ಯುಪಿ ಚುನಾವಣೆಗೆ ಪಾಕ್ ಪ್ರವೇಶ –ಯಾಕುಬ್ ಮೆನನ್ ಬದುಕಿದ್ದರೆ ಅಖಿಲೇಶ್ ಅವರಿಗೂ ಟಿಕೆಟ್ ನೀಡುತ್ತಿದ್ದರು – ಸಂಬಿತ್ ಪಾತ್ರ
ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಸೋಮವಾರ ಲಕ್ನೋದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಅವರು ಅಖಿಲೇಶ್ ಯಾದವ್ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. “ಇಡೀ ದೇಶವು ಉತ್ತರ ಪ್ರದೇಶದ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದರೆ, ಪಾಕಿಸ್ತಾನವು ಭಾರತದ ಶತ್ರು ಅಲ್ಲ ಎಂದು ಅಖಿಲೇಶ್ ಯಾದವ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದು ಮುಜುಗರದ ಸಂಗತಿ. ಎಂದು ಸಂಭಿತ್ ಪಾತ್ರ ವಾಗ್ದಾಳಿ ನಡೆಸಿದರು.Pakistan’s entry in UP elections. Sambit Patra vs Akhilesh
ಪತ್ರಾ ಅವರು ಅಖಿಲೇಶ್ ಅವರ ಹೇಳಿಕೆಯ ಬಗ್ಗೆ ಮಾತನಾಡಿ : ಪಾಕಿಸ್ತಾನದ ಶತ್ರು ಭಾರತವಲ್ಲ ಎಂದು ಎಸ್ಪಿ ಅಧ್ಯಕ್ಷರು ಹೇಳಿದ್ದಾರೆ. ‘ಜಿನ್ನಾರನ್ನು ಪ್ರೀತಿಸುವವರು ಪಾಕಿಸ್ತಾನದ ಮೇಲಿನ ಪ್ರೀತಿಯನ್ನು ಹೇಗೆ ನಿರಾಕರಿಸುತ್ತಾರೆ. ತಮ್ಮ ಹೇಳಿಕೆಗೆ ಅಖಿಲೇಶ್ ಯಾದವ್ ಕ್ಷಮೆಯಾಚಿಸಬೇಕು. ಬಿಜೆಪಿ ಪಾಕಿಸ್ತಾನವನ್ನು ಶತ್ರು ಎಂದು ಪರಿಗಣಿಸಿದೆ. ಅಖಿಲೇಶ್ ಜಿನ್ನಾ ಜೊತೆ ಬಂದಿದ್ದಾರೆ. ಇದು ಮುಜುಗರದ ಸಂಗತಿ ಎಂದರು.
ಯಾಕೂಬ್ ಮೆನನ್ ಅವರನ್ನು ಗಲ್ಲಿಗೇರಿಸದೇ ಇದ್ದಿದ್ದರೆ ಅವರೂ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗುತ್ತಿದ್ದರು. ಕಸಬ್ ನನ್ನು ಗಲ್ಲಿಗೇರಿಸದೇ ಇದ್ದಿದ್ದರೆ ಆತ ಎಸ್ ಪಿಯ ಸ್ಟಾರ್ ಪ್ರಚಾರಕನಾಗುತ್ತಿದ್ದ. ಜಿನ್ನಾ ಹೆಸರಲ್ಲಿ ಚುನಾವಣೆಗೆ ಇಳಿದಿದ್ದ ಅವರು ಈಗ ಪಾಕಿಸ್ತಾನ ತಲುಪಿದ್ದಾರೆ.
ಯಾಕೂಬ್ ಮೆಮನ್ ಬದುಕಿದ್ದರೆ ಅಖಿಲೇಶ್ ಅವರಿಗೂ ಟಿಕೆಟ್ ನೀಡುತ್ತಿದ್ದರು. ಎಂದು ವಾಗ್ದಾಳಿ ನಡೆಸಿದರು…