ADVERTISEMENT
Saturday, July 19, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಅಲ್ಲು ಅವರನ್ನ ನಾನು ಸೆಟ್ ನಲ್ಲಿ ನೋಡಿಯೇ ಇಲ್ಲ , ‘ಪುಷ್ಪ’ನನ್ನ ಮಾತ್ರ ನೋಡ್ತಿದ್ದೆ : ಡಾಲಿ

Namratha Rao by Namratha Rao
December 16, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Related posts

ಜನಾರ್ಧನರೆಡ್ಡಿ ಜೊತೆ ಪುನಃ ದೋಸ್ತಿ ಬಗ್ಗೆ ಶ್ರೀರಾಮುಲು ಸ್ಪಷ್ಟನೆ: ವೈಮನಸ್ಸೇನಿಲ್ಲ, ಪಕ್ಷಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ

ಜನಾರ್ಧನರೆಡ್ಡಿ ಜೊತೆ ಪುನಃ ದೋಸ್ತಿ ಬಗ್ಗೆ ಶ್ರೀರಾಮುಲು ಸ್ಪಷ್ಟನೆ: ವೈಮನಸ್ಸೇನಿಲ್ಲ, ಪಕ್ಷಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ

July 18, 2025
ಡ್ರೈವರ್ ಹುದ್ದೆಗಳ ನೇಮಕಾತಿ 2025 – ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು

ಡ್ರೈವರ್ ಹುದ್ದೆಗಳ ನೇಮಕಾತಿ 2025 – ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು

July 18, 2025

ಅಲ್ಲು ಅವರನ್ನ ನಾನು ಸೆಟ್ ನಲ್ಲಿ ನೋಡಿಯೇ ಇಲ್ಲ , ‘ಪುಷ್ಪ’ನನ್ನ ಮಾತ್ರ ನೋಡ್ತಿದ್ದೆ : ಡಾಲಿ

ಭಾರತೀಯ ಸಿನಿಮಾರಂಗದಲ್ಲಿ ಸದ್ಯ ಪುಷ್ಪ ಹವಾ ಜೋರಿದೆ.. ನಾಳೆ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಅಬ್ಬರಿಸಲಿದೆ.. ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ನಟನೆಯ , ಸುಕುಮಾರ್ ನಿರ್ದೇಶನ , ಮೈತ್ರಿ ಮೂವೀಸ್ ನಿರ್ಮಾಣದ  ಈ ಸಿನಿಮಾದಲ್ಲಿ  ಕನ್ನಡದ ಡಾಲಿ ಧನಂಜಯ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.. ಸಿನಿಮಾತಂಡ ಭರ್ಜರಿ ಪ್ರಚಾರ ಮಾಡ್ತಿದ್ದು, ಇದರ ಅಂಗವಾಗಿ  ಅಲ್ಲು ಅರ್ಜುನ್ , ಡಾಲಿ, ರಶ್ಮಿಕಾ ಅಂಡ್ ಟೀಮ್ ನಿನ್ನೆ ಬೆಂಗಳೂರಿಗೆ ಆಗಮಿಸಿದ್ರು..

ಬೆಂಗಳೂರಿನಲ್ಲಿ ಪ್ರಚಾರ ಕಾರ್ಯಕ್ರಮವೂ ಅದ್ಧೂರಿಯಾಗಿ ನೆರವೇರಿತು.. ಈ ವೇಳೆ ಡಾಲಿ ಧನಂಜಯ್ ಸಿನಿಮಾದಲ್ಲಿ ತಮ್ಮ ಅನುಭವ ಹಂಚಿಕೊಂಡರು , ನಿರ್ದೇಶಕ ಸುಕುಮಾರ್ , ನಟಿ ರಶ್ಮಿಕಾ ಹಾಗೂ ನಟ ಅಲ್ಲು ಬಗ್ಗೆಯೂ ಮಾತನಾಡಿದ್ರೂ.. ಡಾಲಿ ಧನಂಜಯ್ , ‘ನಿರ್ದೇಶಕ ಸುಕುಮಾರ್ ಅವರು ಕರೆದು ನೀನು ಪುಷ್ಪ ಸಿನಿಮಾದ ಭಾಗವಾಗಬೇಕು ಎಂದು ಹೇಳಿದಾಗ ನನಗೆ ಬಹಳ ಖುಷಿಯಾಯಿತು. ಆರ್ಯ ಸಿನಿಮಾದಿಂದಲೂ ನಾನು ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಅವರನ್ನು ಫಾಲೋ ಮಾಡುತ್ತಿದ್ದೀನಿ. ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ ನಾನೂ ಕಲಿಯುತ್ತಿರುತ್ತೇನೆ. ಹಾಗೆಯೇ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಜೊತೆಗೆ ನಟಿಸಿ ನಾನು ಸಾಕಷ್ಟು ಕಲಿತೆ’ ಎಂದಿದ್ದಾರೆ..

ಅಲ್ಲದೇ ‘ಪುಷ್ಪ ಸಿನಿಮಾದ ಸೆಟ್ ನಲ್ಲಿ ಅಲ್ಲು ಅರ್ಜುನ್ ಅವರನ್ನ ನಾನೂ ನೋಡಿಯೇ ಇಲ್ಲ.. ಅಲ್ಲಿ ಅವರು ನನಗೆ ಸದಾ ಪುಷ್ಪ ಆಗಿಯೇ ಕಾಣುತ್ತಿದ್ದರು. ರಶ್ಮಿಕಾ ಮಂದಣ್ಣ ಸಹ ಯಾವಾಗಲೂ ಶ್ರೀವಲ್ಲಿಯಾಗಿ ಕಾಣಿಸಿದರು. ಅದೊಂದು ಅದ್ಭುತವಾದ ಜಗತ್ತು. ಪುಷ್ಪನ ಜಗತ್ತನ್ನು ಸೃಷ್ಟಿಸಲು ಅವರೆಲ್ಲ ಪಡುತ್ತಿದ್ದ ಕಷ್ಟ ನನಗೆ ಬಹಳ ಖುಷಿ ಕೊಟ್ಟಿತು’ ಎಂದಿದ್ದಾರೆ.

ಅಲ್ಲದೇ ‘ಎಷ್ಟೋ  ಸರತಿ ನನಗೇ ಅನ್ನಿಸುತ್ತದೆ ಸಾಕು ಬಿಡಪ್ಪ ಎಷ್ಟು ಶಾಟ್ ಕೊಡುವುದು ಎಂದು. ಆದರೆ ಅಲ್ಲು ಅರ್ಜುನ್ ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಪ್ರತಿಯೊಂದು ಶಾಟ್‌ಗೂ ತಮ್ಮ ಪೂರ್ಣ ಪ್ರಮಾಣದ ಶ್ರಮ ಹಾಕುತ್ತಿದ್ದುದು ಅದ್ಭುತ. ಅವರನ್ನು ಈಗಾಗಲೇ ಸ್ಟಾರ್ ನಟನಾಗಿ ಜನ ಸ್ವೀಕರಿಸಿ ಆಗಿದೆ. ಅವರು ಹೇಗೆ ಮಾಡಿದರೂ ಜನ ಒಪ್ಪುತ್ತಾರೆ. ಆದರೂ ಅವರು ತಮ್ಮ ಪೂರ್ಣ ಶ್ರಮವನ್ನು ಸಿನಿಮಾಕ್ಕಾಗಿ ಹಾಕುತ್ತಿದ್ದರು. ಅವರ ಎನರ್ಜಿ ಅದ್ಭುತ’ ಎಂದು ಅಲ್ಲು ಅರ್ಜುನ್  ಅವರನ್ನ ಕೊಂಡಾಡಿದ್ದಾರೆ ಡಾಲಿ.

ಇದೇ ವೇಳೆ  ಅಲ್ಲು ಅರ್ಜುನ್‌ ಗೆ ‘ಐಕಾನ್ ಸ್ಟಾರ್’ ಎಂದು ಬಿರುದು ಕೊಟ್ಟಿರುವುದು ಸರಿಯಾಗಿಯೇ ಇದೆ. ಅವರ ಶ್ರಮಕ್ಕೆ, ಅವರ ತೊಡಗಿಸಿಕೊಳ್ಳುವಿಕೆಗೆ, ಏಕಾಗ್ರತೆಗೆ ಅವರು ಎಲ್ಲರಿಗೂ ಐಕಾನ್ ಎಂದಿದ್ದಾರೆ. ಬಳಿಕ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಡಾಲಿ, ಸಿನಿಮಾದಲ್ಲಿ ನಾನು ಜಾಲಿ ರೆಡ್ಡಿ ಹೆಸರಿನ ಪಾತ್ರದಲ್ಲಿ ನಟಿಸಿದ್ದೇನೆ. ಸಿನಿಮಾದಲ್ಲಿ ನಟಿಸಿದ್ದನ್ನು,  ಸೆಟ್‌ನಲ್ಲಿ ಇದ್ದಷ್ಟು ದಿನ ಎಲ್ಲವನ್ನೂ ಬಹಳ ಚೆನ್ನಾಗಿ ಎಂಜಾಯ್ ಮಾಡಿದ್ದೇನೆ. ಎಲ್ಲರೂ ಸಿನಿಮಾ ನೋಡುತ್ತಾರೆ, ದೇಶದಲ್ಲಿಯೇ ಈ ಸಿನಿಮಾ ಒಳ್ಳೆಯ ಹಿಟ್ ಆಗುತ್ತದೆಂಬ ನಿರೀಕ್ಷೆ ಇದೆ ಎಂದಿದ್ದಾರೆ..

Tags: #saakshatvAllu ArjunbenagluruPRESS MEETpushpa - dolly dhananjayRashmikaSandalwoodTollywood
ShareTweetSendShare
Join us on:

Related Posts

ಜನಾರ್ಧನರೆಡ್ಡಿ ಜೊತೆ ಪುನಃ ದೋಸ್ತಿ ಬಗ್ಗೆ ಶ್ರೀರಾಮುಲು ಸ್ಪಷ್ಟನೆ: ವೈಮನಸ್ಸೇನಿಲ್ಲ, ಪಕ್ಷಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ

ಜನಾರ್ಧನರೆಡ್ಡಿ ಜೊತೆ ಪುನಃ ದೋಸ್ತಿ ಬಗ್ಗೆ ಶ್ರೀರಾಮುಲು ಸ್ಪಷ್ಟನೆ: ವೈಮನಸ್ಸೇನಿಲ್ಲ, ಪಕ್ಷಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ

by Shwetha
July 18, 2025
0

ರಾಜ್ಯ ರಾಜಕಾರಣದಲ್ಲಿ ಮತ್ತೆ ಜನಾರ್ಧನರೆಡ್ಡಿ ಮತ್ತು ಶ್ರೀ ರಾಮುಲು ಒಂದಾಗುವ ನಿರೀಕ್ಷೆ ಮೂಡಿದೆ. ಕೆಲ ಸಮಯದ ಹಿಂದೆ ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ದೂರವಾಗಿದ್ದ ಗಾಲಿ ಜನಾರ್ಧನರೆಡ್ಡಿ ಮತ್ತು ಬಿ...

ಡ್ರೈವರ್ ಹುದ್ದೆಗಳ ನೇಮಕಾತಿ 2025 – ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು

ಡ್ರೈವರ್ ಹುದ್ದೆಗಳ ನೇಮಕಾತಿ 2025 – ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು

by Shwetha
July 18, 2025
0

BEL Driver Recruitment 2025 – ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವರತ್ನ ಪಿಎಸ್ಯೂ ಸಂಸ್ಥೆ ಆಗಿದ್ದು, ತನ್ನ...

ಜುಲೈ 1ರಿಂದ ಜಾರಿಗೆ ಹೊಸ ಜಮೀನು ಖರೀದಿ-ಮಾರಾಟ ರೂಲ್ಸ್: ಮುದ್ರಾಂಕ ಸುಂಕ, ನೋಂದಣಿ ಶುಲ್ಕದಲ್ಲಿ ಬದಲಾವಣೆ

ಜುಲೈ 1ರಿಂದ ಜಾರಿಗೆ ಹೊಸ ಜಮೀನು ಖರೀದಿ-ಮಾರಾಟ ರೂಲ್ಸ್: ಮುದ್ರಾಂಕ ಸುಂಕ, ನೋಂದಣಿ ಶುಲ್ಕದಲ್ಲಿ ಬದಲಾವಣೆ

by Shwetha
July 18, 2025
0

2025ರ ಜುಲೈ 1ರಿಂದ ದೇಶದಲ್ಲಿ ಜಮೀನು ಖರೀದಿ ಮತ್ತು ಮಾರಾಟ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಯಾಗಿವೆ. ಕೇಂದ್ರ ಸರ್ಕಾರದ ಈ ಹೊಸ ಕ್ರಮದಿಂದ ಖರೀದಿದಾರರು ಹಾಗೂ ಮಾರಾಟಗಾರರಿಗೆ...

ಕರ್ನಾಟಕ ಕಾಂಗ್ರೆಸ್ ಇಡೀ ದೇಶಕ್ಕೆ ಮಾದರಿ – ಡಿ.ಕೆ. ಶಿವಕುಮಾರ್ ಹೇಳಿಕೆ

ಕರ್ನಾಟಕ ಕಾಂಗ್ರೆಸ್ ಇಡೀ ದೇಶಕ್ಕೆ ಮಾದರಿ – ಡಿ.ಕೆ. ಶಿವಕುಮಾರ್ ಹೇಳಿಕೆ

by Shwetha
July 18, 2025
0

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ...

ಸಿದ್ದರಾಮಯ್ಯ – ಯಡಿಯೂರಪ್ಪ ನಡುವೆ ‘ಹೊಂದಾಣಿಕೆ ರಾಜಕಾರಣ’ ನಡೆಯುತ್ತಿದೆ:  ಯತ್ನಾಳ್ ಗಂಭೀರ ಆರೋಪ

ಸಿದ್ದರಾಮಯ್ಯ – ಯಡಿಯೂರಪ್ಪ ನಡುವೆ ‘ಹೊಂದಾಣಿಕೆ ರಾಜಕಾರಣ’ ನಡೆಯುತ್ತಿದೆ: ಯತ್ನಾಳ್ ಗಂಭೀರ ಆರೋಪ

by Shwetha
July 18, 2025
0

ರಾಜ್ಯ ರಾಜಕಾರಣದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸುವಂತ ಆರೋಪಗಳನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡುವೆ ರಾಜಕೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram