ಪಾಕಿಸ್ತಾನ : ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು.. ಇದೀಗ ಅಫ್ಗಾನ್ ನಲ್ಲಿ ಉಗ್ರರ ಸರ್ಕಾರ ರಚನೆಯಾಗಿದೆ..
ಪರೋಕ್ಷವಾಗಿ ತಾಲೀಬಾನಿಗಳನ್ನ ಕಪಟಿ ಚೀನಾ , ಉಗ್ರರ ಡ್ಯಾಡಿ ಪಾಕಿಸ್ತಾನ ಬೆಂಬಲಿಸಿವೆ.. ತಮ್ಮ ದೇಶದ ಜನ ಬಿಕಾರಿಯಾದ್ರೂ ಪರವಾಗಿಲ್ಲ ಉಗ್ರರು ಚನ್ನಾಗಿದ್ರೆ ಸಾಕು ಅನ್ನೋದು ಪಾಕಿಸ್ತಾನದ ಧ್ಯೇಯೋದ್ದೇಶ.. ಅದಕ್ಕೆ ನೋಡಿ ತಮ್ಮ ದೇಶ ಬಿಕಾರಿಯಾದ್ರೂ ತನ್ನ ಡ್ಯಾಡಿ ಚೀನಾ ಬಳಿ ಕೈ ಕಾಲಿಡಿದು ಸಾಲ ಸೂಲ ಮಾಡಿ ಉಗ್ರರ ಪೋಷಣೆ ಮಾಡುತ್ತಿದೆ.. ಆದ್ರೆ ಮುಸ್ಲಿಂ ರಾಷ್ಟ್ರಗಳಿಗೆ ತಮ್ಮ ಬೆಂಬಲ ಅನ್ನೋ ಮಾನ್ಯ ಇಮ್ರಾನ್ ಖಾನ್ ಅವರು ಮುಸ್ಲಿಂ ರಾಷ್ಟ್ರದ ಜನರಿಗೆ ತಾಲೀಬಾನಿಗಳು ನರಕ ದರ್ಶನ ಮಾಡಿಸುತ್ತಿದ್ರು ತುಟಿ ಬಿಚ್ಚದೇ ಮೌನ ವಹಿಸಿದ್ದಾರೆ.. ಬದಲಾಗಿ ತಾಲಿಬಾನಿಗಳ ವಿಜಯದಲ್ಲಿ ಗೆಲುವಿನ ನಗೆ ಬೀರುತ್ತಿದ್ದಾರೆ..
‘ಸ್ಮಶಾಣ’ ಬಿಟ್ಟು ಹೋಗದಂತೆ ಜನರಿಗೆ ‘ನರರಾಕ್ಷಸ’ರ ಎಚ್ಚರಿಕೆ..!
ಈ ನಡುವೆ ಮತ್ತೆ ಕಾಶ್ಮೀರದ ತಂಟೆಗೆ ಬಂದಿದ್ದಾರೆ ಪಾಪಿ ಪಾಕಿಸ್ತಾನದ ಮಾನ್ಯ ಪ್ರಧಾನಿ ಇಮ್ರಾನ್ ಖಾನ್ ಅವರು. ನಾವು ತಾಲಿಬಾನಿಗಳ ಪರ ಇಲ್ಲ ಅಂತ ಹೇಳಿಕೊಂಡು ಬಂದಿರೋ ಪಾಕಿಸ್ತಾನದ ಮುಖವಾಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಕಳಚಿ ಬಿದ್ದಿದೆ. ಆಡಳಿತಾರೂಢ ತೆಹ್ರೀಕ್ ಇ ಇನ್ಸಾಫ್ ಪಕ್ಷದ ನಾಯಕಿಯೊಬ್ಬರು ಕಾಶ್ಮೀರದಲ್ಲಿ ತಾಲಿಬಾನಿಗಳ ನೆರವು ಪಡೀತೀವಿ ಅಂತ ಹೇಳಿದ್ದಾರೆ. ಹೌದು ಡಿಬೇಟ್ ಒಂದ್ರಲ್ಲಿ ಮಾತನಾಡಿದ ನೀಲಂ ಇರ್ಶಾದ್ ಶೇಖ್, ಇಮ್ರಾನ್ ಖಾನ್ ರನ್ನು ಹಾಡಿ ಹೊಗಳುತ್ತಾ, ಮುಂದಿನ ದಿನಗಳಲ್ಲಿ ಕಾಶ್ಮೀರದ ವಿಚಾರದಲ್ಲಿ ತಾಲಿಬಾನಿಗಳು ಪಾಕ್ ಗೆ ನೆರವು ನೀಡ್ತಾರೆ. ಕಾಶ್ಮೀರವನ್ನು ಗೆದ್ದು ಪಾಕಿಸ್ತಾನಕ್ಕೆ ನೀಡ್ತಾರೆ. ನಮ್ಮಿಂದ ವಿಭಜಿತವಾಗಿರೋ ಕಾಶ್ಮೀರ ನಮ್ಮನ್ನು ಸೇರಿಕೊಳ್ಳುತ್ತೆ ಅಂತ ಹೇಳಿದ್ದಾರೆ.
1 ಕೋಟಿ ರೂಪಾಯಿ ಕೊಡಿ ಎಂದ ನೆಟ್ಟಿಗನಿಗೆ ರಿಯಲ್ ಹೀರೋ ಸೋನು ಕೊಟ್ಟ ಉತ್ತರ ಇದು..!
ಆಗ ಅಲ್ಲಿನ ನಿರೂಪಕಿ ಆಕೆಯನ್ನ ತಡೆದು ಈ ಶೋನ ಇಡೀ ವಿಶ್ವವೇ ನೋಡ್ತಾಯಿದೆ. ಏನ್ ಮಾತಾಡ್ತಿದ್ದೀರಾ ಅಂತ ಎಚ್ಚರಿಸಿದ್ದಾರೆ. ಭಾರತೀದವರು ನೋಡ್ತಾರೆ. ತಾಲಿಬಾನಿಗಳು ಕಾಶ್ಮೀರದ ವಿಚಾರದಲ್ಲಿ ಸಹಾಯ ಮಾಡ್ತಾರೆ ಅಂತ ಹೇಗೆ ಹೇಳಿದ್ರಿ ಅಂತ ಪ್ರಶ್ನಿಸ್ತಾರೆ. ಆಗ ಮತ್ತೆ ತಮ್ಮ ಮಾತು ಮುಂದುವರಿಸೋ ನೀಲಂ, ತಾಲಿಬಾನಿಗಳು ಪಾಕಿಸ್ತಾನಕ್ಕೆ ಸಹಾಯ ಮಾಡೇ ಮಾಡ್ತಾರೆ. ಯಾಕಂದ್ರೆ ಅವರಿಗೆ ಪಾಕಿಸ್ತಾನ ಸಹಾಯ ಮಾಡಿದೆ ಅಂತ ಹೇಳಿದ್ದಾರೆ.
ಇದಕ್ಕೂ ಮುನ್ನ ತಾಲಿಬಾನ್ ಪೋಷಣೆಯಲ್ಲಿ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆಗಳು ಪ್ರಮುಖ ಪಾತ್ರವಿರುವುದಾಗಿ ಅಫ್ಘಾನಿಸ್ತಾನ ಸರ್ಕಾರ ಆರೋಪಿಸಿತ್ತು. ಒಟ್ಟಾರೆ ಪಾಪಿ ಪಾಕಿಸ್ತಾನದ ಆಡಳಿತರೂಢ ಪಕ್ಷದ ಹಾಗೂ ಇಮ್ರಾನ್ ಖಾನ್ ಕರಾಳ ಮುಖವಾಡವನ್ನ ಜಗತ್ತಿನ ಮುಂದೆಯೇ ಕಳಚುತ್ತಾ ಜಗತ್ ಜಾಹೀರು ಮಾಡಿ ತಮ್ಮ ಮಾನ ಹರಾಜು ಹಾಕಿಕೊಳ್ತಿದ್ದಾರೆ ಸ್ವಪಕ್ಷ ಮುಖಂಡರು.