ಕಾರವಾರ: ಪಾಗಲ್ ಪ್ರೇಮಿಯೊಬ್ಬ ತಾನು ಬಯಸಿದಂತೆ ಪ್ರೇಯಸಿ ಇರುತ್ತಿಲ್ಲ ಎಂದು ಚಾಕು ಹಾಕಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ ಕಾಜುಭಾಗಲ್ಲಿ ನಡೆದಿದೆ. ರವಿಶಂಕರ್(42) ಚಾಕು ಹಾಕಿದ ಆರೋಪಿ. ಆಟೋ ಚಾಲಕನಾಗಿರುವ ನಂದನಗದ್ದಾ ನಿವಾಸಿ ರವಿಶಂಕರ್ ಸುಮಾರು 30 ವರ್ಷದ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾನೆ.
ಇಬ್ಬರೂ ಪರಸ್ಪರ ಗುಪ್ತವಾಗಿ ಭೇಟಿ ಮಾಡುತ್ತಿದ್ದರು. ಆದರೆ, ಮಾರ್ಚ್ 31 ರಂದು ರಾತ್ರಿ ಹಣದ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ರವಿಶಂಕರ್ ಸಿಟ್ಟಿನಲ್ಲಿ ಮಹಿಳೆಗೆ ಚಾಕು ಇರಿದಿದ್ದಾನೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.