ADVERTISEMENT
Friday, June 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Parents and kids: ಪೋಷಕರೆ…. ಈ ವಿಷಯಗಳನ್ನ ಮಕ್ಕಳ ಮುಂದೆ ಹಂಚಿಕೊಳ್ಳಬೇಡಿ..

ಮಕ್ಕಳ ವಯಸ್ಸಿನ ಆಧಾರದ ಮೇಲೆ ತಿಳಿಸಬೇಕಾದ ವಿಷಯಗಳನ್ನಷ್ಟೆ ಹಂಚಿಕೊಳ್ಳಿ. ಇಲ್ಲದಿದ್ದರೆ ನಕಾರಾತ್ಮಕ ವಿಷಯಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ.  ಇದು ಅವರ ನಡವಳಿಕೆಯಲ್ಲಿ ಗೋಚರಿಸುತ್ತದೆ. 

Naveen Kumar B C by Naveen Kumar B C
August 15, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪೋಷಕರೆ…. ಈ ವಿಷಯಗಳನ್ನ ಮಕ್ಕಳ ಮುಂದೆ ಹಂಚಿಕೊಳ್ಳಬೇಡಿ..

ಮಕ್ಕಳ ವಯಸ್ಸಿನ ಆಧಾರದ ಮೇಲೆ ತಿಳಿಸಬೇಕಾದ ವಿಷಯಗಳನ್ನಷ್ಟೆ ಹಂಚಿಕೊಳ್ಳಿ. ಇಲ್ಲದಿದ್ದರೆ ನಕಾರಾತ್ಮಕ ವಿಷಯಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ.  ಇದು ಅವರ ನಡವಳಿಕೆಯಲ್ಲಿ ಗೋಚರಿಸುತ್ತದೆ.

  ಮಕ್ಕಳು ಓದು ಬರಹದಲ್ಲಿ ಚುರುಕು,  ಮಾತಿನಲ್ಲಿ ಲವಲವಿಕೆ, ಕ್ರೀಡೆಯಲ್ಲಿ ಕ್ರಿಯಾಶೀಲರಾಗಿರುತ್ತಾರೆ ನಿಜ, ಆದರೆ ಇದರ ಹೊರತಾಗಿಯೂ, ಅವರಿಗೆ ಪ್ರಾಪಂಚಿಕ ತಿಳುವಳಿಕೆ ಮತ್ತು ಅನುಭವದ ಕೊರತೆ ಇರುತ್ತೆ.  ಅದಕ್ಕಾಗಿಯೇ ನೀವು ಅನೇಕ ವಿಚಯಗಳನ್ನ ಮಕ್ಕಳಿಂದ ಮರೆಮಾಚಬೇಕಾಗಿದೆ.   ಮಕ್ಕಳು ಹದಿಹರೆಯಕ್ಕೆ ಕಾಲಿಡುವ ಮೊದಲು ನೀವು ಕೆಲವೊಂದು ವಿಷಯಗಳನ್ನ ಹಂಚಿಕೊಳ್ಳುವುದು ನಿಲ್ಲಿಸಿ.

 ಹಣಕಾಸಿನ ಸಮಸ್ಯೆಗಳು

ಕುಟುಂಬದಲ್ಲಿ  ಆರ್ಥಿಕ ಸಮಸ್ಯೆ ಎದುರಾದರೆ ಮಕ್ಕಳ ಮುಂದೆ ಮತ್ತೆ ಮತ್ತೆ ಹೇಳಿಕೊಳ್ಳಬೇಡಿ. ಇದು ಮಕ್ಕಳ  ಮನಸ್ಸಿನ ಮೇಲೆ ಉದ್ದೇಶಪೂರ್ವಕವಲ್ಲದ ಭಾರವನ್ನು ಉಂಟುಮಾಡುತ್ತದೆ.  ಜಮೀನು -ಆಸ್ತಿ ವಿವಾದಗಳು ಅಥವಾ ಹಣಕಾಸಿನ ಅಡಚಣೆಗಳ ವಿಷಯವನ್ನು ಸಹ ಮಕ್ಕಳೊಂದಿಗೆ ಹಂಚಿಕೊಳ್ಳಬಾರದು. ಇದು ಮಗುವಿನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ, ಮನೆಯಲ್ಲಿ ಇಲ್ಲದ ಆತಂಕದ ವಾತಾವರಣ ಹೆಚ್ಚಾಗುತ್ತದೆ.

