69ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಕಿಸಾನ್ ಕಲ್ಯಾಣದ ಕುರಿತು ಬೆಳಕು ಚೆಲ್ಲಿದ ಪ್ರಧಾನಿ ಮೋದಿ
ಹೊಸದಿಲ್ಲಿ, ಸೆಪ್ಟೆಂಬರ್27: ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಕೃಷಿಗೆ ಸಂಬಂಧಿಸಿದ ವಿವಿಧ ಉಪಕ್ರಮಗಳು ರೈತರಿಗೆ ಹೇಗೆ ಸಹಾಯ ಮಾಡಿವೆ ಎಂದು ಪ್ರಧಾನಿ ವಿವರಿಸಿದರು. ಈ 69 ನೇ ಸಂಚಿಕೆಯಲ್ಲಿ, ಅವರು ದೇಶಸೇವೆಗಳು ಹಾಗೂ ಬಲಿದಾನಗಳ ಬಗ್ಗೆ ಆಧುನಿಕ-ಕಥೆ ರೂಪದಲ್ಲಿಯಾದರೂ ಅದರ ಮಹತ್ವವನ್ನು ಇಂದಿನ ಮಕ್ಕಳಿಗೆ ತಿಳಿ ಹೇಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ರಾಯಲ್ಸ್ ತಂಡದ ಈ ಆಟಗಾರ ಚಾಂಪಿಯನ್… ಆದ್ರೂ ಟೀಮ್ ಇಂಡಿಯಾದಲ್ಲಿ ಯಾಕೆ ಆಡಿಲ್ಲ..?
ರೈತರು ಈಗ ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಮತ್ತು ಯಾರಿಗಾದರೂ ಮಾರಾಟ ಮಾಡುವ ಅಧಿಕಾರವನ್ನು ಹೊಂದಿದ್ದಾರೆ. ಯಾವುದೇ ಬೆಳೆ ಬೆಳೆಯಲು ಮತ್ತು ಅದನ್ನು ಸೂಕ್ತವಾದ ಬೆಲೆಗೆ ಮಾರಾಟ ಮಾಡಲು ಅವರಿಗೆ ಸ್ವಾತಂತ್ರ್ಯವಿದೆ ಎಂದು ಪಿಎಂ ಮೋದಿ ಹೇಳಿದರು.
ತಮ್ಮ ಮನ್ ಕಿ ಬಾತ್ ಪ್ರಸಾರದ ಸಂದರ್ಭದಲ್ಲಿ ವಿವಿಧ ವಿಷಯಗಳ ಕುರಿತು ಮಾತನಾಡಿದ ಮೋದಿ, ಕೆಲವು ವರ್ಷಗಳ ಹಿಂದೆ ಕೆಲವು ರಾಜ್ಯಗಳಲ್ಲಿ ಹಣ್ಣುಗಳು, ತರಕಾರಿಗಳನ್ನು ಎಪಿಎಂಸಿ ಕಾಯ್ದೆಯಿಂದ ಹೊರಗೆ ತರಲಾಯಿತು. ಇದೀಗ ಬದಲಾಗಿದೆ, ರೈತರಿಗೆ ಹಣ್ಣುಗಳು / ತರಕಾರಿಗಳನ್ನು ಮಾತ್ರವಲ್ಲದೆ ಅಕ್ಕಿ, ಗೋಧಿ, ಸಾಸಿವೆ, ಕಬ್ಬಿನಂತೆ ಬೆಳೆಯುವ ಯಾವುದನ್ನಾದರೂ ಉತ್ತಮ ಬೆಲೆ ನೀಡುವ ,ಯಾರಿಗಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಐಪಿಎಲ್ 2020- ಬೌಲರ್ ಗಳನ್ನು ಚೆಂಡಾಡಲು ರೋಹಿತ್ ಬತ್ತಳಿಕೆಯಲ್ಲಿದೆ 9 ಬ್ಯಾಟ್ಸ್ ಗಳು
ದೇಶದ ಕೃಷಿ ಕ್ಷೇತ್ರವನ್ನು ಬಲಪಡಿಸಿದ್ದಕ್ಕಾಗಿ ರೈತರನ್ನು ಶ್ಲಾಘಿಸಿದ ಪಿಎಂ ಮೋದಿ, ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಯತ್ನಗಳಲ್ಲಿ ಕೃಷಿ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಕೃಷಿ ಕ್ಷೇತ್ರವು ಮತ್ತೆ ತನ್ನ ಪರಾಕ್ರಮವನ್ನು ತೋರಿಸಿದೆ. ನಮ್ಮ ಕೃಷಿ ಕ್ಷೇತ್ರ, ನಮ್ಮ ರೈತರು, ನಮ್ಮ ಗ್ರಾಮಗಳು ಆತ್ಮನಿರ್ಭಾರ ಭಾರತದ ಅಡಿಪಾಯ. ಅವು ಪ್ರಬಲವಾಗಿದ್ದರೆ, ಆತ್ಮಾ ನಿರ್ಭಾರ್ ಭಾರತದ ಅಡಿಪಾಯವೂ ಬಲವಾಗಿರುತ್ತದೆ ಎಂದು ಪಿಎಂ ಮೋದಿ ಹೇಳಿದರು . ಕೃಷಿಯಲ್ಲಿ ತಂತ್ರಜ್ಞಾನದ ಹೆಚ್ಚಿನ ಬಳಕೆಯಿಂದ ಕೃಷಿ ಕ್ಷೇತ್ರಕ್ಕೆ ಅಪಾರ ಲಾಭವಾಗಲಿದೆ ಎಂದರು.