ವೈದ್ಯರ ನಿರ್ಲಕ್ಷ್ಯ ಕಾರಿನಲ್ಲೇ ನರಳಾಡಿದ ರೋಗಿ Chikkaballapur
ಚಿಕ್ಕಬಳ್ಳಾಪುರ : ವೈದ್ಯರ ನಿರ್ಲಕ್ಷ್ಯದ ಕಾರಣ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲೇ ನರಳಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಸಿದ್ದಿಮಠ ಗ್ರಾಮದ ಅಹಮ್ಮದ್ ಪಾಷಾ ಎಂಬುವವರಿಗೆ ಉಸಿರಾಟದ ತೊಂದರೆ ಆಗಿದ್ದು, ತಾಲೂಕು ಆಸ್ಪತ್ರೆ ಕಾರಿನಲ್ಲಿ ಕರೆತರಲಾಗಿದೆ.
ಆದ್ರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಆತನನ್ನು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಕಾರಿನಲ್ಲಿ ಅಹಮ್ಮದ್ ಪಾಷಾ ನರಳಾಡುತ್ತಿರುವುದನ್ನ ಕಂಡು ಸಂಬಂಧಿಕರು ವೈದ್ಯರಿಗೆ ಮಾಹಿತಿ ನೀಡಿದ್ದರೂ, ಈ ಬಗ್ಗೆ ಯಾರು ಸ್ಪಂದಿಸಿಲ್ಲವಂತೆ.
ಕೊನೆಗೆ ಮಾಧ್ಯಮದವರು ವೈದ್ಯರನ್ನು ಈ ಬಗ್ಗೆ ತರಾಟೆಗೆ ತೆಗೆದುಕೊಂಡಾಗ ಆತನನ್ನು ದಾಖಲು ಮಾಡಿಕೊಳ್ಳಲಾಗಿದೆ.