Raichur | ಅಕ್ಕಿ ಮೂಟೆ ಬಿದ್ದು ಕೂಲಿ ಕಾರ್ಮಿಕರು ಸಾವು
ರಾಯಚೂರು : ಅಕ್ಕಿ ಮೂಟೆಗಳು ಬಿದ್ದು ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ರಾಯಚೂರಿನ ಮನ್ಸಲಾಪುರ ರಸ್ತೆಯಲ್ಲಿರುವ ರೈಸ್ ಮಿಲ್ ನಲ್ಲಿ ನಡೆದಿದೆ.
40 ವರ್ಷದ ಬಿಹಾರ ಮೂಲದ ಉಪೇಂದ್ರ, 25 ವರ್ಷದ ನಿತೇಶ್ ಮೃತ ಕಾರ್ಮಿಕರಾಗಿದ್ದಾರೆ.
ರಾಯಚೂರು ಹೊರವಲಯದ ಮದರ್ ಡೈರಿ ರೈಸ್ ಮಿಲ್ ನಲ್ಲಿ ಈ ಘಟನೆ ನಡೆದಿದೆ.
ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರೀಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.
ಈ ಸಂಬಂಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಕಿ ಮೂಟೆಗಳು ಹೇಗೆ ಬಿದ್ದಿವೆ ಅನ್ನೋದಕ್ಕೆ ಕಾರಣ ತಿಳಿದು ಬಂದಿಲ್ಲ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.