ರಹಾನೆ.. ಪೂಜಾರಗೆ ಲಾಸ್ಟ್ ಚಾನ್ಸ್.. ಮಿಂಚಲೇಬೇಕು Rahane saaksha tv
ಭಾರತದ ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ ನಲ್ಲಿ ರಹಾನೆ ಗೋಲ್ಡನ್ ಡಕ್ ಆಗಿದ್ದರೆ, ಪೂಜಾರ ಕೇವಲ 3 ರನ್ಗಳಿಗೆ ಪೆವಿಲಿಯನ್ ಸೇರಿದರು.
ಈ ಬಗ್ಗೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್ ತಂಡವನ್ನು ಆಯ್ಕೆ ಮಾಡುವ ಮುನ್ನ ಪೂಜಾರ, ರಹಾನೆ ಸ್ಥಾನದ ಬಗ್ಗೆ ಅನುಮಾನಗಳಿದ್ದವು.
ಆದರೆ, ವಿದೇಶದಲ್ಲಿ ಅವರಿಗಿರುವ ಅನುಭವದಿಂದಾಗಿ ಈ ಹಿರಿಯ ಆಟಗಾರರಿಗೆ ಸ್ಥಾನ ಸಿಕ್ಕಿದೆ. ಆದರೆ, ಈ ಅವಕಾಶವನ್ನು ಈ ಇಬ್ಬರು ಬಳಸಿಕೊಳ್ಳಲು ವಿಫಲರಾಗುತ್ತಿದ್ದಾರೆ.
ಈ ಬಗ್ಗೆ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿ, ಈ ಇಬ್ಬರಿಗೆ ಲಾಸ್ಟ್ ಚಾನ್ಸ್ ಎಂದಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ಇಬ್ಬರಿಗೂ ನಿರ್ಣಾಯಕವಾಗಲಿದೆ.
ಯುವ ಆಟಗಾರರು ಮಿಂಚುತ್ತಿರುವ ಹಿನ್ನೆಲೆಯಲ್ಲಿ ರಹಾನೆ, ಪೂಜಾರ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ.
“ಪೂಜಾರ ಮತ್ತು ರಹಾನೆ ಇಬ್ಬರೂ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಉಳಿಸಿಕೊಳ್ಳಲು ಎರಡನೇ ಇನ್ನಿಂಗ್ಸ್ ನಿರ್ಣಾಯಕವಾಗಿದೆ.
ಅವರು ಮುಂದಿನ ಇನ್ನಿಂಗ್ಸ್ನಲ್ಲಿ ರನ್ ಗಳಿಸಲೇಬೇಕು . ಇಲ್ಲದಿದ್ದರೆ ಅವರು ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಗಾವಸ್ಕರ್ ತಿಳಿಸಿದ್ದಾರೆ.