ಸಂಬಂಧಿಕರ ಜಗಳ

ಮಕ್ಕಳ ಮುಂದೆ ನಿಮ್ಮ ಆಪ್ತರು ಅಥವಾ ಕುಟುಂಬದ ಸದಸ್ಯರ ಬಗ್ಗೆ ಎಂದಿಗೂ ಕೆಟ್ಟದಾಗಿ  ಮಾತನಾಡಬೇಡಿ. ನಿಮಗೆ ಯಾರ ಜೊತೆಗಾದರೂ ಹೊಂದಿಕೆಯಾಗದಿದ್ದರೇ ಇದನ್ನ ನಿಮ್ಮ ಮಕ್ಕಳ ಮೇಲೆ ಹೇರಬೇಡಿ.  ಇದು ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.  ನೀವು ಇತರರನ್ನ ಹೇಗೆ ಚಿತ್ರಿಸುತ್ತೀರೋ ಮಕ್ಕಳು ಅದೇ ರೀತಿ ಯೋಚಿಸುತ್ತಾರೆ.  ಪರಿಣಾಮ, ಮಕ್ಕಳೂ ಸಹ ಅವರ ಮೇಲೆ ಕೆಟ್ಟ ಮನೊಭಾವನೆಯನ್ನ ಹೊಂದುತ್ತಾರೆ. ಸಂಬಂಧಿಕರೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸುತ್ತಾರೆ. ಇದರಿಂದ ಜನರೊಂದಿಗೆ ನಿಮ್ಮ ಸಂಬಂಧ ಹಾಳಾಗುವುದಲ್ಲದೇ ಮಕ್ಕಳ ಮೇಲೆ ಸಹ ಒಳ್ಳೆಯ ಅಭಿಪ್ರಾಯ ಮೂಡುವುದಿಲ್ಲ.

ಸಂಪೂರ್ಣ ಖಾತೆ ವಿವರಗಳು

ಮನೆಯಲ್ಲಿರುವ  ಚಿನ್ನಾಭರಣ, ಹಣ ಅಥವಾ ಬ್ಯಾಂಕ್ ಅಕೌಂಟ್ ಗಳ ಮಾಹಿತಿಯನ್ನ ನೀವು ಮಕ್ಕಳಿಗೆ ಎಂದಿಗೂ ಹಂಚಿಕೊಳ್ಳದಿರಿ.  ಎಟಿಎಂ, ಪಿನ್, ಪ್ರಮುಖ ಪಾಸ್‌ವರ್ಡ್‌ಗಳನ್ನ ಮಕ್ಕಳ ಮುಂದೆ ಇಡಬೇಡಿ. ಇದು ಮಕ್ಕಳು ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆಯೇ  ಬೇರೆಯವರೊಂದಿಗೆ ಹಂಚಿಕೊಳ್ಳಲು ಕಾರಣವಾಗುತ್ತದೆ.  ಇದು ನಿಮ್ಮ ಸುರಕ್ಷತೆಗೆ ರಿಸ್ಕ್ ತರಬಹುದು.  ಮಗು ಹಣ, ಚಿನ್ನಾಭರಣದಿಂದ ದೂರವಿದ್ದಷ್ಟೂ ಪೋಷಕರಿಗೆ ಕ್ಷೇಮ

ಬಾಲ್ಯದ ನ್ಯೂನತೆಗಳು

ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಬಾಲ್ಯದ ಕೆಲವು ದೌರ್ಬಲ್ಯಗಳನ್ನ ಹೇಳಿ ಬಿಡುತ್ತಾರೆ. ನೀನು ಹಾಸಿಗೆ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದೆಯಂತೆ. ಮೂಗಿನಲ್ಲಿ ಗೊಣ್ಣೆ ಸುರಿಸುತ್ತಿದ್ದಿಯಂತೆ,  ಚಿಕ್ಕವನಿದ್ದಾಗ ತೊದಲುತ್ತಿದ್ದೆಯಂತೆ  ಈ ರೀತಿ ಮಕ್ಕಳಿಗೆ ಇಂಥಹ ಹಳೆಯ ದೌರ್ಬಲ್ಯಗಳನ್ನ ನೆನಪಿಸಬಾರದು.  ತಮಾಷೆ ಮಾಡಬಾರದು. ವಿಶೇಷವಾಗಿ ಸಂಬಂಧಿಕರು ಮತ್ತು ಹೊರಗಿನವರ ಮುಂದೆ ಬೇಡವೇ ಬೇಡ.  ಇದು ಮಕ್ಕಳ ಮನಸ್ಸಿನಲ್ಲಿ ತಪ್ಪಿತಸ್ಥ ಭಾವನೆ ಮತ್ತು ಕೀಳರಿಮೆಗೆ ಕಾರಣವಾಗುತ್ತದೆ.

ಅನಾರೋಗ್ಯಕ್ಕೆ ಮಕ್ಕಳನ್ನ ಶಪಿಸಬೇಡಿ..  

ಯಾವಾಗಲೂ ಕಾಳಜಿ ವಹಿಸಬೇಕಾದ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮ ಮಗುವಿಗಿದ್ದರೆ ಅದಕ್ಕಾಗಿ ಮತ್ತೆ ಮತ್ತೆ ಹೀಯಾಳಿಸಬೇಡಿ – ನಮ್ಮ ಜೀವನಕ್ಕೆ ಹೊರೆಯಾಗಿದ್ದೀರಿ, ನಿನ್ನಿಂದ ತೊಂದರೆ ಎನ್ನುವಂತಹ ಮಾತುಗಳು  ಮಗುವಿನ ಮಾನಸಿಕತೆಯ ಮೇಲೆ ಆಘಾತವುಂಟುಮಾಡುತ್ತದೆ.  ಇದು ಮಗುವಿನ ಅಭಿವೃದ್ಧಿಗೂ ಹಿನ್ನಡೆಯುಂಟಾಗುತ್ತದೆ.

Related posts

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

June 19, 2026
ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

June 19, 2026
Tags: childrenKidsParents
ShareTweetSendShare
Join us on:

Related Posts

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

by Shwetha
June 19, 2026
0

ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಇದು ಇಡೀ ದಕ್ಷಿಣ ಭಾರತದ ಪಾಲಿನ ಅತ್ಯಂತ ಮಹತ್ವದ ಮತ್ತು ಆಯಕಟ್ಟಿನ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನಾವು ನೆರೆ...

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

by Shwetha
June 19, 2026
0

ರೈತರ ವಾಹನಗಳ ಮೇಲೆ ಟೋಲ್ ಸಂಗ್ರಹಿಸುವುದನ್ನು ವಿರೋಧಿಸಿ ಹಾಗೂ ಕೃಷಿ ವಾಹನಗಳಿಗೆ ಟೋಲ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಜೂನ್...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಅರ್ಜಿ ನಮೂನೆಯಲ್ಲಿ ಬದಲಾವಣೆ; ಹೆಚ್ಚುವರಿ ಮಾಹಿತಿಗೆ ಸರ್ಕಾರ ಸಿದ್ಧತೆ

by Shwetha
June 19, 2026
0

ರಾಜ್ಯದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಸರ್ಕಾರ ಅರ್ಜಿ ನಮೂನೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರಲು ಮುಂದಾಗಿದೆ. ಪ್ರಸ್ತುತ ಅರ್ಜಿ ನಮೂನೆಯಲ್ಲಿ ಫಲಾನುಭವಿಯ ಹೆಸರು, ವಿಳಾಸ, ಆಧಾರ್...

ಪಾಕಿಸ್ತಾನಿಗಳಿಂದ ಲೈಂಗಿಕ ಶೋಷಣೆ ಪ್ರಕರಣಗಳ ಕುರಿತು ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ; ಕಠಿಣ ಕ್ರಮಕ್ಕೆ ಆಗ್ರಹ

ಪಾಕಿಸ್ತಾನಿಗಳಿಂದ ಲೈಂಗಿಕ ಶೋಷಣೆ ಪ್ರಕರಣಗಳ ಕುರಿತು ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ; ಕಠಿಣ ಕ್ರಮಕ್ಕೆ ಆಗ್ರಹ

by Shwetha
June 19, 2026
0

ಬ್ರಿಟನ್ ಸಂಸದ ರೂಪರ್ಟ್ ಲೋವ್ ಅವರು ಪಾಕಿಸ್ತಾನ ಮೂಲದ ಪುರುಷರಿಂದ ಬ್ರಿಟನ್‌ನಲ್ಲಿ ನಡೆದಿರುವ ಲೈಂಗಿಕ ಶೋಷಣೆ ಪ್ರಕರಣಗಳ ಕುರಿತು ಸಂಸತ್ತಿನಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡಿದ...

ಮಂಡ್ಯ ಮೇಡಂಗೆ ಟಿಕೆಟ್ ಕೊಟ್ಟಿದ್ರೆ ನಾವೇನು ಬೇಡ ಅಂತಿದ್ವಾ? ಸುಮಲತಾ ಪರ ಬ್ಯಾಟ್ ಬೀಸಿದ ರೇವಣ್ಣ! ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿ: ರೇವಣ್ಣ ಅವರ ಈ ಅಚ್ಚರಿ ಮಾತಿನ ಹಿಂದಿದೆಯೇ ದೊಡ್ಡ ಪ್ಲಾನ್?

ಮಂಡ್ಯ ಮೇಡಂಗೆ ಟಿಕೆಟ್ ಕೊಟ್ಟಿದ್ರೆ ನಾವೇನು ಬೇಡ ಅಂತಿದ್ವಾ? ಸುಮಲತಾ ಪರ ಬ್ಯಾಟ್ ಬೀಸಿದ ರೇವಣ್ಣ! ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿ: ರೇವಣ್ಣ ಅವರ ಈ ಅಚ್ಚರಿ ಮಾತಿನ ಹಿಂದಿದೆಯೇ ದೊಡ್ಡ ಪ್ಲಾನ್?

by Shwetha
June 19, 2026
0

ಬೆಂಗಳೂರು: ರಾಜ್ಯಸಭಾ ಚುನಾವಣೆ ಹಾಗೂ ರಾಜ್ಯ ರಾಜಕೀಯದ ಬೆಳವಣಿಗೆಗಳ ಕುರಿತು ಮಾಜಿ ಸಚಿವ ಮತ್ತು ಶಾಸಕ ಹೆಚ್ ಡಿ ರೇವಣ್ಣ ಅವರು ಇಂದು ವಿಧಾನಸೌಧದಲ್ಲಿ ಸ್ಫೋಟಕ ಹೇಳಿಕೆಗಳನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram