ಗೌಂಡವಾಡ ಗ್ರಾಮದಲ್ಲಿ ಸತೀಶ್ ಪಾಟೀಲ್ ಹತ್ಯೆ ಪ್ರಕರಣ ಹಿನ್ನೆಲೆ , ಬೆಳಗಾವಿ ಡಿಸಿ ಕಚೇರಿ ಮುಂದೆ ಗ್ರಾಮಸ್ಥರ ನೇತೃತ್ವದಲ್ಲಿ ಸತೀಶ್ ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ..
ನಮಗೆ ನ್ಯಾಯಬೇಕೆಂದು ಸತೀಶ್ ಕುಟುಂಬಸ್ಥರು ಗೋಳಾಡಿದ್ದಾರೆ.. ಸತೀಶ್ ಪತ್ನಿ ಸ್ನೇಹಾ, ತಾಯಿ ನಳಿನಿ ಕಣ್ಣೀರಿಟ್ಟಿದ್ದಾರೆ.. ಸತೀಶ್ ಹಂತಕರಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಆಕ್ರೋಶ ಹೊರಹಾಕಿದ್ದಾರೆ.
ಸತೀಶ್ ಕುಟುಂಬಸ್ಥರಿಗೆ ಗ್ರಾಮದ ಮಹಿಳೆಯರು ಸಾಥ್ ನೀಡಿದ್ದಾರೆ.. ಪ್ರಕರಣ ಸಂಬಂಧ ಈಗಾಗಲೇ 10 ಜನ ಆರೋಪಿಗಳ ಬಂಧನವಾಗಿದೆ.. ಪೊಲೀಸರು ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ..
ನಮಗೆ ಪೊಲೀಸರಿಂದ, ಆರೋಪಿಗಳಿಂದಲೂ ಭಯವಿದೆ ಎಂದು ಆರೋಪ ಕೂಡ ಮಾಡಿದ್ದಾರೆ.. ಈ ಬಗ್ಗೆ ಬೆಳಗಾವಿ ಡಿಸಿಗೆ ಗೌಂಡವಾಡ ಗ್ರಾಮಸ್ಥರು ಮನವಿ ಮಾಡಿದ್ದಾರೆ..