ಕಾಶಿ ವಿಶ್ವನಾಥನ ದರ್ಶನ ಪಡೆದ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ
ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ತಮ್ಮ ಮೂರನೇ ದಿನದ ಭಾರತ ಪ್ರವಾಸದಲ್ಲಿ ಇಂದು ಉತ್ತರ ಪ್ರದೇಶದ ವಾರಣಾಸಿ ತಲುಪಿದರು. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾರಣಾಸಿ ವಿಮಾನ ನಿಲ್ದಾಣದಲ್ಲಿ ಶ್ರೀ ದೇವುಬಾ ಅವರನ್ನು ಸ್ವಾಗತಿಸಿದರು. ಶ್ರೀ ದೇವುಬಾ, ಅವರ ಪತ್ನಿ ಡಾ. ಅರ್ಜು ದೇವುಬಾ ಮತ್ತು ಉನ್ನತ ಮಟ್ಟದ ನಿಯೋಗದೊಂದಿಗೆ ಆತ್ಮೀಯ ಸ್ವಾಗತ ನೀಡಲಾಯಿತು.
ಬೆಳಿಗ್ಗೆ 10 ಗಂಟೆಗೆ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ಚಾರ್ಟರ್ಡ್ ವಿಮಾನ ವಾರಣಾಸಿಯ ಬಬತ್ಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶ್ರೀ ದೇವುಬಾ ಅವರನ್ನು ಸ್ವಾಗತಿಸಿದರು ಮತ್ತು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು, ಅಲ್ಲಿ ಶ್ರೀ ದೇವುಬಾ ಮತ್ತು ಅವರ ಪತ್ನಿ ಪ್ರಾರ್ಥನೆ ಸಲ್ಲಿಸಿದರು. ಶ್ರೀ ದೇವುಬಾ ಅವರನ್ನು ಸ್ವಾಗತಿಸಲು ರಾಜ್ಯ ಸಂಸ್ಕೃತಿ ಇಲಾಖೆಯು ವಿಸ್ತೃತ ವ್ಯವಸ್ಥೆಗಳನ್ನು ಮಾಡಿತ್ತು. ವಿಮಾನ ನಿಲ್ದಾಣದಿಂದ ಕಾಶಿ ವಿಶ್ವನಾಥ ದೇವಸ್ಥಾನದ ಮಾರ್ಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವರ್ಣರಂಜಿತ ಉಡುಪುಗಳನ್ನು ಧರಿಸಿದ ಪುರುಷರು ಮತ್ತು ಮಹಿಳೆಯರು ಭಾರತ ಮತ್ತು ನೇಪಾಳದ ಧ್ವಜಗಳನ್ನು ಹಿಡಿದು ನೇಪಾಳದ ಪ್ರಧಾನಿಯನ್ನು ಸ್ವಾಗತಿಸಿದರು. ನವೀಕೃತ ಕಾಶಿ ವಿಶ್ವನಾಥ ದೇವಸ್ಥಾನವನ್ನೂ ಹೂವಿನಿಂದ ಅಲಂಕರಿಸಲಾಗಿತ್ತು.
ಶ್ರೀ ದೇವುಬಾ ಅವರು ಲಲಿತಾ ಘಾಟ್ನಲ್ಲಿರುವ ಕಲ್ ಭೈರವ ದೇವಾಲಯ ಮತ್ತು ಐತಿಹಾಸಿಕ ಶ್ರೀ ಪಶುಪತಿನಾಥ ನೇಪಾಳಿ ದೇವಾಲಯಕ್ಕೂ ಭೇಟಿ ನೀಡಿದರು. ಪುರಾತನ ನಗರವಾದ ಕಾಶಿಯಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಗಳ ಕುರಿತು ಶ್ರೀ ದೇವುಬ ಅವರಿಗೆ ಮಾಹಿತಿ ನೀಡಲಾಯಿತು. ನೇಪಾಳ ಮೂಲದ ಜನರು ನೇಪಾಳ ಪ್ರಧಾನಿಯನ್ನು ವಿವಿಧ ಸ್ಥಳಗಳಲ್ಲಿ ಸ್ವಾಗತಿಸಿದರು. ಶ್ರೀ ದೇವುಬಾ ಅವರು ಮಧ್ಯಾಹ್ನದ ಊಟದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಸಭೆ ನಡೆಸಿದರು ಮತ್ತು ವಾರಣಾಸಿಯಲ್ಲಿ ವಾಸಿಸುವ ನೇಪಾಳಿ ಜನರ ಗುಂಪಿನೊಂದಿಗೆ ಸಂವಾದ ನಡೆಸಿದರು.