ದೆಹಲಿ: ಇದೇ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪಗಳನ್ನು ಹಚ್ಚಿ ಎಂದು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ವಾಜಪೇಯಿ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಇಂದು ಮೋದಿ ಮಾಡಿದ ಆ ಟ್ವೀಟ್..
आओ दीया जलाएं। pic.twitter.com/6sc5bplbVy
— Narendra Modi (@narendramodi) April 4, 2020
ಅಂದ್ಹಾಗೆ ಮೋದಿಯವರಂತೆ ಅಟಲ್ ಜೀನೂ ಈ ಹಿಂದೆ ದೀಪ ಹಚ್ಚೋಣ ಬನ್ನಿ ಎಂದಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆರಿ ಹೋದ ಮಾತುಗಳ ಮತ್ತೆ ಬೆಳಗಿಸಿ ದೀಪ ಹಚ್ಚೋಣ. ಒಡೆದಾಳುವ ಮನಸ್ಸಿನೊಳಗೆ ಬೆಳಕಿನ ಬೀಜವ ಕುಡಿಯೊಡೆಸೋಣ ಎಂಬ ಕವನವನ್ನು ಅಟಲ್ ಜೀ ಹೇಳಿದ್ದರು.
ಇದೀಗ ದಿವಂಗತರ ಕವನದ ಮೂಲಕವೇ ಮೋದಿ ದೀಪ ಹಚ್ಚೋಣ ಬನ್ನಿ ಎನ್ನುತ್ತಿದ್ದಾರೆ. ಅಟಲ್ ಜೀ ಕವನವನ್ನು ಟ್ವೀಟ್ ಮಾಡಿ ಮತ್ತೇನೂ ಹೇಳದೆ ದೀಪ ಹಚ್ಚೋಣ ಬನ್ನಿ ಎಂದಿದ್ದಾರೆ.