ಮದುವೆಯಾಗಲು ಇಷ್ಟವಿಲ್ಲವೆಂದು ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಜೈಲು ಸಿಬ್ಬಂದಿ
ಗ್ವಾಲಿಯರ್: ಮಧ್ಯಪ್ರದೇಶದ ರೇವಾ ಜಿಲ್ಲೆಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಆಘಾತಕಾರಿ ಘಟನೆ ಸಂಭವಿಸಿದೆ. ಸುಮಾರು ಒಂದು ಗಂಟೆಗೆ, ಗ್ವಾಲಿಯರ್ ನಿವಾಸಿ ಜೈಲು ಸಿಬ್ಬಂದಿ ಸುರೇಂದ್ರ ಸಿಂಗ್ ತೋಮರ್ ಸಂಜಯ್ ಗಾಂಧಿ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಆತನಿಂದ ಪೊಲೀಸರಿಗೆ ಆತ್ಮಹತ್ಯೆ ಪತ್ರವೂ ಬಂದಿದೆ. ಆತ್ಮಹತ್ಯೆ ಪತ್ರದಲ್ಲಿ ಆತ ತಾನು ಅನಾರೋಗ್ಯದಿಂದ ಬಳಲುತ್ತಿದ್ದು, ಮದುವೆಯಾಗಲು ಇಷ್ಟವಿರಲಿಲ್ಲ. ಈ ಕಾರಣದಿಂದ ತಾನು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾನೆ.

ವರದಿಗಳ ಪ್ರಕಾರ, ಜೈಲು ಸಿಬ್ಬಂದಿ ಮೇ 7 ರಂದು ಗ್ವಾಲಿಯರ್ ನಲ್ಲಿ ಮದುವೆಯಾಗಬೇಕಿತ್ತು. ಸಂಜಯ್ ಗಾಂಧಿ ಆಸ್ಪತ್ರೆಯ ಸಿಎಮ್ಒ ಡಾ.ಅತುಲ್ ಸಿಂಗ್, ನಾಲ್ಕನೇ ಮಹಡಿಯಿಂದ ಜಿಗಿದ ಕಾರಣ ದೇಹದಿಂದ ಸಾಕಷ್ಟು ರಕ್ತಸ್ರಾವವಾಗಿದ್ದು, ಆತನ ಸಾವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಠಾಣೆ ಉಸ್ತುವಾರಿ ಅಮ್ಹಿಯಾ ಶಿವ ಅಗರ್ವಾಲ್ ತಿಳಿಸಿದ್ದಾರೆ. ಸುರೇಂದ್ರ ಸಿಂಗ್ ತಂದೆಯ ಹೆಸರಿಗೆ ಆತ್ಮಹತ್ಯೆ ಪತ್ರ ಬರೆದಿದ್ದಾನೆ.

ಪತ್ರದಲ್ಲಿ, ನಾನು ಮದುವೆಯಾಗಲು ಬಯಸುವುದಿಲ್ಲ. ಏಪ್ರಿಲ್ 1 ರಿಂದ ನನಗೆ ಮೂತ್ರದಲ್ಲಿ ರಕ್ತ ಕಾಣಿಸಿಕೊಂಡಿದೆ. ಅದು ನಂತರ ಗಂಭೀರ ಕಾಯಿಲೆಯ ರೂಪವನ್ನು ಪಡೆಯಬಹುದು. ಆದ್ದರಿಂದ, ಮದುವೆಯಾಗುವ ಮೂಲಕ ಯಾರ ಜೀವನವನ್ನು ಹಾಳುಮಾಡಲು ನಾನು ಬಯಸುವುದಿಲ್ಲ ಎಂದು ಬರೆದಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ಇಮ್ಯುನಿಟಿ ಬೂಸ್ಟರ್ ಡ್ರಿಂಕ್ಸ್#Saakshatv #healthtips #ImmunityBoosterDrinks https://t.co/T9iVoNZHuW
— Saaksha TV (@SaakshaTv) April 16, 2021
https://twitter.com/SaakshaTv/status/1382898249002995717?s=19
ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ – ಮುಂಬೈ ತೊರೆದು ಬೆಂಗಳೂರಿಗೆ ಹಾರಿದ ದೀಪಿಕಾ – ರಣವೀರ್ ಜೋಡಿ#Maharashtracurfew #DeepikaPadukone https://t.co/kxvhIRddmi
— Saaksha TV (@SaakshaTv) April 16, 2021
ಆವತೀಯತೆ ಆರಂಭದ ಮುಂದುವರೆದ ಭಾಗ..#Saakshatv #aavathiyathe #ವಿಪ್ರಭಾ #ಆವತೀಯತೆ https://t.co/Sr9ri1vMtx
— Saaksha TV (@SaakshaTv) April 19, 2021
#prisonguard #suicidenote








