂದ್ ಅವರನ್ನು ವರ್ಷಕ್ಕೊಂದು ಬಾರಿ ನೆನಪು ಮಾಡಿಕೊಳ್ಳಲಾಗುತ್ತಿದೆ. ಒಲಿಂಪಿಕ್ ಚಾಂಪಿಯನ್ ಆಗಿದ್ದ ಧ್ಯಾನ್ ಚಾಂದ್ ಅವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಕೂಡ ಮನ ಸೋತಿದ್ರು. ಧ್ಯಾನ್ ಚಾಂದ್ ಅವರ ಆಟವನ್ನು ನೋಡಿ ಬೆರಗುಗೊಂಡಿದ್ದ ಹಿಟ್ಲರ್ ಸೇನೆಯಲ್ಲಿ ಉನ್ನತ ಹುದ್ದೆ ನೀಡುವ ಆಶ್ವಾಸನೆ ನೀಡಿದ್ದರು. ಆದ್ರೆ ಧ್ಯಾನ್ ಚಾಂದ್ ಹಿಟ್ಲರ್ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದ್ದರು. ಹೀಗೆ ಧ್ಯಾನ್ ಚಾಂದ್ ಅವರ ಬದುಕಿನ ಅನೇಕ ಘಟನೆಗಳು ಯುವ ಕ್ರೀಡಾಪಟುಗಳಿಗೆ ದಾರಿ ದೀಪವಾಗಿದೆ.

Tags: #BHARATHA RATNA#hockey legend Major Dhyan Chand#INIDAN HOCKEY#Major Dhyan ChandHockeyNational Sports DaySachin TendulkarSports
ShareTweetSendShare
Join us on:

Related Posts

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

by admin
December 14, 2025
0

2025 ಭಾರತ - ಪಾಕ್ ನಡುವಿನ ಪುರುಷರ t-20 ಏಷ್ಯಾಕಪ್ ಕ್ರಿಕೆಟ್ ಟೂರ್ನಿ - ನೋ ಹ್ಯಾಂಡ್ ಶೇಕ್..! 2025 ಭಾರತ - ಪಾಕ್ ನಡುವಿನ ಮಹಿಳಾ...

ಹನುಮಂತನಿಗೆ ಇಷ್ಟವಾದ 3 ರಾಶಿಗಳು ಯಾವುವು ಗೊತ್ತಾ? ಪ್ರತಿದಿನ ಈ ರೀತಿ ಹನುಮಾನ್ ನಮಸ್ಕರಿಸಿದರೆ ನೀವು ಯಾವಾಗಲೂ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.

ಹನುಮಂತನಿಗೆ ಇಷ್ಟವಾದ 3 ರಾಶಿಗಳು ಯಾವುವು ಗೊತ್ತಾ? ಪ್ರತಿದಿನ ಈ ರೀತಿ ಹನುಮಾನ್ ನಮಸ್ಕರಿಸಿದರೆ ನೀವು ಯಾವಾಗಲೂ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.

by admin
December 14, 2025
0

ಹನುಮಂತನ ನೆಚ್ಚಿನ 3 ರಾಶಿಚಕ್ರ ಚಿಹ್ನೆಗಳು ಹನುಮಂತ ಎಂದಾಗ ರಾಮಾಯಣ ನೆನಪಾಗುತ್ತದೆ. ಹನುಮಂತನು ರಾಮನಿಗೆ ಯುದ್ಧವನ್ನು ಗೆಲ್ಲಲು ಸಹಾಯ ಮಾಡಿದನು. ಆ ಈಶ್ವರನ ನ ಅಂಶವೇ ಈ...

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

by Shwetha
December 14, 2025
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ (Power Sharing) ವಿಚಾರವಾಗಿ ಎದ್ದಿರುವ ಗೊಂದಲದ ಅಲೆಗಳು ಇನ್ನೂ ತಣ್ಣಗಾಗಿಲ್ಲ. ಹೈಕಮಾಂಡ್ ಎಷ್ಟೇ ಖಡಕ್...

ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

by Shwetha
December 14, 2025
0

ಬೆಳಗಾವಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸಚಿವರು ಕೇವಲ ರಾಜಧಾನಿ ಬೆಂಗಳೂರು ಮತ್ತು ತಮ್ಮ ಸ್ವಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಇಂತಹ ಸಂಪುಟ ಸದಸ್ಯರನ್ನು ಇಟ್ಟುಕೊಂಡು ಸಮಗ್ರ...

ರಾಹುಲ್ ಖರ್ಗೆ ನಾಯಕತ್ವದ ವಿರುದ್ಧ ಸ್ಫೋಟಗೊಂಡ ಅಸಮಾಧಾನ ಡಿಕೆ ಶಿವಕುಮಾರ್ ಹೆಗಲಿಗೆ ರಾಷ್ಟ್ರೀಯ ಜವಾಬ್ದಾರಿ ನೀಡಲು ಸೋನಿಯಾಗೆ ಪತ್ರ

ರಾಹುಲ್ ಖರ್ಗೆ ನಾಯಕತ್ವದ ವಿರುದ್ಧ ಸ್ಫೋಟಗೊಂಡ ಅಸಮಾಧಾನ ಡಿಕೆ ಶಿವಕುಮಾರ್ ಹೆಗಲಿಗೆ ರಾಷ್ಟ್ರೀಯ ಜವಾಬ್ದಾರಿ ನೀಡಲು ಸೋನಿಯಾಗೆ ಪತ್ರ

by Shwetha
December 14, 2025
0

ನವದೆಹಲಿ: ಲೋಕಸಭೆ ಹಾಗೂ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಅನುಭವಿಸುತ್ತಿರುವ ಸಾಲು ಸಾಲು ಸೋಲುಗಳು ಇದೀಗ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿವೆ. ಶತಮಾನದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram