ಮಡಿಕೇರಿ: ರಾಜ್ಯದ ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಟಾನ ಸಂಬಂಧ ರಾಜ್ಯದಲ್ಲಿ ಅಸಮಾಧಾನ ಮೇಲಿನಿಂದ ಮೇಲೆ ಕೇಳಿ ಬರುತ್ತಲೇ ಇದೆ.
ಇದೇ ಸಂಬಂಧ ಪಶ್ಚಿಮಘಟ್ಟದ ವ್ಯಾಪ್ತಿಗೆ ಬರುವ ಮಾಜಿ ಸ್ಪೀಕರ್ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಸೇರಿದಂತೆ ಹಲವು ಶಾಸಕರು ಕಳೆದ ಅಧಿವೇಶನದ ಕಡೆಯ ದಿನ ಅಸಮಧಾನ ಹೊರಹಾಕಿ ಶೀಘ್ರವೇ ರಾಜ್ಯ ಸರ್ಕಾರ ಹಸಿರು ಪೀಠದ ಮೇಲೆ ಒತ್ತಡ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹಾಕಿದ್ದಾರೆ.
ಇದೇ ತಿಂಗಳ ಅಂತ್ಯಕ್ಕೆ ಗಡುವು ನೀಡಿರುವ ಹಿನ್ನಲೆಯಲ್ಲಿ ಯುದ್ದಕಾಲೇ ಶಸ್ತ್ರಾಭ್ಯಾಸ ನಡೆಸುವ ಕಾರ್ಯ ನಡೆಯಬೇಕಿದ್ದು, ಕೇರಳ ಮಾದರಿಯಲ್ಲಿ ಅಲ್ಲಿನ ಚರ್ಚಿನ ಫಾದರ್ ಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ನಡೆಸಿದ ಹೋರಾಟದ ಪರಿಣಾಮ ಅವರಿಗೆ ಸ್ವಲ್ಪ ಪ್ರಮಣಾದಲ್ಲಿ ರಿಲೀಫ್ ಸಿಕ್ಕಿದೆ. ಇದರ ಬೆನ್ನಲ್ಲೆ ಕರ್ನಾಟಕದಲ್ಲೂ ತಯಾರಿ ನಡೆಯಬೇಕಿತ್ತು. ಈ ಭಾರಿ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯ್ತಿ ಚುನಾವಣೆ ವೇಳೆ ಈ ಅಸಮಧಾನದ ಪರಿಣಾಮ ಹಾಸನ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ನಾಮಪತ್ರಗಳೇ ಸಲ್ಲಿಕೆಯಾಗಿಲ್ಲ.
ಈ ನಡುವ ಕೊಡಗಿನಲ್ಲೂ ಹೋರಾಟದ ರೂಪುರೇಷೆ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಕಳೆದ ಬಾರಿ ಹೋರಾಟವನ್ನು ನಡೆಸಲು ಕೊಡಗಿನಲ್ಲಿ ಪಕ್ಷಾತೀತವಾಗಿ ಸಮಿತಿ ರಚನೆಯಾಗಿತ್ತು. ಹೋರಾಟಗಳೂ ನಡೆದವು. ಹಸಿರು ಪೀಠದ ಆದೇಶವನ್ನು ಅನುಷ್ಟಾನಗೊಳಿಸಲು ಸಿದ್ಧತೆ ನಡೆಸುತ್ತಿದೆ. ಇತ್ತ ಕೊಡಗು ಹೊರತುಪಡಿಸಿ ಇತರೆ ಜಿಲ್ಲೆಗಲ್ಲಿ ಗ್ರಾಮ ಪಂಚಾಯಿತಿಗಳಿಗೆ ನಾಮಪ್ರಗಳು ಸಲ್ಲಿಕೆಯಾಗದಿರುವುದು ಚುನಾವಣಾ ಆಯೋಗಕ್ಕೆ ತಲೆನೋವಾಗಿ ಪರಿಣಮಿಸಿದೆ.
ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಗ್ರಾಮಸ್ಥರ ಮನವೊಲಿಕೆಗೆ ಯತ್ನ ನಡೆಸಲಾಗುತ್ತಿದೆಯಾದರೂ ಪ್ರಯೋಜನವಾಗುತ್ತಿಲ್ಲ. ಕಸ್ತೂರಿ ರಂಗನ್ ವರದಿಗೆ ಎಲ್ಲೆಡೆ ವಿರೋಧ ವ್ಯಕ್ತವಾತ್ತಿರುವ ಕಾರಣಕ್ಕೆ ತಕ್ಷಣವೇ ರಾಜ್ಯ ಸರ್ಕಾರ ಒಂದು ಅಂತಿಮ ನಿರ್ಧಾರಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿರುವ ಜಿಲ್ಲೆಗಳಿಂದ ಜಿಲ್ಲಾಡಳಿತಗಳು ಚುನಾವಣಾ ಆಯೋಗಕ್ಕೆ ವರದಿ ಸಹ ಸಲ್ಲಿಕೆಯಾಗಿದೆ. ಸದ್ಯಕ್ಕೆ ಬಾಲ್ ಈಸ್ ಅಂಡರ್ ಚುನಾವಣಾ ಆಯೋಗದ ಅಂಗಳದಲ್ಲಿದೆ. ಆಯೋಗದ ನಿಲುವು ಏನಾಗಲಿದೆ ಎನ್ನುವುದೇ ಇದೀಗ ಯಕ್ಷ ಪ್ರಶ್ನೆ.
ವಿಶೇಷ ವರದಿ:ಗಿರಿಧರ್ ಕೊಂಪುಳೀರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel